ದಾವಣಗೆರೆ : ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆಯ ಅಬ್ಬರದ ಪ್ರಚಾರ ನಡೆಯುತ್ತಿದೆ. ಆದರೆ ಬಂಡಾಯದ ಬಿಸಿಯೂ ಕಾಂಗ್ರೆಸ್ ಗೆ ತಟ್ಟಿದೆ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಕ್ಷೇತ್ರವಾದ್ದರಿಂದ, ಉಪಚುನಾವಣೆಗೆ ಅವರ ಕುಟುಂಬಸ್ಥರಿಗೇನೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದು ಅಲ್ಪಸಂಖ್ಯಾತರಿಗೆ ಬೇಸರ ಮೂಡಿಸಿದೆ. ಅಲ್ಪಸಂಖ್ಯಾತರಿಗೇನೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದ ಸಚಿವ ಜಮೀರ್ ಅಹ್ಮದ್ ಅವರೇ ಹೈಕಮಾಂಡ್ ಮಾತಿಗೆ ತಲೆ ಬಾಗಿ ಸುಮ್ಮನೆ ಆಗಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಸಾಧಿಕ್ ಪೈಲ್ವಾನ್ ಯಾವ ಮಾತುಗಳು ಸಮಾಧಾನ ತರಿಸಿಲ್ಲ.
ಯಾವುದೇ ಕಾರಣಕ್ಕೂ ನಾಮಪತ್ರ ವಾಪಾಸ್ ತೆಗೆದುಕೊಳ್ಳಲ್ಲ ಎಂದಿದ್ದಾರೆ. ನಾಮಪತ್ರ ವಾಪಾಸ್ ಪೇಯಲು ಇಂದು ಮಧ್ಯಾಹ್ನ 3 ಗಂಟೆಯವರೆಗೂ ಸಮಯಾವಕಾಶ ಇತ್ತು. ಹೀಗಾಗಿ ಸಾದಿಕ್ ಪೈಲ್ವಾನ್ ಅವರ ಮನವೊಲಿಸಲು ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಕೊನೆಯ ಕ್ಷಣದವರೆಗೂ ಕಸರತ್ತು ನಡೆಸಿದರು. ನಾಯಕರ ಸಂಧಾನಕ್ಕೆ ಮಣಿಯದ ಸಾದಿಕ್ ಪೈಲ್ವಾನ್ ಸ್ಪರ್ಧಾಕಣದಲ್ಲಿ ಮುಂದುವರೆಯುವ ನಿರ್ಧಾರಕ್ಕರ ಅಂಟಿಕೊಂಡಿದ್ದಾರೆ.

ಇದರಿಂದ ಅಲ್ಪಸಂಖ್ಯಾತ ಮುಖಂಡರ ಮನವೊಲಿಸುವಂತೆ ಹೈಕಮಾಂಡ್ ಸೂಚನೆ ನೀಡಿದ್ದರೂ, ಸದ್ಯಕ್ಕೆ ಆ ಪ್ರಯತ್ನ ವಿಫಲವಾದಂತಾಗಿದೆ. ಸಾದಿಕ್ ಅವರು ಪಕ್ಷಕ್ಕಾಗಿ ಸಾಕಷ್ಟು ವರ್ಷ ದುಡಿದಿದ್ದಾರೆ. ಟಿಕೆಟ್ ಸಿಗದೆ ಇರುವ ಕಾರಣ ಸ್ವಲ್ಪ ಬೇಸರಗೊಂಡಿದ್ದಾರೆ. ನಾವೂ ಅವರ ಜೊತೆಗೆ ಮತ್ತೊಮ್ಮೆ ಮಾತನ್ನಾಡುತ್ತೇವೆ. ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಮೊದಲೇ ಬಿಜೆಪಿ ನಾಯಕರು ಕೂಡ ಗೆದ್ದೆ ಗೆಲ್ಲಬೇಕೆಂದು ಸಾಕಷ್ಟು ಪ್ರಯತ್ನ ಮಾಡ್ತಾ ಇದ್ದಾರೆ. ಹೀಗಿರುವಾಗ ಕಾಂಗ್ರೆಸ್ ನಲ್ಲಿ ವೋಟ್ ಗಳು ಡಿವೈಡ್ ಆಗುವ ಸಾಧ್ಯತೆ ಇರುತ್ತದೆ.
















