ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 02 : ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿ ಮಾರ್ಚ್ 04 ರಂದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ.

ಮಾರ್ಚ್ 03 ರಂದು ಮಧ್ಯಾನ್ಹ 01 ಗಂಟೆಗೆ ಗಂಗಾಪೂಜೆಯ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಹೂವಿನ ಪಲ್ಲಕ್ಕಿಯೊಂದಿಗೆ ಮಹೇಶ್ ವಡ್ಡರ ಸಿದ್ದವ್ಚನಹಳ್ಳಿ ತಂಡದವರೊಂದಿಗೆ ವೀರಗಾಸೆಯೊಂದಿಗೆ ಶ್ರೀ ಸ್ವಾಮಿಯ ಮೆರವಣಿಗೆ, ರಾತ್ರಿ 08 ಗಂಟೆ ರುದ್ರಹೋಮ, ಗದ್ದುಗೆಗೆ ರುದ್ರಾಭಿಷೇಕ. ರಾತ್ರಿ ಪ್ರಸಾದ ವಿನಿಯೋಗದ ನಂತರ ಗ್ರಾಮದ ವಾಸಿ ಅಜ್ಜನ ಓಬಯ್ಯ ಮತ್ತು ಸಂಗಡಿಗರಿಂದ ಹಾಗೂ ಗ್ರಾಮಸ್ಥರಿಂದ ಅಖಂಡ ಭಜನೆ ನಡೆಯುತ್ತದೆ.

ಮಾರ್ಚ್ 04 ರಂದು ಸಂಜೆ 4ಕ್ಕೆ ಬ್ರಹ್ಮ ರಥೋತ್ಸವ, ಬಳಿಕ ಗುರುಗಳಾದ ಶ್ರೀ ತಿಪ್ಪೇರುದ್ರಸ್ವಾಮಿ ಅವರಿಂದ ದೀಕ್ಷಾ ಕಾರ್ಯಕ್ರಮ. ನೆಲಗೇತನಹಟ್ಟಿ ಶ್ರೀ ಚನ್ನಕೇಶವಸ್ವಾಮಿ ಕಲಾ ಸಂಘದಿಂದ ಕೋಲಾಟ ಪ್ರದರ್ಶನ ಇರುತ್ತದೆ ಎಂದು ಮಠದ ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


