ನನಗೆ ಧೈರ್ಯ ತುಂಬಿದ್ದ ವಿಜಯ್ ಗೆ ಆ ದೇವರು ಶಕ್ತಿ ನೀಡಲಿ : ಪ್ರಿಯಾಂಕ್ ಖರ್ಗೆ

1 Min Read

 

ಬೆಂಗಳೂರು: ಇಂದು ಸ್ಪಂದನಾ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಸಿನಿಮಾರಂಗದವರ ಜೊತೆಗೆ ರಾಜಕೀಯ ಗಣ್ಯರು ಸ್ಪಂದನಾ ಅಂತಿಮ ದರ್ಶನ ಪಡೆದಿದ್ದಾರೆ. ಸ್ಪಂದನಾ ಕುಟುಂಬ ರಾಜಕೀಯದಲ್ಲೂ ಇದೆ. ಹೀಗಾಗಿ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಂತಿಮ ದರ್ಶನ ಪಡೆದ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸ್ಪಂದನಾ ಬಹಳ ಸ್ನೇಹಜೀವಿಯಾಗಿದ್ದರು. ಸ್ಪಂದನಾ ನಿಧನ ಕುಟುಂಬಕ್ಕಷ್ಟೇ ಅಲ್ಲ, ಸ್ನೇಹಿತರಿಗೂ ತುಂಬಲಾರದ ನಷ್ಟ. ವಿಜಯ್ ಗೆ ಈ ಸಮಯದಲ್ಲಿ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ವಿಜಯ್ ರಾಘವೇಂದ್ರ ತಾನೊಬ್ಬ ಸ್ಟಾರ್ ಎಂದು ಯಾವತ್ತು ಮೆರೆದವನಲ್ಲ.

ನಾನು ವಿಜಯ್ ಬಾಲ್ಯದಿಂದಾನೂ ಜೊತೆಗೆ ಬೆಳೆದವರು. ನನ್ನ ಹೆಂಡತಿಗೆ ಹುಷಾರಿಲ್ಲದೆ ಇದ್ದಾಗ ವಿಜಯ್ ಕಾಲ್ ಮಾಡಿ‌ ಧೈರ್ಯ ಹೇಳಿದ್ದ. ಈಗ ಸ್ಪಂದನಾ ವಿಚಾರದಲ್ಲಿ ದೇವರೇ ಶಕ್ತಿ ನೀಡಬೇಕು. ದೇವರು ವಿಜಯ್ ಗೆ ಈ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *