ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ರಾಮಚಂದ್ರ ಮಿಷನ್ ವತಿಯಿಂದ ಪ್ರಥಮ ಬಾರಿಗೆ ತ.ರಾ.ಸು. ರಂಗಮಂದಿರದಲ್ಲಿ ಮಾ. 9 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಐದರವರೆಗೆ ಧ್ಯಾನೋತ್ಸವ ಏರ್ಪಡಿಸಲಾಗಿದೆ.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಧ್ಯಾನೋತ್ಸವ ಉದ್ಗಾಟಿಸಲಿದ್ದಾರೆ. ಹಾರ್ಟ್ಫುಲ್ನೆಸ್ ರಾಜ್ಯ ಸಂಚಾಲಕ ಮೈಸೂರಿನ ಕೆ.ಮಧುಸೂದನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಸ್.ಎನ್. ಕಾಶಿವಿಶ್ವನಾಥಶೆಟ್ಟಿ, ಹಾರ್ಟ್ಫುಲ್ನೆಸ್ ಹಿರಿಯ ಪ್ರಶಿಕ್ಷಕ ಎನ್.ಎಸ್.ನಾಗರಾಜ, ಡಾ.ಕೆ.ರಘು ಇವರುಗಳು ಭಾಗವಹಿಸಲಿದ್ದಾರೆ. ಹಾರ್ಟ್ಫುಲ್ನೆಸ್ ಧ್ಯಾನ ಕುರಿತ ಮೊದಲನೆ ಗೋಷ್ಟಿಯಲ್ಲಿ ಎನ್.ಎಸ್.ನಾಗರಾಜ ಹಾರ್ಟ್ಫುಲ್ನೆಸ್ ಧ್ಯಾನ ಕುರಿತು ಉಪನ್ಯಾಸ ನೀಡಲಿದ್ದಾರೆ.

ಹಾರ್ಟ್ಫುಲ್ನೆಸ್ ಶುದ್ದೀಕರಣ ಕುರಿತು ಎರಡನೇ ಗೋಷ್ಠಿಯಲ್ಲಿ ಡಾ.ಕೆ.ರಘು ಉಪನ್ಯಾಸ ನೀಡುವರು. ಹಾರ್ಟ್ಫುಲ್ನೆಸ್ ಪ್ರಾರ್ಥನೆ ಕುರಿತು ಮೂರನೆ ಗೋಷ್ಠಿಯಲ್ಲಿ ಗಿರೀಶ ಟೊಟ್ಲೂರ್ ಉಪನ್ಯಾಸ ನೀಡುವರು. ಡಾ.ಕೆ.ರಘು, ಎಸ್.ವೆಂಕಟಾದ್ರಿ, ಇವರುಗಳು ಗೋಷ್ಠಿಯಲ್ಲಿ ಸಂವಾದ ನಡೆಸುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಾರ್ಟ್ಫುಲ್ನೆಸ್ ಹಿರಿಯ ಪ್ರಶಿಕ್ಷಕ ಪ್ರಸನ್ನಕೃಷ್ಣ ವಹಿಸುವರು. ಡಾ.ವಿ.ಬಸವರಾಜ ಸಮಾರೋಪ ನುಡಿಗಳನ್ನಾಡುವರು. ಹಾರ್ಟ್ಫುಲ್ನೆಸ್ ಧ್ಯಾನ ಪದ್ದತಿಯ ವಿವಿಧ ವಿಧಾನಗಳನ್ನು ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ಪ್ರಶ್ನೋತ್ತರಗಳ ಮೂಲಕ ಪರಿಚಯಿಸಲಾಗುವುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಜ ಮಾರ್ಗ ಧ್ಯಾನ ಪದ್ದತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಶಿಕ್ಷಕ ಡಾ.ವಿ.ಬಸವರಾಜ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ : 8217200864, 7892244382 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.


