Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮನಸ್ಸಿನ ಅಂಧಕಾರವನ್ನು ಹೋಗಲಾಡಿಸಲು ಗುರುವಿನಿಂದ ಮಾತ್ರ ಸಾಧ್ಯ : ಶ್ರೀ ರಾಮಾನಂದ ಭಾರತಿ ಸ್ವಾಮೀಜಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್,
ಮೊ: 87220 22817

ಚಿತ್ರದುರ್ಗ,(ನ.18) :  ಗುರುವಿಗೆ ಶರಣಾದಾಗ ಮಾತ್ರ ಜೀವನದಲ್ಲಿ ಸನ್ಮಾರ್ಗ ದೊರೆಯಲು ಸಾಧ್ಯವಿದೆ. ಪ್ರಪಂಚದಲ್ಲಿ ಎಲ್ಲವೂ ಇದೆ ನಮಗೆ ಹಿತವಾದದನ್ನು ಮಾತ್ರ ನಾವು ಬಳಸಬೇಕಿದೆ ಎಂದು ಹುಬ್ಬಳ್ಳಿ ಶ್ರೀ ಜಡೇಸಿದ್ದೇಶ್ವರ ಮಠದ ಶ್ರೀ ರಾಮಾನಂದ ಭಾರತಿ ಶ್ರೀಗಳು ತಿಳಿಸಿದರು.

ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ಕಬೀರಾನಂದ ಆಶ್ರಮದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳ 65ನೇ ಮತ್ತು ಶ್ರೀ ಸದ್ಗುರು ಕಬೀರೇಶ್ವರ ಶ್ರೀಗಳ 55ನೇ ಪುಣ್ಯಾರಾಧನೆ ಸಮಾರಂಭದ ದಿವ್ಯ ಉಪಸ್ಥಿತಿವಹಿಸಿ ಮಾತನಾಡಿದರು.

ಬದುಕಿನಲ್ಲಿ ಪುಣ್ಯವನ್ನು ಸಂಪಾದಿಸಿದವರ ಪುಣ್ಯಾರಾಧನೆಯನ್ನು ಮಾತ್ರ ಮಾಡಲಾಗುತ್ತದೆ. ಜೀವದ ಬಳ್ಳಿಯನ್ನು ಕತ್ತರಿಸಿ, ಪುಣ್ಯದ ಬಳ್ಳಿಯನ್ನು ಬೆಳಸಬೇಕಿದೆ.ಪುಣ್ಯದಿಂದ ವಿವೇಕ, ವ್ಯರಾಗ್ಯ, ಜ್ಞಾನ, ಮೋಕ್ಷ ಪ್ರಾಪ್ತಿಯಾಗುತ್ತದೆ. ಪುಣ್ಯಾರಾಧನೆಯ ನಿಮಿತ್ತ ಸದ್ಗುರು ನಾಮಸ್ಮರಣೆಯನ್ನು ಮಾಡಬೇಕಿದೆ. ಜೀವನದಲ್ಲಿ ಪುಣ್ಯ ಇರುವವರೆಗೆ ಗುರುವಾದ ಪರಮಾತ್ಮನನ್ನು ಮರೆಯಬಾರದು. ಸೂರ್ಯ ಚಂದ್ರರವರು ಹೂರಗಿನ ಕತ್ತಲೆಯನ್ನು ಹೂಗಲಾಡಿಸಲು ಸಾಧ್ಯವಿದೆ. ಆದರೆ ಮನಸ್ಸಿನ ಅಂಧಕಾರವನ್ನು ಹೋಗಲಾಡಿಸಲು ಗುರುವಿನಿಂದ ಮಾತ್ರ ಸಾಧ್ಯವಿದೆ ಎಂದರು.

ಗುರು ಪರಮಾತ್ಮನಿಗಿಂತ ಶ್ರೇಷ್ಠ, ಗುರುವಿಗೆ ಭಗವಂತನನ್ನು ತೋರಿಸುವ ಶಕ್ತಿಯಿದೆ. ಗುರುವಿಗೆ ಶರಣಾಗತಿಯಾದಾಗ ಸನ್ಮಾರ್ಗದಲ್ಲಿ ಕಂಡುಕೊಳ್ಳಲು ಸಾಧ್ಯವಿದೆ. ಸಿದ್ದಾರೂಢರವರ ಹತ್ತಿರ ಹೋದವರು ಮಹಾತ್ಮರಾಗಿದ್ದಾರೆ. ಅವರು ಇದ್ದ ಸ್ಥಳಗಳು ಸಹಾ ಇಂದು ಮಹತ್ತರವಾದ ದೇಗುಲಗಳಾಗಿವೆ. ಹಿಂದೆ ಗುರು ಇದ್ದು ಮುಂದೆ ಗುರಿ ಇದ್ಧಾಗ ಮಾತ್ರ ಮಾನವ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದು ಶ್ರೀ ರಾಮಾನಂದ ಭಾರತಿ ಶ್ರೀಗಳು ತಿಳಿಸಿದರು.

ಮೈಸೂರಿನ ಕೆ.ಆರ್ ನಗರದ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದ ಶ್ರೀಗಳು ಮಾತನಾಡಿ, ಭಗವಂತ ಇದ್ದ ಕಡೆಗಳಲ್ಲಿ ಸುಖ ಶಾಂತಿ ಇರುತ್ತದೆ. ದೇಹದಲ್ಲಿ ಭಗವಂತ ಇದ್ದಾಗ ದೇಹ ಪರಿಶುದ್ದವಾಗುತ್ತದೆ. ಗುರುವಿನ ಪಾದವನ್ನು ಸ್ಫರ್ಶ ಮಾಡಿದವರು ಧನ್ಯರಾಗುತ್ತಾರೆ. ಪರಮಾತ್ಮನ ಚಿಂತನೆಯಲ್ಲಿ ಜೀವನವನ್ನು ಸಾಗಿಸಬೇಕಿದೆ ಎಂದರು.

ಮಾತೃಶ್ರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್ ಮಾತನಾಡಿ, ಕಬೀರಾನಂದ ಅಜ್ಜನವರು ಇಲ್ಲಿ ಗೋಶಾಲೆಯನ್ನು ಪ್ರಾರಂಭ ಮಾಡಿ ನಂತರ ಮಠವನ್ನು ಸ್ಥಾಪನೆ ಮಾಡುವತ್ತ ಮುಂದಾದರು ಮೂಂಚೆ ಗೋವುಗಳ ರಕ್ಷಣೆಯನ್ನು ಮಾಡಿದರು. ಶ್ರೀಮಠ ಯಾವುದೇ ಜಾತಿಗೆ ಸೀಮಿತವಾಗದೆ ಜಾತ್ಯಾತೀತ ಮಠವಾಗಿದೆ. ಈಗಿನ ಶ್ರೀ ಶಿವಲಿಂಗಾನಂದ ಶ್ರೀಗಳ ಕಾರ್ಯದಿಂದ ಮಠ ಮತ್ತಷ್ಟು ಪ್ರಗತಿಯನ್ನು ಸಾಧಿಸಿದೆ. ಹುಟ್ಟಿನಿಂದ ಸಾಯುವರೆಗೆ ಜೀವನದಲ್ಲಿ ಜಂಜಾಟ ಇರುತ್ತದೆ ಅದರ ಮಧ್ಯದಲ್ಲಿಯೂ ಸಹಾ ಇಂತಹ ಶ್ರೀಗಳ ಸಹವಾಸವನ್ನು ಮಾಡಬೇಕಿದೆ ಎಂದು ತಿಳಿಸಿದರು.

ಸಾಹಿತಿಗಳಾದ ಬಿ.ಆರ್ ಪುಟ್ಟಪ್ಪ ಮಾತನಾಡಿ, ಗುರುವಿನ ಸಾನಿಧ್ಯದಲ್ಲಿ ಪುಣ್ಯವನ್ನು ಪಡೆಯಬೇಕಿದೆ, ಮುಕ್ತಿಯನ್ನು ಪಡೆಯಲು ಬೇರೆ ಕಡೆಗೆ ಹೋಗುವ ಅಗತ್ಯ ಇಲ್ಲ ಗುರುವಿನ ಕರುಣೆ ಇದ್ದರೆ ಸಾಕು ಅದು ತಾನಾಗಿಯೇ ಒಲಿಯುತ್ತದೆ. ಗುರುವಿನ ನಾಮಸ್ಮರಣೆಯಿಂದ ಮುಕ್ತಿಯನ್ನು ಪಡೆಯಬಹುದಾಗಿದೆ. ಗುರುವಿನ ಸಾನಿಧ್ಯದಲ್ಲಿ ನಗವಂತನನ್ನು ಕಾಣಬೇಕಿದೆ ಎಂದರು.

ಸಮಾರಂಭದ ಸಾನಿಧ್ಯವಹಿಸಿದ್ದ ಕಬೀರಾನಂದ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಕಬೀರಾನಂದ ಶ್ರೀಗಳ ಸೇವೆಯನ್ನು ಮಾಡಿದವರು ಇಂದು ಉತ್ತಮ ಸ್ಥಾನವನ್ನು ಪಡೆದಿದ್ದಾರೆ. ಗೋಶಾಲೆಯನ್ನು ಪ್ರಾರಂಭ ಮಾಡುವುದರ ಮೂಲಕ ಇಲ್ಲಿಗೆ ಆಗಮಿಸಿದ ಶ್ರೀಗಳ ಶ್ರೀ ರಕ್ಷೆ ಮಠದ ಮೇಲೂ ಇದೆ.  ಸಂತರು ಲೋಕದ ಹಿತವನ್ನು ಬಯಸುತ್ತಾರೆ ಸ್ವಾರ್ಥ ಹಿತವನ್ನಲ್ಲ, ಗುರು ಪಾಪವನ್ನು ತೊಳೆಯುತ್ತಾನೆ, ಕಬೀರಾನಂದರು ದೇಶವನ್ನು ಸಂಚಾರ ಮಾಡುವುದರ ಮೂಲಕ ಲೋಕದ ಚಿಂತನೆಯನ್ನು ಮಾಡಿದರು ಎಂದರು.

ಕಾರ್ಯಕ್ರಮದಲ್ಲಿ ಕುಂಬಾರ ಗುರುಪೀಠದ ಶ್ರೀ ಕುಂಬಾರ ಗುಂಡಯ್ಯ ಶ್ರೀಗಳು ಸಾನಿಧ್ಯವಹಿಸಿದ್ದರು.

ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಸದಸ್ಯರಾದ ವೆಂಕಟೇಶ್, ನಗರಾಭೀವೃದ್ದಿ ಪ್ರಾಧಿಕಾರದ ಸದಸ್ಯರಾದ ಶ್ರೀಮತಿ ರೇಖಾ, ಭಕ್ತರಾದ ತ್ಯಾಗರಾಜ್, ಹರಿಯಬ್ಬೆ ತಿಮ್ಮಣ್ಣ ಭಾಗವಹಿಸಿದ್ದರು. ಕಳೆದ 11 ರಿಂದ 17ರವರೆಗೆ ಆರೂಢ ಮೇರು ಜೀವನ ಚರಿತ್ರೆ ಪಾರಾಯಣ ಪ್ರವಚನ ನಡೆದಿದ್ದು, 17 ರ ಬೆಳಿಗ್ಗೆ ಶ್ರೀ ಕೃರ್ತ ಗದ್ದುಗೆಗೆ ರುದ್ರಾಭೀಷೇಕ ಕಾರ್ಯಕ್ರಮ ನಡೆಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಕ್ತ ನೋಡಿದ ಭಯಕ್ಕೆ ಸ್ಟ್ರೋಕ್ ಆಗಿ ನಟಿ ಪವಿತ್ರಾ ಸಾವು : ಜೊತೆಗಿದ್ದ ನಟ ಹೇಳಿದ್ದೇನು..?

ಭವಿಷ್ಯದಲ್ಲಿ ಒಳ್ಳೆಯ ಪೋಷಕ ನಟಿಯಾಗುವ ಎಲ್ಲಾ ಲಕ್ಷಣವನ್ನು ಹೊತ್ತುಕೊಂಡಿದ್ದವರು ಪವಿತ್ರಾ ಜಯರಾಂ. ಅದರಲ್ಲೂ ಸೀರಿಯಲ್ ನ ಖಳನಟಿಗೆ ಹೇಳಿ ಮಾಡಿಸಿದಂತಿದ್ದರು‌. ತ್ರಿಯನಿ ಧಾರಾವಾಹಿಯಲ್ಲಿ ಖಳನಟಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದರು. ಆದರೆ ಅವರು ಕಾರು ಅಪಘಾತದಿಂದ

CBSC 12ನೇ ತರಗತಿಯಲ್ಲಿ ಬೆಂಗಳೂರಿನ ಟ್ಯಾಂಕರ್ ಚಾಲಕನ ಮಗಳ ಸಾಧನೆ ಹೇಗಿದೆ ಗೊತ್ತಾ..?

ಬೆಂಗಳೂರು: ಸಿಬಿಎಸ್ಸಿ ಸಿಲಬಸ್ ನ ಸೆಕೆಂಡ್ ಪಿಯುಸಿ ರಿಸಲ್ಟ್ ನಿನ್ನೆ ಘೋಷಣೆಯಾಗಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಬೆಂಗಳೂರಿನಲ್ಲೂ ಫಲಿತಾಂಶ ಕಡಿಮೆ ಬಂದಿದೆ. ಅದರಲ್ಲಿ ಟ್ಯಾಂಕರ್ ಚಾಲಕನ ಮಗಳು ಅತ್ಯುತ್ತಮ ಅಂಕ ಪಡೆದಿರುವುದು

ರಾತ್ರಿ ವೇಳೆ ಅನ್ನದ ಬದಲು ಬರೀ ಚಪಾತಿ ತಿನ್ನುತ್ತಿದ್ದೀರಾ?

ಸುದ್ದಿಒನ್ : ಇತ್ತೀಚೆಗೆ, ಸ್ಥೂಲಕಾಯತೆಯು ಅನೇಕ ಯುವಜನರಿಗೆ ದೊಡ್ಡ ತಲೆನೋವಾಗಿದೆ. ಅದಕ್ಕಾಗಿ ಅವರು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಾರೆ. ಅದಕ್ಕಾಗಿ ರಾತ್ರಿ ಅನ್ನ ತಿನ್ನುವುದನ್ನು ಬಿಟ್ಟು ಹೆಚ್ಚು ಚಪಾತಿ ತಿನ್ನತೊಡಗುತ್ತಿದ್ದಾರೆ. ಆದರೆ ಇದರಿಂದ

error: Content is protected !!