ಸುದ್ದಿಒನ್, ಚಿತ್ರದುರ್ಗ, ಜುಲೈ. 16 : ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ 2025-26 ನೇ ಸಾಲಿನಲ್ಲಿ ಶೇಕಡಾ 80 ಮತ್ತು ಅದಕ್ಕಿಂತ ಅಧಿಕ ಅಂಕ ಗಳಿಸಿದ ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯಿತ ಸಮಾಜದ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಇಲಾಖೆಯ ನಿವೃತ್ತ ಚಿತ್ರದುರ್ಗ ತಾಲೂಕಿನ ನೌಕರರ ಅಭಿನಂದನಾ ಸಮಾರಂಭ ಹಾಗೂ ಸರ್ವಸದಸ್ಯರ ಸಭೆಯನ್ನು ಜುಲೈ 26 ರಂದು ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರತಿಭಾ ಪುರಸ್ಕಾರಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅನುದಾನಿತ/ ಸರ್ಕಾರಿ ನೌಕರರ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ದಿನಾಂಕ 18/07/2026 ಅಂತಿಮ ದಿನಾಂಕ. ಈ ಕಾರ್ಯಕ್ರಮದಲ್ಲಿ ಶಾಸಕರು, ಎಂ.ಎಲ್.ಸಿ ಹಾಗೂ ಸಮಾಜದ ಸ್ವಾಮಿಜಿಗಳವರು ಭಾಗವಹಿಸುವರು.

ಆನ್ ಲೈನ್ ನಲ್ಲಿ ಈ ಕೆಳಕಂಡ ಲಿಂಕ್ ನಲ್ಲಿ ಮಾತ್ರ ಅರ್ಜಿಸಲ್ಲಿಸುವುದು.
ಪ್ರತಿಭಾ ಪುರಸ್ಕಾರದ ಅರ್ಜಿ ಲಿಂಕ್
https://form.svhrt.com/6a4110233fd706abb3d8e0b2

ಚಿತ್ರದುರ್ಗ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ ನಿವೃತ್ತ ನೌಕರರು ಮಾತ್ರ ಅರ್ಜಿ ಸಲ್ಲಿಸುವುದು.
ತಾಲೂಕು ಹಂತದ ನಿವೃತ್ತ ನೌಕರರ ಅರ್ಜಿ ಸಲ್ಲಿಸುವ ಲಿಂಕ್. https://surveyheart.com/form/6a46885f7371e0e60b890b94
ಆನ್ ಲೈನ್ ಮೂಲಕವಲ್ಲದೆ ಯಾವುದೇ ಬೇರೆ ರೀತಿ ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಚಿತ್ರದುರ್ಗ ಜಿ.ವೀ.ಲಿಂ.ನೌ.ಕ್ಷೇ. ಸಂಘದ(ರಿ) ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್ ಕೆ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











