Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರು ನಮ್ಮ ಹೆಮ್ಮೆ | ಚಿತ್ರದುರ್ಗ : ಕಡೂರಿನ ಶ್ರೀವೀರಭದ್ರೇಶ್ವರ ದೇವಾಲಯದ ಪರಿಚಯ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಸುದ್ದಿಒನ್

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಭರಮಣ್ಣ ನಾಯಕನದುರ್ಗ ಹೋಬಳಿ (ಬಿ.ದುರ್ಗ)ಯ ಕಡೂರು ಶ್ರೀ ವೀರಭದ್ರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ದೇವಾಲಯವು ಈ ಭಾಗದ ಹೆಚ್ಚು ಭಕ್ತರು ಜನರಿಂದ ನಡೆದುಕೊಳ್ಳುವ ಜಾಗವಾಗಿದೆ.
ಹೊಳಲ್ಕೆರೆ ದಾವಣಗೆರೆ ಮುಖ್ಯರಸ್ತೆಯಿಂದ 5 km ಪಶ್ಚಿಮಕ್ಕೆ ಇರುವ ಈ ಸ್ಥಳಕ್ಕೆ ತಲುಪಲು ಉತ್ತಮ ಸಾರಿಗೆ ಹಾಗೂ ರಸ್ತೆ ಸೌಲಭ್ಯವಿದೆ. ದೇವಾಲಯವು ಸಣ್ಣಮಟ್ಟದ ಬೆಟ್ಟದ ಮೇಲೆ ಇದ್ದು ಇದನ್ನು ತಲುಪಲು ಮೆಟ್ಟಿಲುಗಳ ಮೇಲೆ ಹೋಗಬೇಕು. ಇದಕ್ಕೆ ಕಡವೂರು ಎಂಬ ಹೆಸರು ಇದ್ದಿತು. 16 ನೇ ಶತಮಾನದಲ್ಲಿ ವಿಜಯನಗರ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾದ ಈ ದೇವಾಲಯದ ಹಿಂಭಾಗದ ಮೇಲೆ ಬಂಡೆ ಶಾಸನಗಳಿದ್ದು ಹಿಂದೆ ವಿಜಯನಗರದ ಅರಸರು ಈ ದೇವಾಲಯಕ್ಕೆ ದಾನ -ದತ್ತಿ ನೀಡಿದ ವಿವರವಿದೆ.

 

ಗರ್ಭಗೃಹ,ಅಂತರಾಳ ಸಭಾಮಂಟಪ ಉಯ್ಯಾಲೆಕಂಬ ಮತ್ತು ದೀಪ ಸ್ತಂಭಗಳಿಂದ ಕೂಡಿದ ದೇವಾಲಯವಿದು. ಗರ್ಭಗೃಹವನ್ನು ಬೃಹತ್ತಾದ ಗುಂಡಿನ ಕೆಳಗಡೆ ನಿರ್ಮಿಸಲಾಗಿದ್ದು,ಅದರಲ್ಲಿ ವೀರಭದ್ರನ ನಾಲ್ಕು ಅಡಿ ಎತ್ತರದ ಶಿಲ್ಪವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರುವರು. ಅಂತರಾಳದ ಬಾಗಿಲುವಾಡದಲ್ಲಿ ಶೈವ ದ್ವಾರಪಾಲಕರನ್ನು ಕಡೆದಿದ್ದಾರೆ. ನವರಂಗದಲ್ಲಿ ನಂದಿಯ ಮೂರ್ತಿ ಇದೆ. ನವರಂಗದಲ್ಲಿ 4 ಕಂಬಗಳಿದ್ದು ಬಹುಮುಖಗಳಲ್ಲಿ ಕಡೆದಿದ್ದಾರೆ. ಇಲ್ಲಿನ ಶಾಸನಗಳು 1540 ರಲ್ಲಿ ವೀರಭದ್ರ ದೇವರಿಗೆ ದಾನ ನೀಡಿದ ವಿವರ ಹಾಗೂ ಮತ್ತೊಂದು ಶಾಸನ 1492 ರಲ್ಲಿ ಮಲ್ಲರಾಜ ನಾಯ್ಕರು ಕೆರೆಯನ್ನು ಕಟ್ಟಿಸಿ, ಜೀರ್ಣೋದ್ಧಾರ ಮಾಡಿದ ಬಗ್ಗೆ ವಿವರವನ್ನು ನೀಡುತ್ತವೆ. ಈ ದೇವರ ಜಾತ್ರೆಯು ಯುಗಾದಿಗೆ ಮುನ್ನ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ.

ಗುಗ್ಗುಳ,ರಥೋತ್ಸವ, ಓಕುಳಿ ಕಂಕಣ ಮುಂತಾದ ಧಾರ್ಮಿಕ ಆಚರಣೆಗಳು ಜರುಗುತ್ತವೆ. ಬೆಟ್ಟದ ಮೇಲೆ ಪುಷ್ಕರಣಿ ಇದ್ದು ಚರ್ಮರೋಗವನ್ನು ನಿವಾರಿಸುವ ನಂಬಿಕೆಯಿಂದ ಭಕ್ತರು ಇಲ್ಲಿ ಉಳಿದುಕೊಳ್ಳುತ್ತಾರೆ. ಬೆಟ್ಟದ ಮೇಲೆ ದೇವಾಲಯದ ಬಳಿಯಲ್ಲಿ ಪಾತಾಳಗಂಗೆ, ಕೆಂಚಮ್ಮನ ಮಂದಿರ,ಕೋಟೆ ಅವಶೇಷ ಹಾಗೂ ಉಯ್ಯಾಲೆ ಕಂಬವನ್ನು ಕಾಣಬಹುದು. ಗುಡ್ಡದ ತುದಿಯಲ್ಲಿ ಶಿಲಾಯುಗದ ಶಿಲಾನೆಲೆ ಇದ್ದು ಪ್ರತಿ ವರ್ಷ ವಿಜಯದಶಮಿ ಹಬ್ಬದಂದು ಭಕ್ತರು ಮಂಡಕ್ಕಿ ಅರ್ಪಿಸುವ ಆಚರಣೆ ಜರುಗುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment