Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅವಳು ನನ್ನ ಜೊತೆಗೆ ಮಾತನಾಡಲ್ಲ ಎಂದಳು : ನೇಹಾ ಕೊಲೆಯ ಬಗ್ಗೆ ಫಯಾಜ್ ಹೇಳಿದ್ದೇನು..?

Facebook
Twitter
Telegram
WhatsApp

ಧಾರವಾಡ: ನೇಹಾ ಕೊಲೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಆರೋಪಿಗೆ ಗಲ್ಲು ಶಿಕ್ಷೆಯಾಗಲೇಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ. ಇದರ ನಡುವೆ ಕೊಲೆ ಆರೋಪಿ ಫಯಾಜ್ ತಾನೇಕೆ ನೇಹಾಳನ್ನು ಕೊಲೆ ಮಾಡಿದೆ ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.

 

ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರುವ ಫಯಾಜ್ ವಿಚಾರಣೆ ವೇಳೆ ಕೊಲೆ ಮಾಡಿದ ಕಾರಣ ಬಾಯ್ಬಿಟ್ಟಿದ್ದಾನೆ. ‘ಅವಳು ನನ್ನ ಜೊತೆಗೆ ಮಾತನಾಡಲ್ಲ ಎಂದಳು ಅದಕ್ಕೆ ಚಾಕು ಹಾಕಿದೆ. ಒಂದು ವಾರದ ಹಿಂದೆಯೇ ಕಾಲೇಜು ಬಿಟ್ಟಿದ್ದೆ. ವಾರದ ಹಿಂದೆ ಕಾಲೇಜಿಗೆ ಹೋಗಿ ನೇಹಾಳನ್ನು ಮಾತನಾಡಿಸುವುದಕ್ಕೆ ಪ್ರಯತ್ನಿಸಿದ್ದೆ. ಆದರೆ ಅವಳು ಅಂದು ನಿನ್ನ ಜೊತೆಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿ ಅವೈಡ್ ಮಾಡಿದ್ದಳು. ಏಪ್ರಿಲ್ 18ರಂದು ಪರೀಕ್ಷೆ ಬರೆಯುವುದಕ್ಕೆ ಅವಳು ಬಿವಿಬಿ ಕಾಲೇಜಿಗೆ ಬಂದಿದ್ದಳು. ಆಗಲು ಪರೀಕ್ಷೆ ಮುಗಿಯುವ ತನಕ ಕಾದಿದ್ದೆ. ಪರೀಕ್ಷೆ ಮುಗಿಸಿ, ಹೊರಗೆ ಬಂದ ಅವಳನ್ನು ಮಾತನಾಡಿಸಲು ಯತ್ನಿಸಿದೆ. ಮಾತನಾಡಲಿಲ್ಲ. ಅದಕ್ಕೆ ಚಾಕು ಇರಿದೆ. ಅವಳಿಗೆ ಚಾಕು ಹಾಕುವಾಗ ನನಗೂ ಕೈಕಾಲು ಗಾಯವಾಗಿದೆ. ಏನಾಗಿದೆ ಎಂಬುದು ಗೊತ್ತಿಲ್ಲ’ ಎಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

 

ಇನ್ನು ಫಯಾಜ್ ತಾಯಿ ಕೂಡ ಈ ಕೊಲೆ ಬಗ್ಗೆ ಮಾತನಾಡಿದ್ದು, ಮಗ ಮಾಡಿದ್ದು ದೊಡ್ಡ ತಪ್ಪು. ಆ ಹೆಣ್ಣು‌ಮಗು ಎಷ್ಟು ನರಳಿತೋ. ಅವನಿಗೆ ಶಿಕ್ಷೆಯಾಗಲಿ. ಆದರೆ ಇಬ್ಬರು ತುಂಬಾ ಪ್ರಿತೀ ಮಾಡುತ್ತಿದ್ದರು. ನಾನು ಮೊದಲು ಓದು ಅಂತಾನೆ ಹೇಳಿದ್ದೆ. ಆದರೆ ಈ ರೀತಿ ಮಾಡಿಕೊಂಡು ಕೂತಿದ್ದಾನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಮಕ್ಕಳಿಗಿಲ್ಲ ಗ್ರೇಸ್ ಮಾರ್ಕ್ಸ್..!

ಬೆಂಗಳೂರು: ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಕಳೆದ ಬಾರಿಗಿಂತ ಕಡಿಮೆ ಬಂದಿದೆ. ಅದರಲ್ಲೂ ಕಳೆದ ವರ್ಷಕ್ಕಿಂತ ಹೆಚ್ಚಿನ ಗ್ರೇಸ್ ಮಾರ್ಕ್ಸ್ ನೀಡಲಾಗಿದ್ದರು, ಫಲಿತಾಂಶ ಹೇಳಿಕೊಳ್ಳುವ ಮಟ್ಟಕ್ಕೆ ಬಂದಿಲ್ಲ. ಈ ಗ್ರೇಸ್ ಮಾರ್ಕ್ಸ್ ವಿಚಾರವಾಗಿ ಸಿಎಂ

ರಾಜಕೀಯ ನಿಂತ ನೀರಲ್ಲ, ಕೆಲವ ಬದಲಾವಣೆಗಳು ಅನಿವಾರ್ಯ : ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ. 17 :  ನಾನು ನನ್ನ ಶಾಸಕ ಸ್ಥಾನ ಅವಧಿ ಮುಗಿದ ಮೇಲೆ ಬೇರೆ ಪಕ್ಷಕ್ಕೆ

ಸಾಲ ಇರುವ ಜಮೀನು ನೀಡಿ ಜ್ಯೂ.ಎನ್ಟಿಆರ್ ಗೆ ಮೋಸ ಮಾಡಿದ ಯುವತಿ ವಿರುದ್ಧ ನಟ ದೂರು..!

ಜ್ಯೂ. NTR ಆಸ್ತಿಯೊಂದನ್ನು ಖರೀದಿಸಲು ಹೋಗಿ ಮೋಸ ಹೋಗಿದ್ದಾರೆ. ಇದೀಗ ಮೋಸ ಮಾಡಿದ ಯುವತಿ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ಆಸ್ತಿ ಮೇಲೆ ಕೋಟ್ಯಾಂತರ ರೂಪಾಯಿ ಸಾಲವಿದ್ದು, ನ್ಯಾಯ ಕೇಳುತ್ತಿದ್ದಾರೆ. ಜ್ಯೂ. NTR, ಆರ್

error: Content is protected !!