Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪೊಲೀಸರಿಂದ ವಚನಾನಂದ ಶ್ರೀ ಹಾಗೂ ಬೆಂಬಲಿಗರಿಗೆ ನೋಟೀಸ್

---Advertisement---

ದಾವಣಗೆರೆ: ಪಂಚಮಸಾಲಿ ಪೀಠದಲ್ಲಿ ಕಳೆದ ಕೆಲವು ದಿನಗಳಿಂದ ಏನೆಲ್ಲಾ ಆಯ್ತು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಲೆಕ್ಕ ಕೊಡಿ ಅಭಿಯಾನ, ಸ್ವಾಮೀಜಿಗಳ ತಲೆದಂಡದ ತನಕ ಬಂದು ನಿಂತಿದೆ. ಮಠದಿಂದ ಟ್ರಸ್ಟಿಗಳು ಉಚ್ಛಾಟನೆ ಮಾಡಿದ್ರು ಕೂಡ ಸ್ವಾಮೀಜಿ ಮಠವನ್ನು ಖಾಲಿ ಮಾಡಿಲ್ಲ. ಇದೀಗ ಪೊಲೀಸರು ವಚನಾನಂದ ಸ್ವಾಮೀಜಿ ಹಾಗೂ ಬೆಂಬಲಿಗರಿಗೆ ನೋಟೀಸ್ ನೀಡಿದ್ದಾರೆ.

ಪೊಲೀಸರು ಮಠಕ್ಕೆ ಬಂದಾಗ ಸ್ವಾಮೀಜಿ ಬೆಂಬಲಿಗರು ಜೋರು ಮಾಡಿದ್ದಾರೆ. ಆಗ ಪೊಲೀಸ್ ಅಧಿಕಾರಿ ಮಂಜುಳಾ ಅವರು ಕೋರ್ಟ್ ಆದೇಶ ಇದೆ ಎಂಬ ಮಾತನ್ನ ಹೇಳಿದ್ದಾರೆ. ನೋಟೀಸ್ ಕೂಡ ತೋರಿಸುವುದಕ್ಕೆ ಮುಂದಾಗಿದ್ದಾರೆ. ಬಳಿಕ ಬೆಂಬಲಿಗರು ಆ ನೋಟೀಸ್ ನೋಡ್ಬೇಕು ಕೊಡಿ ಎಂದು ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಾರ್ಯಾಲಯ ದಾವಣಗೆರೆ. ದಿನಾಂಕ 4-5-2026, ವಿಷಯ, ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶ್ರೀ ಪಂಚಮಸಾಲಿ ಮಠದ ಆವರಣದಲ್ಲಿ. ಸಭೆ, ಸಭಾರಂಭ ದಿನಾಂಕ 27.4.2026 ರವರೆಗೆ ನಡೆಸಿದ ಸಭೆಗಳನ್ನು ಅವಲೋಕಿಸಿದಾಗ ಮಠದಲ್ಲಿ ಉದ್ರೇಕ ಭಾಷಣಗಳನ್ನು ಮಾಡಿರುವುದು ತಿಳಿದು ಬಂದಿದೆ ಎಂಬುದಾಗಿ ನೋಟೀಸ್ ನಲ್ಲಿ ತಿಳಿಸಲಾಗಿದೆ.

ಈ ನೋಟೀಸ್ ಅನ್ನು ವಚನಾನಂದ ಸ್ವಾಮೀಜಿಗಳೇ ಓದಿದ್ದಾರೆ. ಸದ್ಯ ಪಂಚಮಸಾಲಿ ಮಠದಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಬೇರೆ ಯಾವುದೇ ಕಾರ್ಯಕ್ರಮಗಳು ಮಠದ ಆವರಣದಲ್ಲಿ ನಡೆಯುವಂತಿಲ್ಲ. ಮಠಕ್ಕೆ ಭಕ್ತಾಧಿಗಳು ಬಂದು ದರ್ಶನ ಮಾಡಿಕೊಂಡು ಹೋಗಬಹುದು ಅಷ್ಟೆ‌. ಈ ಸಂಬಂಧ ಖುದ್ದಾಗಿ ಪೊಲೀಸರೇ ಹೋಗಿ ನೋಟೀಸ್ ಕೊಟ್ಟಿದ್ದು, ಮಠದ ಗೇಟ್ ಬಳಿ ಇದಕ್ಕೆ ಸಂಬಂಧಿಸಿದಂತೆ ಬ್ಯಾನರ್ ಕೂಡ ಹಾಕಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...