Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನನಗೆ ಧೈರ್ಯ ತುಂಬಿದ್ದ ವಿಜಯ್ ಗೆ ಆ ದೇವರು ಶಕ್ತಿ ನೀಡಲಿ : ಪ್ರಿಯಾಂಕ್ ಖರ್ಗೆ

Facebook
Twitter
Telegram
WhatsApp

 

ಬೆಂಗಳೂರು: ಇಂದು ಸ್ಪಂದನಾ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಸಿನಿಮಾರಂಗದವರ ಜೊತೆಗೆ ರಾಜಕೀಯ ಗಣ್ಯರು ಸ್ಪಂದನಾ ಅಂತಿಮ ದರ್ಶನ ಪಡೆದಿದ್ದಾರೆ. ಸ್ಪಂದನಾ ಕುಟುಂಬ ರಾಜಕೀಯದಲ್ಲೂ ಇದೆ. ಹೀಗಾಗಿ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಂತಿಮ ದರ್ಶನ ಪಡೆದ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸ್ಪಂದನಾ ಬಹಳ ಸ್ನೇಹಜೀವಿಯಾಗಿದ್ದರು. ಸ್ಪಂದನಾ ನಿಧನ ಕುಟುಂಬಕ್ಕಷ್ಟೇ ಅಲ್ಲ, ಸ್ನೇಹಿತರಿಗೂ ತುಂಬಲಾರದ ನಷ್ಟ. ವಿಜಯ್ ಗೆ ಈ ಸಮಯದಲ್ಲಿ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ವಿಜಯ್ ರಾಘವೇಂದ್ರ ತಾನೊಬ್ಬ ಸ್ಟಾರ್ ಎಂದು ಯಾವತ್ತು ಮೆರೆದವನಲ್ಲ.

ನಾನು ವಿಜಯ್ ಬಾಲ್ಯದಿಂದಾನೂ ಜೊತೆಗೆ ಬೆಳೆದವರು. ನನ್ನ ಹೆಂಡತಿಗೆ ಹುಷಾರಿಲ್ಲದೆ ಇದ್ದಾಗ ವಿಜಯ್ ಕಾಲ್ ಮಾಡಿ‌ ಧೈರ್ಯ ಹೇಳಿದ್ದ. ಈಗ ಸ್ಪಂದನಾ ವಿಚಾರದಲ್ಲಿ ದೇವರೇ ಶಕ್ತಿ ನೀಡಬೇಕು. ದೇವರು ವಿಜಯ್ ಗೆ ಈ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!