Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಈ ವಾರ ಬಿಗ್ ಬಾಸ್ ಮನೆಯಿಂದ ಯಾರೂ ಹೊರ ಹೋಗಲ್ಲ : ಯಾಕೆ ಗೊತ್ತಾ..?

---Advertisement---

 

 

ಬಿಗ್ ಬಾಸ್ ಸೀಸನ್ 10 ಸದ್ಯ ಮೂರನೇ ವಾರದ ನಾಮಿನೇಷನ್ ಗೆ ಕಾಲಿಡುತ್ತಿದೆ. ಶನಿವಾರ ಮತ್ತು ಭಾನುವಾರ ಬಂತು ಅಂದ್ರೆ ಸಾಕು ಒಳಗಿರುವ ಸ್ಪರ್ಧಿಗಳಿಗೆ ನಾಮಿನೇಷನ್ ಭಯ ಶುರುವಾಗುತ್ತೆ. ನಮ್ಮನ್ನೆಲ್ಲಿ ಇವತ್ತು ಮನೆಯಿಂದ ಹೊರಗೆ ಕಳುಹಿಸಿ ಬಿಡುತ್ತಾರೋ ಎಂದು. ಆದರೆ ಈ ವಾರ ಎಲ್ಲರೂ ನಾಮಿನೇಷನ್ ನಿಂದ ಪಾರಾಗಿದ್ದಾರೆ.

ಕಳೆದ ವಾರ ವರ್ತೂರು ಸಂತೋಷ್ ಅವರನ್ನು ಹುಲಿ ಉಗುರು ಕೇಸ್ ನಿಂದಾಗಿ ಅರೆಸ್ಟ್ ಮಾಡಿದ್ದರು. ವಾರಕ್ಕೂ ಮೊದಲೇ ಒಬ್ಬ ಸ್ಪರ್ಧಿ ಕಡಿಮೆಯಾಗಿದ್ದರು. ಹೀಗಾಗಿ ಈ ವಾರ ನಾಮಿನೇಷನ್ ನಿಂದ ಒಬ್ಬರು ಬಚಾವ್ ಆಗಿದ್ದಾರೆ. ಆ ಸ್ಪರ್ಧಿ ಭಾಗ್ಯಶ್ರೀಯೇ ಆಗಿದ್ದರು ಎನ್ನಲಾಗುತ್ತಿದೆ. ಸದ್ಯ ಜೈಲಿನಿಂದ ಬಿಡುಗಡೆಯಾಗಿರುವ ವರ್ತೂರು ಸಂತೋಷ್ ನೇರ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.

ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಹೋಗಿರುವುದು ಸತ್ಯ. ಆದರೆ ಇನ್ನು ಅವರ ಎಪಿಸೋಡ್ ಶುರುವಾಗಿಲ್ಲ. ಸೋಮವಾರದಿಂದ ಅವರಿರುವ ಎಪಿಸೋಡ್ ಕಾಣಿಸಬಹುದು. ಬಿಗ್ ಬಾಸ್ ಮನೆಯಲ್ಲಿ ಆಗಾಗ ರಿಯಲ್ ಆಟ ಶುರುವಾಗುತ್ತೆ, ಮತ್ತೆ ಸೈಲೆಂಟ್ ಆಗಿಬಿಡುತ್ತೆ. ಕಿಚ್ಚ ಸುದೀಪ್ ಕೂಡ ತಮ್ಮ ಪಂಚಾಯ್ತಿಯಲ್ಲಿ ಅದನ್ನೇ ಹೇಳಿದ್ದಾರೆ. ಆಟದಲ್ಲಿ ಮಜಾ ಇಲ್ಲ, ಮನೆಯವರಲ್ಲಿ ಉತ್ಸುಕತೆ ಇಲ್ಲ, ಪರ್ಸನಾಲಿಟಿ ಅಂತು ತೋರಿಸುತ್ತಲೇ ಇಲ್ಲ ಅಂತ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿಯೇ ತಿಳಿಸಿದ್ದಾರೆ. ಕಿಚ್ಚನ ಮಾತನ್ನ ಸೀರಿಯಸ್ ಆಗಿ ತೆಗೆದುಕೊಂಡು, ಇನ್ನು ಮುಂದೆಯಾದರೂ ಬಿಗ್ ಬಾಸ್ ಸ್ಪರ್ಧಿಗಳು ಸೀರಿಯಸ್ ಆಗಿ ಆಟ ಆಡುತ್ತಾರಾ ಎಂಬುದನ್ನು ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment