Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೂರನೇ ವಾರಕ್ಕೆ ದೊಡ್ಮನೆಯಿಂದ ಹೊರ ಬಂದ ಪವಿ ಪೂವಪ್ಪ..!

Facebook
Twitter
Telegram
WhatsApp

 

ಬಿಗ್ ಬಾಸ್ ಮನೆಯಲ್ಲಿ ಹೋದ್ಯಾ ಪುಟ್ಟ ಬಂದ್ಯಾ ಪುಟ್ಟ ಎಂಬಂತ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡವರು ಪವಿ ಪೂವಪ್ಪ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಳೆದ ಮೂರು ವಾರಗಳ ಹಿಂದೆ ಬಿಗ್ ಬಾಸ್ ಮನೆಗೆ ಹೋಗಿದ್ದರು. ಮೊದಲ ವಾರ ಹೊಸಬರು ಎಂಬ ಕಾರಣಕ್ಕೆ ನಾಮಿನೇಷನ್ ನಿಂದ ಬಿಗ್ ಬಾಸ್ ಪಾರು ಮಾಡಿತ್ತು. ಎರಡನೇ ವಾರ ಹೇಗೋ ಬಚಾವ್ ಆಗಿ ಬಿಟ್ಟರು. ಆದರೆ ಮೂರನೇ ವಾರಕ್ಕೆ ಮನೆಗೆ ವಾಪಾಸ್ ಆಗಿದ್ದಾರೆ.

ಬಿಗ್ ಬಾಸ್ ಸೀಸನ್ 10, 10 ವಾರಗಳನ್ನು ಕಳೆದಿದೆ. ಈಗಾಗಲೇ ಸ್ಪರ್ಧೆ ಕಠಿಣವಾಗುತ್ತಾ ಬರುತ್ತಿದೆ. ಯಾರು ಯಾವಾಗ ಹೊರ ಹೋಗುತ್ತಾರೋ ಎಂಬ ಕುತೂಹಲ ಇರುವಾಗಲೇ, ಆಟಕ್ಕಾಗಿ, ಗೆಲುವಿಗಾಗಿ ಎಲ್ಲರೂ ಉಲ್ಟಾ ಹೊಡೆಯುತ್ತಿದ್ದಾರೆ. ಅದರಲ್ಲೂ ಚೆಂದವಾಗಿದ್ದ ಕಾರ್ತಿಕ್ – ಸಂಗೀತಾ ನಡುವಿನ ಸ್ನೇಹದಲ್ಲಿಯೇ ಬಿಡುಕು ಮೂಡುತ್ತಿದೆ.

ಈ ವಾರ ಸಿರಿ, ಮೈಕಲ್ ಹಾಗೂ ಪವಿ ಮೂರು ಜನ ಬಾಟಮ್ ನಲ್ಲಿ ಕುಳಿತಿದ್ದಾರೆ. ಅದರಲ್ಲಿ ವೋಟ್ ಗಳ ಸಂಖ್ಯೆ, ಆಟದ ರೀತಿ ಎಲ್ಲವನ್ನು ಗಮನಿಸಿ, ಎಲಿಮಿನೇಟ್ ಮಾಡಲಾಗಿದೆ. ವೈಲ್ಡ್ ಕಾರ್ಡ್ ಮೂಲಕ ಬಂದಂತ ಪವಿ ಪೂವಪ್ಪ ಮನೆಯಿಂದ ತಮ್ಮ‌ ಜರ್ನಿಯನ್ನು ಮುಗಿಸಿ, ಬೇಗ ಹೊರಗೆ ಬಂದಿದ್ದಾರೆ. ಪವಿ ಜೊತೆಗೆ ವೈಲ್ಡ್ ಕಾರ್ಡ್ ಎಂಟ್ರಿಯಿಂದ ಬಂದಿದ್ದ ಅವಿನಾಶ್ ಶೆಟ್ಟಿ ಬಚಾವ್ ಆಗಿದ್ದಾರೆ. ಪವಿ ಪೂವಪ್ಪ ಇತ್ತಿಚೆಗೆ ವಿನಯ್ ಅಂಡ್ ಟೀಂ ಜೊತೆಗೆ ಹೆಚ್ಚು ಗುರುತಿಸಿಕೊಂಡಿದ್ದರು. ಎದುರಾಳಿ ತಂಡದೊಂದಿಗೆ ಅಗ್ರೆಸ್ಸಿವ್ ಆಗಿಯೇ ಆಟ ಆಡುತ್ತಿದ್ದರು. ಇದೀಗ ಮೂರನೇ ವಾರಕ್ಕೆ ಹೊರ ಬಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

ರೇವಣ್ಣ ಬಂಧನದ ಬೆನ್ನಲ್ಲೇ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು : ಮತ್ತಷ್ಟು ಸಂಕಷ್ಟ..!

ಬೆಂಗಳೂರು: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೊಬ್ಬರು ದೂರು ನೀಡಿರುವುದು ಹಾಗೂ ಇನ್ನೊಬ್ಬ ಸಂತ್ರಸ್ತೆಯ ಮಗ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು

ಭಾಷಣದಲ್ಲಿ ಯಡವಟ್ಟು : ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕುಮಾರಸ್ವಾಮಿ ದೂರು.. ಎಫ್ಐಆರ್ ದಾಖಲು..!

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಬಿಜೆಪಿ ಅದ್ಯಾವಾಗ ಮತ್ತೆ ಪ್ರಹ್ಲಾದ್ ಜೋಶಿ ಅವರಿಗೇನೆ ಟಿಕೆಟ್ ಕೊಟ್ಟಿತೇ ಅಂದಿನಿಂದಾನೇ ದಿಂಗಾಲೇಶ್ವರ ಸ್ವಾಮೀಜಿಗೆ ಬೇಸರ ಉಂಟಾಗಿತ್ತು. ಅಭ್ಯರ್ಥಿಯನ್ನು ಬದಲಾಯಿಸಿ ಎಂದು ಮನವಿ ಕೂಡ ಅಭ್ಯರ್ಥಿಯ ಬದಲಾವಣೆ

error: Content is protected !!