Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಂದಾಯ ಇಲಾಖೆಯ ವಿವಿಧ ವೃಂದದ ಅರ್ಹ ನೌಕರರಿಗೆ ಮುಂಬಡ್ತಿ : ರಾಜ್ಯ ಸರ್ಕಾರ ಮಹತ್ವದ ಆದೇಶ

---Advertisement---

ಸುದ್ದಿಒನ್,ಬೆಂಗಳೂರು,ಜೂನ್.05: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ಹಾಗೂ ಅರ್ಹತೆ ಹೊಂದಿರುವ ವಿವಿಧ ವೃಂದದ ನೌಕರರಿಗೆ ನಿಯಮಾನುಸಾರ ತುರ್ತಾಗಿ ಮುಂಬಡ್ತಿ (Promotion) ನೀಡಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇ 27, 2026 ರಂದು ರಾಜ್ಯ ಪತ್ರದಲ್ಲಿ (Gazette) ಪ್ರಕಟಿಸಲಾಗಿರುವ “ಕರ್ನಾಟಕ ರಾಜ್ಯ ಕಂದಾಯ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು 2026 ರ ಅನ್ವಯ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕಂದಾಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸಿ, ಎಲ್ಲಾ ವೃಂದಗಳಿಗೆ ವೃಂದಬಲ ಹಾಗೂ ನೇಮಕಾತಿ ವಿಧಾನವನ್ನು ನಿಗದಿಪಡಿಸಲಾಗಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಕಂದಾಯ ಇಲಾಖೆಯ ಕೆಳಕಂಡ ವಿವಿಧ ವೃಂದದ ಅರ್ಹ ನೌಕರರಿಗೆ ಮುಂಬಡ್ತಿ ನೀಡಲು ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.ಶಿರಸ್ತೇದಾರ್, ಶೀಘ್ರಲಿಪಿಗಾರರು (Stenographers), ದ್ವಿತೀಯ ದರ್ಜೆ ಸಹಾಯಕರು (SDA),ದತ್ತಾಂಶ ನಮೂದಕ ಸಹಾಯಕರು (Typist), ವಾಹನ ಚಾಲಕರು,ಗ್ರೂಪ್ ‘ಡಿ’ ವೃಂದದ ನೌಕರರು

ಹೊಸ ನಿಯಮಾವಳಿಗಳ ಅನ್ವಯ ಅರ್ಹ ನೌಕರರ ಪಟ್ಟಿಯನ್ನು ನಿಯಮಾನುಸಾರ ಪರಿಶೀಲಿಸಿ, ಅವರಿಗೆ ಮುಂಬಡ್ತಿ ನೀಡಲು “ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ” ಉನ್ನತ ಅಧಿಕಾರಿಗಳಿಗೆ ಪತ್ರದಲ್ಲಿ ಸ್ಪಷ್ಟವಾಗಿ ಆದೇಶಿಸಲಾಗಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ) ಉಮಾ ಮಹೇಶ್ವರಿ ಬಿ. ಈ. ಅವರು ಈ ಕುರಿತು ಅಧಿಕೃತ ಪತ್ರವನ್ನು ಹೊರಡಿಸಿದ್ದು, ಕಂದಾಯ ಆಯುಕ್ತರು, ಎಲ್ಲಾ ಪ್ರಾದೇಶಿಕ ಆಯುಕ್ತರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

Join WhatsApp

Join Now

Join Telegram

Join Now