ಸುದ್ದಿಒನ್, ಚಿತ್ರದುರ್ಗ, ಮೇ. 25 : ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡುರುವ ನಾಡಿನ ಹೆಮ್ಮೆಯ ಸಾಹಿತಿ ಡಾ .ಬಿ ಎಲ್.ವೇಣು ಅವರ ಹುಟ್ಟು ಹಬ್ಬವನ್ನು ಅವರ ಮನೆಯಂಗಳದಲ್ಲಿ ಮೇ.27 ರ ಮಂಗಳವಾರ ಬೆಳಿಗ್ಗೆ 11.45 ಕ್ಕೆ ಆಚರಿಸಲು ತೀರ್ಮಾನಿಸಲಾಗಿದೆ.
ಸೃಷ್ಟಿಸಾಗರ ಪ್ರಕಾಶನ ಹಾಗೂ ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರ ಇವರ ಸಹಯೋಗದಲ್ಲಿ ಎಂದಿನಂತೆ ಈ ವರ್ಷವೂ ಬಿ .ಎಲ್.ವೇಣು ಅವರ ಜನುಮ ದಿನವನ್ನು ಆಚರಿಸಲಾಗುವುದು. ಈ ಸರಳ ಕಾರ್ಯಕ್ರಮ ದಲ್ಲಿ ವೇಣು ಅವರ ಅಭಿಮಾನಿಗಳು, ಸಾಹಿತಿಗಳು ,ಜನಪರ ಹೋರಾಟಗಾರರು ಭಾಗವಹಿಸಬೇಕೆಂದು ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರ (ರಿ) ದ ಡಿ .ಗೋಪಾಲಸ್ವಾಮಿ ನಾಯಕ ಹಾಗೂ ಸೃಷ್ಟಿ ಸಾಗರ ಪ್ರಕಾಶನ ಮುಖ್ಯಸ್ಥ ಮೇಘ ಗಂಗಾಧರ ನಾಯ್ಕ ಮನವಿ ಮಾಡಿದ್ದಾರೆ.















