Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೊಟ್ಟ ಮಾತಿಗೆ ತಪ್ಪದ ರಾಹುಲ್ ಗಾಂಧಿ : ರೈತ ಮಹಿಳೆಯರಿಗೆ ಸೋನಿಯಾ, ಪ್ರಿಯಾಂಕ ಭೇಟಿ, ಪ್ರೀತಿಯ ಆತಿಥ್ಯ

---Advertisement---

ನವದೆಹಲಿ: ಇಂದು ಸೋನಿಯಾ ಗಾಂಧಿ ನಿವಾಸದಲ್ಲಿ ರೈತ ಮಹಿಳೆಯರು ಮನಸ್ಸಾರೆ ನಕ್ಕಿದ್ದಾರೆ, ಪ್ರೀತಿಯಿಂದ ಕುಣಿದಿದ್ದಾರೆ. ಹಾಗಂತ ಅವರು ಒಬ್ಬರೇ ಅಲ್ಲ, ಜೊತೆಗೆ ಸೋನಿಯಾ ಗಾಂಧಿ‌ ಕೂಡ ಎಲ್ಲರ ಜೊತೆಗೆ ಸಾಮಾನ್ಯರಂತೆ ಬೆರೆತಿದ್ದಾರೆ. ಆತ್ಮೀಯತೆಯನ್ನು ತೋರಿಸಿದ್ದಾರೆ.

ಇದೆಲ್ಲದ್ದಕ್ಕೂ ಕಾರಣ ರಾಹುಲ್ ಗಾಂಧಿ ಆ ರೈತ ಮಹಿಳೆಯರಿಗೆ ಕೊಟ್ಟಿದ್ದಂತ ಮಾತು. ಆದ್ರೆ ಆ ಮಾತನ್ನು ಕಾಂಗ್ರೆಸ್ ನಾಯಕ ಮರೆತು ಹೋಗಿದ್ದಾರೆ ಎಂದೇ ಮಾತುಗಳು ಕೇಳಿ ಬಂದಿತ್ತು. ಆದ್ರೆ ಈಗ ಮನೆಗೆ ಕರೆದು ಕೊಟ್ಟ ಮಾತು, ಯಾವತ್ತು ತಪ್ಪುವವರಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುವ ಮೂಲಕ ಇಡೀ ದೇಶದ ಜನರನ್ನು ಭೇಟಿ ಮಾಡಿ ಬಂದಿದ್ದರು. ಈ ವೇಳೆ ಹರಿಯಾಣದ ಸೋನಿಪತ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ರೈತ ಮಹಿಳೆಯರು ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದರು. ಒಬ್ಬ ವೃದ್ದೆಯೊಬ್ಬರಿಗೆ ದೆಹಲಿಗೆ ಬನ್ನಿ, ಕಣ್ಣಿನ ಆಪರೇಷನ್ ಮಾಡಿಸುತ್ತೇನೆ ಎಂದು ಹೇಳಿದ್ದರು. ಆಗ ನಾವು ದೆಹಲಿಯನ್ನೇ ನೋಡಿಲ್ಲ, ಸೋನಿಯಾ ಗಾಂಧಿಯವರನ್ನು ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು.

ಇದೀಗ ಆ ಆಸೆಗೆ ಇಂದು ಕಾಲ ಕೂಡಿ ಬಂದಿದೆ. ರಾಹುಲ್ ಗಾಂಧಿ ಟೆಂಪೋ ಕಳುಹಿಸಿ, ಆ ರೈತ ಮಹಿಲಕೆಯರನ್ನು ಕರೆತರಿಸಿದ್ದಾರೆ. ಸೋನಿಯಾ ಗಾಂಧಿ ನಿವಾಸಕ್ಕೆ‌ಬರುವುದಕ್ಕೂ ಮುನ್ನ ದೆಹಲಿಯಲ್ಲೆಲ್ಲಾ ಸುತ್ತಾಡಿ ಬಂದಿದ್ದಾರೆ. ಸೋನಿಯಾ ಗಾಂಧಿಗಾಗಿ ಪ್ಯೂರ್ ಹಸುವಿನ ತುಪ್ಪ ಸೇರಿದಂತೆ ಹಲವು ಖಾದ್ಯಗಳನ್ನು ತಂದಿದ್ದರು. ಸೋನಿಯಾ ಗಾಂಧಿ, ಪ್ರಿಯಾಂಕರನ್ನು ನೋಡಿದ ಮಹಿಲಕೆಯರು ತುಂಬಾ ಖುಷಿ ಪಟ್ಟಿದ್ದಾರೆ. ಅವರನ್ನು ಮುಟ್ಟಿ ಸಂತಸ ವ್ಯಕ್ತಪಡಿಸಿದ್ದಲ್ಲದೇ, ಹರಸಿದ್ದಾರೆ. ಇನ್ನು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಕೂಡ ಅವರ ಜೊತೆಗೆ ಕೂತು, ಊಟ ಮಾಡಿ, ಡ್ಯಾನ್ಸ್ ಕೂಡ ಆಡಿದ್ದಾರೆ. ಈ ವೇಳೆ ಹಲವು ಸಮಸ್ಯೆಗಳು, ದರ ಏರಿಕೆಯ ಬಗ್ಗೆಯೂ ಚರ್ಚೆ ನಡೆದಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment