ಬೆಂಗಳೂರು: ಹೊಸ ವರ್ಷದ ಸಂಭ್ರಮದ ಹೊಸ್ತಿಲಲ್ಲಿ ಜನರಿದ್ದಾರೆ. ಇಂದು ಒಂದೇ ಒಂದು ದಿನ ಕಳೆದರೆ 2026ಕ್ಕೆ ಮುನ್ನಡಿ ಬರೆಯಲಿದ್ದಾರೆ. ಹೀಗಾಗಿಯೇ 2025ನ್ನ ಬೀಳ್ಕೊಟ್ಟು 2026 ಅನ್ನು ಸ್ವಾಗತಿಸೋದಕ್ಕೆ ಜನ ಸಿದ್ಧವಾಗಿದ್ದಾರೆ. ಪಾರ್ಟಿ, ಸಾಂಗ್ಸ್ ಅಂತ ಕುಣಿದು ಕುಪ್ಪಳಿಸಲಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಂತೂ ಈ ಸಂಭ್ರಮ ಜೋರಾಗಿಯೇ ಇರಲಿದೆ. ನಮ್ಮ ಪೊಲೀಸರು ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆಯನ್ನು ಮಾಡಿಕೊಂಡಿದ್ದಾರೆ. ನ್ಯೂ ಇಯರ್ ಸೆಲೆಬ್ರೇಷನ್ ಅಂದ್ರೆ ಪಾರ್ಟಿ ಜೋರಾಗಿರುತ್ತೆ. ಮದ್ಯದ ಗಮ್ಮತ್ತಲ್ಲೇ ಜನ ತೇಲುತ್ತಾ ಇರ್ತಾರೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.
ಎಲ್ಲರನ್ನು ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ. ತುಂಬಾ ಅವರಿಗೆ ನಡೆಯೋದಕ್ಕೆ ಆಗ್ತಿಲ್ಲ, ಅವರಿಗೆ ಪ್ರಜ್ಞೆನೇ ಇರುವುದಿಲ್ಲ, ಎಂಜಾಯ್ಮೆಂಟ್ ಮಾಡುವಾಗ ಹತೋಟಿ ಕಳೆದುಕೊಂಡಿರುತ್ತಾರೆ. ಅಂತಹವಿರಿಗೆ ವಿಶ್ರಾಂತಿ ಸ್ಥಳಕ್ಕ ಬಿಡುತ್ತಾರೆ.
15 ಕಡೆ ಆ ರೀತಿಯ ಸ್ಥಳವನ್ನ ಮಾಡಿದ್ದಾರೆ. ಅವರನ್ನ ಎಚ್ಚರವಾಗುವ ತನಕ ಇಟ್ಟುಕೊಂಡು, ಆಮೇಲೆ ಅವರ ಮನೆ ವಿಳಾಸ ತಗೊಂಡು ಮನೆಗೆ ಕಳುಹಿಸಿಕೊಡುವ ಕೆಲಸ ಮಾಡುತ್ತೇವೆ. ವಿಶೇಷವಾಗಿ ಹೆಣ್ಣು ಮಕ್ಕಳು, ಆ ಸಂದರ್ಭದಲ್ಲಿ ಯಾವ್ಯಾವ ಪರಿಸ್ಥಿತಿಯಲ್ಲಿರ್ತಾರೆ ಅನ್ನೋದು ಹೇಳುವುದಕ್ಕೆ ಬರಲ್ಲ. ಪ್ರಜ್ಞೆ ಇಲ್ಲದೆ ಇದ್ದಾಗ ಅವರಿಗೆ ಯಾರು ಏನು ಬೇಕಾದರೂ ಮಾಡಬಹುದು. ಆ ಕಾರಣಕ್ಕೆ ನಾವೂ ಈಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇದು ದುರುಪಯೋಗ ಆಗಬಾರದು. 30 ಜಿಲ್ಲೆಗಳಲ್ಲೂ ಕಟ್ಟುನಿಟ್ಟಿನ ಭದ್ರತೆಯನ್ನ ಒದಗಿಸಿದ್ದೀವಿ. ವಿಶೇಷವಾಗಿ ಬೆಂಗಳೂರಿಗೆ ಪ್ರತಿ ವರ್ಷ ಹೊರಗಿನಿಂದ ಬರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






