Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ – ಬಿಜೆಪಿ ನಾಯಕರ ನಡುವೆ ಅಕ್ಕಿ ಫೈಟ್..! ಯಾರು, ಏನೇಳಿದ್ರು..?

Facebook
Twitter
Telegram
WhatsApp

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೂ ಬರುವ ಮುನ್ನ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅದರಲ್ಲಿ ಅಕ್ಕಿ ಭಾಗ್ಯವೂ ಒಂದಾಗಿತ್ತು. ಆದರೆ ಈಗ ಅಕ್ಕಿ ಸಿಗದೆ ಆ ಯೋಜನೆಗೆ ಹಣ ನೀಡುತ್ತೇವೆ ಎನ್ನುತ್ತಿದೆ. ಈ ಬಗ್ಗೆ ಕಾಂಗ್ರೆಸ್ – ಬಿಜೆಪಿ ನಡುವೆ ಟಾಕ್ ವಾರ್ ಶುರುವಾಗಿದೆ.

ಈ ಬಗ್ಗೆ ಮಡಿಕೇರಿಯಲ್ಲಿ ಪ್ರತಾಪ್ ಸಿಂಹ ಮಾತನಾಡಿ, ನೀವು ಕೊಡ್ತೀವಿ ಅಂತ ಹೇಳಿದ್ದು 10 ಕೆಜಿ ಅಕ್ಕಿ. ಈಗ ಐದು ಕೆಜಿ ಅಕ್ಕಿ ಬಗ್ಗೆ ಮಾತನಾಡುತ್ತಿದ್ದೀರಿ. ಈಗಲಾದರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಿರಿ. ನೀವು ನುಡಿದಂತೆ 10 ಕೆಜಿ ಅಕ್ಕಿಗೆ ಹಣ ಹಾಕಿ. ಕೇಂದ್ರದ ಅಕ್ಕಿಗೆ ಅನ್ನ ಭಾಗ್ಯ ಲೇಬಲ್ ಹಾಕಬೇಡಿ ಎಂದಿದ್ದಾರೆ.

ಬಿಜೆಪಿ ನಾಯಕರ ಮಾತಿಗೆ ತಿರುಗೇಟು ನೀಡಿದ ಸಚಿವ ಎಂಬಿ ಪಾಟೀಲ್, ಅಕ್ಕಿ ಕೊಡದಿದ್ದರೆ ಹಣ ಕೊಡಿ ಅಂತ ಹೇಳಿಲ್ವಾ. ನಾವು ಹಣ ಕೊಡ್ತಿದ್ದೀವಿ. ಕೇಂದ್ರ ಬಡವರಿಗೆ ಮೋಸ ಮಾಡಿದೆ. ಅನಿವಾರ್ಯವಾಗಿ ಅಕ್ಕಿ ಬದಲು ಹಣ ಕೊಟ್ಟಿದ್ದೀವಿ. ಬಿಜೆಪಿಯವರು ಬ್ಲಾಕ್ ಮಾರ್ಕೆಟರ್ಸ್ ಇದ್ದ ಹಾಗೆ. ಅಕ್ಕಿ ಕೊಡದೆ ಕೇಂದ್ರ ಸರ್ಕಾರ ಮೋಸ ಮಾಡಿತು. ಅಕ್ಕಿ ಸಿಗುವವರೆಗೂ ಜನರ ಅಕೌಂಟಿಗೆ ಹಣ ಹಾಕ್ತಿವಿ. ಸಿಟಿ ರವಿ ಅಕ್ಕಿ ಸಿಗದಿದ್ದರೆ ಹಣ ಕೊಡಿ ಅಂತಿದ್ರು. ಈಗ ಹಣ ಕೊಡ್ತಿದ್ರೆ ಅಕ್ಕಿ ಕೊಡಿ ಅಂತಾರೆ. ಜನರಿಗೆ ಖುಷಿ ಇದೆ ಅವರಿಗೆ ಯಾವುದೇ ಬೇಸರವಿಲ್ಲ. ಬಿಜೆಪಿಯವರ ರಾಜಕೀಯಕ್ಕೆ ಪಾಠ ಕಲಿಸಿದ್ದೇವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

ಹೆಚ್ಚಾದ ಬಿಸಿಲು ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ : ವಿ.ಎ.ಪ್ರಕಾಶ್‍ರೆಡ್ಡಿ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಿಗ್ಗೆ ಆರು

error: Content is protected !!