Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುಮಾರಸ್ವಾಮಿ ಅವರ ಪೆನ್ ಡ್ರೈವ್ ವಿಚಾರಕ್ಕೆ ಬೇಸತ್ತ ಪ್ರಿಯಾಂಕ್ ಖರ್ಗೆ ಏನಂದ್ರು..?

Facebook
Twitter
Telegram
WhatsApp

 

ಬೆಂಗಳೂರು: ಇಂದು ಮಾಜಿ ಸಿಎಂ ಕುಮಾರಸ್ವಾಮಿ ವಿದೇಶದಿಂದ ಬಂದಿದ್ದಾರೆ. ಈ ವೇಳೆ ಏರ್ಪೋರ್ಟ್ ನಲ್ಲಿ ಮಾತನಾಡಿದ ಕುಮಾರಸ್ವಾಮಿ, ಪೆನ್ ಡ್ರೈವ್ ಈಗಲೇ ರಿಲೀಸ್ ಮಾಡಲ್ಲ ಎಂದಿದ್ದಾರೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜೆಡಿಎಸ್ ನವರು ಈಗ ಅಸ್ತಿತ್ವ ಕಳೆದುಕೊಂಡು ಬಿಟ್ಟಿದ್ದಾರೆ. ಮುಳುಗಿ ಹೋಗಿದ್ದಾರೆ. ಆ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ವಿಪಕ್ಷ ನಾಯಕರಾಗಲಿ ಈ ರೀತಿ ಮಾತನಾಡುತ್ತಿದ್ದಾರೆ ಎನಿಸುತ್ತಿದೆ. ಬಿಜೆಪಿಯವರಂತು ಹತಾಶರಾಗಿದ್ದಾರೆ. ಪ್ಲೇಯಿಂಗ್ ಲೆವೆಲ್ ನಲ್ಲಿ ಕ್ಯಾಪ್ಟನ್ ನ ಹುಡುಕಿದರೆ, ಇವರು ಬೇರೆಯದ್ದೇ ರೀತಿಯಲ್ಲಿ ಹುಡುಕುತ್ತಿದ್ದಾರೆ.

40% ಸರ್ಕಾರ ಅಂತ ಎನಿಸಿಕೊಂಡವರು ಅವರು. 40% ಸರ್ಕಾರ ಇದ್ದಾಗ ಇವರು ಯಾಕೆ ಮಾತನಾಡಲಿಲ್ಲ. ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ ಅಂತ ಕೂಡ ಹೇಳಿದ್ದಾರೆ. ಪೆನ್ ಡ್ರೈವ್ ಪೆನ್ ಡ್ರೈವ್ ಅಂತಾರೆ. ಎಲ್ಲಿ ಹೋಯ್ತಪ್ಪ ಪೆನ್ ಡ್ರೈವ್. ಇವತ್ತು ನೋಡಿದ್ರೆ ಬಿಡುಗಡೆ ಮಾಡಲ್ಲ ಅಂತಿದ್ದಾರೆ. ಬಿಡುಗಡೆ ಮಾಡಿ ನಾವೂ ತನಿಖೆ ಮಾಡ್ತೀವಿ. ಎಸ್ ಪಿ ರೋಡಲ್ಲಿ ಎಷ್ಟು ಪೆನ್ ಡ್ರೈವ್ ಸಿಗಲ್ಲ. ಸುಮ್ಮನೆ ಕಂಟೆಂಟ್ ಇಲ್ಲದೆ ಏನನ್ನು ಮಾತನಾಡಬಾರದು ಜೆಡಿಎಸ್ ಅವರು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಛಾಯಾ ಟೈಲರ್ ರಮೇಶ್ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ನಗರದ ಲಕ್ಷ್ಮೀ ಬಜಾರ್‌ನಲ್ಲಿರುವ ಛಾಯಾ ಟೈಲರ್ ಅಂಗಡಿ ಮಾಲೀಕ ರಮೇಶ್ (52) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸ್ವಗ್ರಾಮ ಹೊಸದುರ್ಗ

ಇಂದಿನಿಂದ ಹಾಸನಾಂಬೆಯ ದರ್ಶನ ಭಾಗ್ಯ : ಕ್ಯೂ ನಿಂತ ಭಕ್ತರು

  ಹಾಸನ: ವರ್ಷಕ್ಕೆ ಒಮ್ಮೆ ಬಾಗಿಲು ತೆಗೆಯುವ ದೇವಿ ಹಾಸನಾಂಬೆ. ಇದೀಗ ಮತ್ತೆ ಆ ದಿನ ಬಂದಿದೆ. ಹಾಸನಾಂಬೆಯ ಬಾಗಿಲು ತೆಗೆಯಲಾಗಿದೆ. ನಿನ್ನೆಯೇ ಹಾಸನಾಂಬೆಯ ಬಾಗಿಲು ತೆಗೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ರಾತ್ರಿಯಿಂದಾನೇ

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು : ಛಲವಾದಿ ನಾರಾಯಣಸ್ವಾಮಿ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ಎಸ್ ಟಿ ಸೋಮಶೇಖರ್ ಬಿಜೆಪಿಯಿಂದ ಹೊರಗೆ ನಿಂತಿದ್ದಾರೆ. ಬಿಜೆಪಿ ಶಾಸಕರು ಯಾರೂ ಅಷ್ಟು ದಡ್ಡತನ ಮಾಡುವುದಿಲ್ಲ. ಈಗ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ

error: Content is protected !!