ಬೆಂಗಳೂರು: ನಿನ್ನೆಯಷ್ಟೇ ಕೆ ಎನ್ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತನ್ನಾಡುವಾಗ ಯಾರೋ ಮಾಟ ಮಂತ್ರ ಮಾಡಿಸಿರಬೇಕು ಮುಖ್ಯಮಂತ್ರಿಗಳಿಗೆ ಎಂಬ ಮಾತನ್ನ ಹೇಳಿದ್ದರು. ಆ ಮಾತಿಗೆ ಶಾಸಕ ಹೆಚ್ ಸಿ ಬಾಲಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದು, ರಾಜಣ್ಣನೆ ಮಾಟ ಮಂತ್ರ ಮಾಡಿಸಿರಬೇಕು ಎಂದಿದ್ದಾರೆ.
ಬೇರೆ ಇನ್ನ್ಯಾರು ಮಾಡಿಸುವುದಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೇನಾದ್ರೂ ಮಾಟ ಮಂತ್ರ ಮಾಡಿಸೋದಕ್ಕೆ ಶಕ್ತಿ ಅಂತ ಇದ್ದರೆ ಅದು ರಾಜಣ್ಣನಿಗೆ ಮಾತ್ರ. ರಾಜಣ್ಣನವರನ್ನೇ ಈ ಬಗ್ಗೆ ಕೇಳಬೇಕು. ರಾಜಣ್ಣ ಅವರು ಯಾರಿಗಾದರೂ ಮಾಟ ಮಂತ್ರ ಮಾಡಿಸಿ ಅಭ್ಯಾಸ ಇದೆಯಾ. ಏನಾದ್ರೂ ಹೆಚ್ಚು ಕಡಿಮೆ ಮಾಡಿಸಿದರೆ ರಾಜಣ್ಣ ಮಾತ್ರ. ಬೇರೆ ಯಾರಿಗೂ ಆ ಧೈರ್ಯವಿಲ್ಲ. ಮಾಟ ಮಂತ್ರದಿಂದ ನಾವೆಲ್ಲಾ ನಿಯಂತ್ರಣ ಮಾಡ್ತೀವಿ ಅಂದ್ರೆ ಅದು ಮೂರ್ಖತನ. ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿರೋರನ್ನೆಲ್ಲ ಮಾಟ ಮಂತ್ರ ಮಾಡಿಸಿ ಇಳಿಸಿ ಬಿಡಬಹುದಲ್ವಾ. ಸುಮ್ನೆ ಬಾಯಿ ಚಪಲಕ್ಕೆ ಮಾತಾಡಿಕೊಳ್ತಾರೆ. ಅದಕ್ಕೆ ಅರ್ಥ ಇಲ್ಲ.
ವಾಮಾಚಾರಗಳನ್ನ ಮಾಡಿಸ್ತಾರೆ. ಒಂದು ತಿಳಿದುಕೊಳ್ಳಬೇಕು ಯಾರ್ಯಾರು ವಾಮಾಚಾರವನ್ನ ಮಾಡಿಸ್ತಾರೆ ಅವರ ಕುಟುಂಬ ಸರ್ವನಾಶ ಆಗಿದೆ. ಅಂತಹ ಉದಾಹರಣೆಗಳು ಸಾಕಷ್ಟು ಇದೆ. ತಾತ್ಕಾಲಿಕವಾಗಿ ಗ್ರಹಚಾರ ಕೆಟ್ಟಾಗ ಹೆಚ್ಚು ಕಡಿಮೆ ನಡೆಯಬಹುದು. ಪರ್ಮನೆಂಟ್ ಆಗಿ ಮುಗಿಸೋ ಆಗಿದ್ದಿದ್ರೆ ಎಲ್ಲಾರನ್ನು ಮುಗಿಸ್ತಾ ಇದ್ದರು ಎಂದಿದ್ದಾರೆ.
ಇದೇ ವೇಳೆ ಮುಸ್ಲಿಮರ ಅಸಹಾಯಕತೆಯ ಬಗ್ಗೆ ಮಾತನ್ನಾಡಿ, ಜಮೀರ್ ಬಗ್ಗೆ ಬಹುಶಃ ಏನು ಆಗಲ್ಲ. ಅವರವರ ಅಭಿಪ್ರಾಯ ಅವರು ವ್ಯಕ್ತಪಡಿಸುತ್ತೆ. ಅಲ್ಪಸಂಖ್ಯಾತ ಮಾತ್ರ ಯಾಕೆ ಹೇಳ್ತೀರಿ. ಎಲ್ಲಾ ಸಮುದಾಯದವರು ಈ ಬಗ್ಗೆ ಕೇಳ್ತಾರೆ. ಅಲ್ಪಸಂಖ್ಯಾತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಅಭಿಪ್ರಾಯ ಕೇಳಲಿ ಬಿಡಿ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











