Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನನ್ನ ಮಗ ದೇವರ ಫಲ ಅವನೇ ಕಿತ್ತುಕೊಂಡ : ಪೋಷಕರ ನೋವಿನ ನುಡಿ…!

---Advertisement---

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 13 : ‘ಮುಂದಿನ ವಾರ ಅಮಾವಾಸ್ಯೆ, ದೇವಸ್ಥಾನಕ್ಕೆ ಜಾಸ್ತಿ ಜನ ಬರ್ತಾರೆ. ಆವಾಗ ಬಂದ್ರೆ ನಿನಗೂ ಸಹಾಯ ಆಗುತ್ತೆ..ಈ ವಾರ ಇಲ್ಲೇ ಇರ್ತಿನಿ..’ ಇದು ಮಿಥುನ್ (23) ತನ್ನ ತಾಯಿ ಜತೆ ಮಾತನಾಡಿದ ಕೊನೆ ಮಾತು.

ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ 8 ರಿಂದ 8.30 ಸುಮಾರಿಗೆ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿರುವಾಗ ಮೈಸೂರು ಹಾಸನ ಹೆದ್ದಾರಿಯಲ್ಲಿ ಹಾಸನದ ಕಡೆಯಿಂದ ಬಂದ ಲಾರಿಯು ಡಿಕ್ಕಿ ಹೊಡೆದ ಪರಿಣಾಮ 9 ಜನ ಮೃತಪಟ್ಟಿದ್ದಾರೆ.ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಗವಿರಂಗನಾಥ ಪುರದ ಗ್ರಾಮದ ವಿಜಯ ನಾಗರಾಜು, ಕುಸುಮಾ ದಂಪತಿ ಪುತ್ರ ಮಿಥುನ್.

ಇಬ್ಬರು ಸಹೋದರಿಯ ಜತೆ ಬೆಳೆದಿದ್ದ ಮಿಥುನ್ ಬಾಲ್ಯದಿಂದಲೇ ಓದಿನಲ್ಲಿ ಎಲ್ಲರ ಗಮನ ಸೆಳೆದಿದ್ದ. ಸರ್ಕಾರಿ ಶಾಲೆಯಲ್ಲಿ ಓದಿದ್ದ. ಬಳಿಕ ಹಾಸನದ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿದ್ದ. ಇದೀಗ ಕೊನೆ ಸೆಮಿಸ್ಟರ್ ನಲ್ಲಿದ್ದ ಮಿಥುನ್ ತನ್ನ ಜನ್ಮ ದಿನದಂದೇ ಉಸಿರು ನಿಲ್ಲಿಸಿದ್ದಾನೆ.

ನಿತ್ಯ ಒಮ್ಮೆ ಮಾತ್ರ ಮನೆಗೆ ಕರೆ ಮಾಡಿ ಮಾತನಾಡುತ್ತಿದ್ದ ಮಿಥುನ್ ಜನ್ಮ ದಿನ ಎಂದು ಶುಕ್ರವಾರ ಎರಡು ಬಾರಿ ಕರೆ ಮಾಡಿ ಕುಟುಂಬಸ್ಥರ ಜತೆ ಮಾತನಾಡಿದ್ದ. ಶನಿವಾರ ಬಾ ಎಂದು ಊರಿಗೆ ಕರೆದ ತಾಯಿಗೆ ಅಮ್ಮ ಮುಂದಿನ ವಾರ ಬರ್ತಿನಿ ಎಂದು ಹೇಳಿದ್ದ ಎನ್ನುತ್ತಾ ಕಣ್ಣೀರಾದರು ಕುಟುಂಬಸ್ಥರು.

ಮಗ ಲ್ಯಾಪ್ ಟಾಪ್ ಹೇಳಿದ್ದ ಕೊಡಿಸುವ ಸಿದ್ಧತೆಯಲ್ಲಿದ್ದ ತಂದೆ ಮಗನ ಸಾವಿನ‌ ಸುದ್ದಿಯಿಂದ ‘ಇಬ್ಬರು ಪುತ್ರಿಯರ ಬಳಿಕ ದೇವರಿಗೆ ಹರಕೆ ಹೊತ್ತ ಬಳಿಕ ಆ ದೇವರು ನೀಡಿದ ಫಲ ನನ್ನ‌ ಮಗ. ಆದ್ರೆ ತಾನು ನೀಡಿದ ಫಲವನ್ನು ಜನ್ಮ‌ದಿನದಂದೇ ಅದು ಗಣಪತಿ‌ ಮುಂದೆಯೇ ಕಿತ್ತು ಕೊಂಡಿದ್ದಾನೆ. ಏನೂ ಹೇಳ ಬೇಕು..’ ಎಂದು ಗೋಳಾಡಿದರು ಗವಿರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಥುನ್ ತಂದೆ ವಿಜಯ ನಾಗರಾಜು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...