ಬೆಂಗಳೂರು: ಮಳೆಗಾಲದ ಅಧಿವೇಶನ ಶುರುವಾಗಿದ್ದು, ನಿನ್ನೆಯಷ್ಟೇ ರಾಜೀನಾಮೆ ನೀಡಿರುವ ರಾಜಣ್ಣ ವುಚಾರ ಸದ್ದು ಮಾಡಿದೆ. ವಿಪಕ್ಷ ನಾಯಕ ಆರ್ ಅಶೋಕ್ ಈ ಸಂಬಂಧ ಸದನದಲ್ಲಿ ಮಾತನಾಡಿದ್ದಾರೆ.
ಒಬ್ಬ ಮಂತ್ರಿ ಅವರನ್ನು ವಜಾ ಆದ ತಕ್ಷಣ, ಸದನ ನಡೆಯುತ್ತಾ ಇದೆ ಈಗ. ಸರ್ಕಾರದ ಕರ್ತವ್ಯ, ಮುಖ್ಯಮಂತ್ರಿಗಳ ಕರ್ತವ್ಯ. ಅದನ್ನ ತಕ್ಷಣವಾಗಿಯೇ, ಸದನ ನಡೆಯುತ್ತಾ ಇರಲಿಲ್ಲ ಅಂದ್ರೆ ನಾವೂ ಕೇಳ್ತಾ ಇರಲಿಲ್ಲ. ಸದನ ನಡೆಯುವಾಗ ಅದನ್ನ ಹೇಳಬೇಕು. ಹೇಳಲೇ ಇಲ್ಲ ಎಂದು ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೆ ಸ್ಪೀಕರ್ ಸಮಯ ಬಂದಾಗ ಹೇಳ್ತಾರೆ ಎಂದಿದ್ದಾರೆ.

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಆರ್ ಅಶೋಕ್ ಅವರು, ಹಂಗೆ ಆಗೋದಿಲ್ಲ ಸರ್. ಮುಖ್ಯಮಂತ್ರಿ ಬಂದಾಗ ಸದನ ನಡೆಸುವುದಕ್ಕೆ ಆಗುತ್ತಾ ಸರ್ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ಪೀಕರ್ ಮಧ್ಯ ಪ್ರವೇಶಿಸಿ ಇದು ಇಂಟರ್ ನಲ್ ವಿಚಾರ ಅಲ್ವಾ ಎಂದಾಗ ಸದನದಲ್ಲಿದ್ದ ಬಿಜೆಪಿ ನಾಯಕರೆಲ್ಲ ಧ್ವನಿಗೂಡಿಸಿದ್ದಾರೆ. ಇದು ಇಂಟರ್ನಲ್ ಮ್ಯಾಟರ್ ಹೇಗೆ ಆಗುತ್ತೆ ಸರ್. ರಾಹುಲ್ ಗಾಂಧಿ ಬಂದು ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿದ್ದು, ಆಮೇಲೆ ರಾಜಣ್ಣ ಅವರು ಸತ್ಯ ಹೊರಗೆ ತಂದಾಗ ರಾಜೀನಾಮೆ ವಿಚಾರ ಬಂದಿರೋದು ಇದು ಇಂಟರ್ನಲ್ ಮ್ಯಾಟರ್ ಹೇಗೆ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಎಂಬುದನ್ನ ಸದನದಲ್ಲಿ ಸ್ಪಷ್ಟಪಡಿಸಬೇಕು. ನಾವೇನು ಜಾಸ್ತಿ ಸಮಯವನ್ನ ಕೇಳಲ್ಲ. ಮುಖ್ಯಮಂತ್ರಿಗಳ ಕರ್ತವ್ಯ ಅದು. ನಮ್ಮವರೇ ಷಡ್ಯಂತ್ರ ಮಾಡಿದ್ದಾರೆ ಎಂದು ರಾಜಣ್ಣ ಆರೋಪ ಮಾಡಿದ್ದಾರೆ. ಸತ್ಯ ಹೇಳಿದ್ದಕ್ಕೋಸ್ಕರ ಅವರನ್ನ ಬಲಿ ಮಾಡಿದ್ರಾ. ಸದನ ನಡೆಯುತ್ತಿರುವಾಗ ಇಂಥ ಮಹತ್ವದ ವಿಚಾರವನ್ನ ಸದನದಲ್ಲಿ ಕೇಳಬೇಕೆ ವಿನಃ, ಮೀಡಿಯಾ ಮೂಲಕ ಕೇಳುವುದಲ್ಲ. ಸದನವನ್ನ ಕತ್ತಲಲ್ಲಿ ಇಡುವುದಲ್ಲ. ಬೆಳಕಲ್ಲಿ ಇಡಿ ಎಂದು ಸದನದಲ್ಲಿ ಗದ್ದಲ ಎಬ್ಬಿಸಿದ್ದಾರೆ.















