ಚಿತ್ರದುರ್ಗ. ಮೇ.18: ಚಿತ್ರದುರ್ಗ ನಗರ ಉಪವಿಭಾಗ ಘಟಕ ಒಂದರ ವ್ಯಾಪ್ತಿಯಲ್ಲಿ ಬರುವ ಎಫ್-3 ಬ್ಯಾಂಕ್ ಕಾಲೋನಿ ಮಾರ್ಗದಲ್ಲಿ ಇರುವ 11 ಕೆವಿ ಮಾರ್ಗವನ್ನು ತುರ್ತು ಕಾಮಗಾರಿ ಇರುವುದರಿಂದ ಈ ಮಾರ್ಗದ ಕೆಲವು ಪ್ರದೇಶಗಳಲ್ಲಿ ಇದೇ ಮೇ 19ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿ, ಅಲೆಗ್ಸ್ಯಾಂಡರ್ ಲೇ ಔಟ್, ಶ್ರೀ ಶೈಲ ಬಡಾವಣೆ, ವೆಂಕಟಾದ್ರಿ ಬಡಾವಣೆ, ಸರೋಜ ಬಾಯಿ ಕಲ್ಯಾಣ ಮಂಟಪ ಸುತ್ತಮುತ್ತಲಿನ ಬನಶಂಕರಿ ಬಡಾವಣೆ, ಬಸವೇಶ್ವರ ಆಸ್ಪತ್ರೆ ಆಸ್ಪತ್ರೆ ಸುತ್ತಮುತ್ತ, ಚಿತ್ರ ಡಾನ್ಬೋಸ್ಕೋ ಡಿಗ್ರಿ ಕಾಲೇಜು ಸುತ್ತಮುತ್ತ, ಶ್ರೀರಾಮ ಕಲ್ಯಾಣ ಮಂಟಪ ಹಿಂಭಾಗ, ವೆಂಕಟೇಶ್ವರ ಬಡಾವಣೆ, ಸಾಯಿ ಸಿಟಿ 1 ಮತ್ತು 2, ಚಳ್ಳಕೆರೆ ರಸ್ತೆ ಎಸ್.ವಿ.ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.















