Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

36 ವರ್ಷಗಳ ಸುದೀರ್ಘ ಸೇವೆಗೆ ನಿವೃತ್ತಿ: ಮುಖ್ಯಶಿಕ್ಷಕ ವೈ.ಟಿ. ಶಿವಕುಮಾರ್‌ ಗೆ ಬಿ.ಟಿ. ಶಫೀವುಲ್ಲಾ ಶುಭ ಹಾರೈಕೆ

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ.30: ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ 36 ವರ್ಷಗಳ ಕಾಲ ದಣಿವರಿಯದ, ಅತ್ಯಂತ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಆದರ್ಶ ಶಿಕ್ಷಕ ವೈ. ಟಿ. ಶಿವಕುಮಾರ್ ಅವರು ಇಂದು (ಮೇ 30) ತಮ್ಮ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಈ ಸುದೀರ್ಘ ಜ್ಞಾನದಾಸೋಹದ ಯಶಸ್ವಿ ಪಯಣವನ್ನು ಪೂರ್ಣಗೊಳಿಸಿರುವ ಅವರಿಗೆ ಅವರ ಬಾಲ್ಯದ ಗೆಳೆಯ, ಆಪ್ತಮಿತ್ರ ಹಾಗೂ ಶಿಕ್ಷಕರಾದ ಬಿ.ಟಿ. ಶಫೀವುಲ್ಲಾ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ.

ವೈ. ಟಿ. ಶಿವಕುಮಾರ್ ಅವರು ತಮ್ಮ ವೃತ್ತಿ ಜೀವನವನ್ನು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಆರಂಭಿಸಿದ್ದರು. ಆನಂತರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಾಳಪ್ಪನಹಳ್ಳಿ, ಚಳ್ಳಕೆರೆ ತಾಲೂಕಿನ ಬೂಕ್ಲೂರಹಳ್ಳಿ, ಚಿತ್ರದುರ್ಗ ತಾಲೂಕಿನ ಬಗ್ಗುಲರಂಗವ್ವನಹಳ್ಳಿ ಹಾಗೂ ಮುದ್ದಾಪುರದ ಮ್ಯಾಸರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಮೂರೂವರೆ ದಶಕಗಳಿಂದ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡುತ್ತಾ, ಜಿಲ್ಲೆಯಲ್ಲಿ ಮಾದರಿ ಶಿಕ್ಷಕರಾಗಿ ಅವರು ಗುರುತಿಸಿಕೊಂಡಿದ್ದಾರೆ.

ಅವರ ಸುದೀರ್ಘ ಸೇವೆ ಮತ್ತು ಹಿರಿತನವನ್ನು ಗೌರವಿಸಿ ಶಿಕ್ಷಣ ಇಲಾಖೆಯು ಕಳೆದ ಏಪ್ರಿಲ್ 30 ರಂದು ಅವರಿಗೆ ಮುಖ್ಯಶಿಕ್ಷಕರಾಗಿ ಬಡ್ತಿ ನೀಡಿತ್ತು. ಚಿತ್ರದುರ್ಗ ತಾಲೂಕಿನ ಅಳಗವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯಶಿಕ್ಷಕರಾಗಿ ನಿಯುಕ್ತಿಗೊಂಡು, ಅಲ್ಲಿಯೂ ತಮ್ಮ ಕರ್ತವ್ಯ ನಿಷ್ಠೆ ಮೆರೆದ ಶಿವಕುಮಾರ್ ಅವರು ಇಂದು ಹೆಮ್ಮೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ.

ಬಿ.ಟಿ. ಶಫೀವುಲ್ಲಾ ಅವರ ಶುಭ ಹಾರೈಕೆ:
“ಮೂರೂವರೆ ದಶಕಗಳ ಕಾಲ ಗ್ರಾಮೀಣ ಭಾಗದ ಕಡುಬಡವರ, ಹಳ್ಳಿಯ ಮಕ್ಕಳ ಬದುಕಿಗೆ ಜ್ಞಾನದ ಜ್ಯೋತಿ ಬೆಳಗಿದ ವೈ. ಟಿ. ಶಿವಕುಮಾರ್ ಅವರ ಸೇವೆ ಎಂದಿಗೂ ಸ್ಮರಣೀಯ. ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ತೃಪ್ತಿ ಅವರಲ್ಲಿದೆ. ನಿವೃತ್ತಿ ಎಂಬುದು ಕೇವಲ ಹುದ್ದೆಗೆ ಮಾತ್ರ, ಅವರ ಜ್ಞಾನಕ್ಕಲ್ಲ. ಶಿವಕುಮಾರ್ ಅವರ ನಿವೃತ್ತಿ ಜೀವನವು ಅತ್ಯಂತ ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ, ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಚಿತ್ರದುರ್ಗ ತಾಲೂಕಿನ ಮಾಳೇನಹಳ್ಳಿ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯ ಶಿಕ್ಷಕ ಬಿ.ಟಿ.ಶಫೀವುಲ್ಲಾ ಅವರು ಶುಭ ಹಾರೈಸಿದ್ದಾರೆ.

ಮುಖ್ಯಶಿಕ್ಷಕರ ನಿವೃತ್ತಿಯ ಈ ಸಂದರ್ಭದಲ್ಲಿ ಬಿ.ಟಿ. ಶಫೀವುಲ್ಲಾ ಅವರೊಂದಿಗೆ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಅಪಾರ ಹಿತೈಷಿಗಳು ಶಿವಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now