ಮಹೇಶ್ ತಿಮರೋಡಿ ಅರೆಸ್ಟ್ : ನನಗೆ ಏನಾದರೂ ಸರ್ಕಾರವೇ ಹೊಣೆ ಎಂದ ತಿಮರೋಡಿ

1 Min Read

ಮಂಗಳೂರು: ಬಿಎಲ್ ಸಂತೋಷ್ ವಿರುದ್ಧ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಅವಹೇಳನವಾಗಿ ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆಯ ಅನುಸಾರವಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರು ದೂರನ್ನು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತಿಮ್ಮರೋಡಿ ಮನೆಗೆ ಬಂದಿದ್ದಾರೆ. ಸುಮಾರು ಎಂಟು ಜೀಪ್ ಗಳಲ್ಲಿ ಉಡುಪಿಯಿಂದ ಬಂದಂತ ಪೊಲೀಸರು, ಮಹೇಶ್ ತಿಮರೋಡಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಎಸ್ಪಿ ಸುಧಾಕರ್ ನಾಯಕ್ ಅವರ ನೇತೃತ್ವದ ತಂಡ ಹಾಗೂ ಕಾರ್ಕಳ, ಮಣಿಪಾಲ ಸೇರಿದಂತೆ ಬ್ರಹ್ಮಾವರ ನೇತೃತ್ವದ ತಂಡ ಮಹೇಶ್ ತಿಮರೋಡಿ ಮನೆಗೆ ಬಂದು ಅವರನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ತಿಮರೋಡಿ ಅವರು ಹೈಡ್ರಾಮವನ್ನೇ ಶುರು ಮಾಡಿದ್ದಾರೆ. ನನಗೆ ಏನೆರ ಆದರೂ ಸರ್ಕಾರವೇ ಹೊಣೆ ಎಂದು ಗರಂ ಆಗಿದ್ದಾರೆ.

ನನ್ನ ಜೀವಕ್ಕೆ ಏನಾದರೂ ಆದರೆ ರಾಜ್ಯ ಸರ್ಕಾರವೇ ಕಾರಣವಾಗುತ್ತದೆ. ಇಡೀ ಬಿಜೆಪಿಯವರು ಕಾರಣ ಆಗ್ತಾರೆ. ಸೌಜನ್ಯ ಕೇಸ್ ಗೆ ನ್ಯಾಯ ಸಿಗಬೇಕು. ನನಗೆ ಏನಾದರೂ ಪರವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಅರೆಸ್ಟ್ ಮಾಡುವುದಕ್ಕೆ ಬಂದಾಗ ಗಿರೀಶ್ ಮಟ್ಟಣ್ಣನವರ್ ಅವರು ಕೂಡ ಪೊಲೀಸರನ್ನು ಪ್ರಶ್ನೆ ಮಾಡಿದ್ದರು. ವಿಚಾರಣೆಗೆ ಬರಬೇಕು ಎಂದರೆ ನಾವೇ ಕರೆದುಕೊಂಡು ಬರ್ತೀವಿ. ಇದ್ದಕ್ಕಿದ್ದ ಹಾಗೇ ಇಷ್ಟೊಂದು ಜನ ಪೊಲೀಸರ ಜೊತೆಗೆ ಬರುವುದು ಸರಿಯಾದ ಕ್ರಮವಲ್ಲ. ನಾವೇ ಕರೆದುಕೊಂಡು ಬರ್ತೀವಿ ಎಂಬ ಮಾತನ್ನ ಗಿರೀಶದ ಮಟ್ಟಣ್ಣನವರ್ ಹಾಗೂ ತಿಮರೋಡಿ ಅವರ ಪರ ವಕೀಲರು ಮಾತನಾಡಿದ್ದರು. ಅವರ್ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಉಡುಪಿ ಪೊಲೀಸರು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *