Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಡೆನೂರು ಮನು ಅತ್ಯಾ* ಕೇಸ್ : ದಿಢೀರ್ ಅಂತ ಕೇಸ್ ವಾಪಾಸ್ ಪಡೆದ ಸಂತ್ರಸ್ತೆ..!

---Advertisement---

ಬೆಂಗಳೂರು: ಮಡೆನೂರು ಮನು ತನ್ನ ಸಹಪಾಠಿಯ ಜೊತೆಗೆ ಚೆನ್ನಾಗಿದ್ದು, ಮದುವೆಯಾಗುವ ಭರವಸೆಯನ್ನು ನೀಡಿ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಮಡೆನೂರು ಮನು, ಇದೀಗ ಕಂಪ್ಲೀಟ್ ರಿಲೀಫ್ ಆಗಿದ್ದಾರೆ. ಜಾಮೀನು ಪಡೆದು ಹೊರ ಬಂದ ಮನು ವಿರುದ್ಧ ಹಾಕಿದ್ದ ಕೇಸ್ ಅನ್ನ ಸಂತ್ರಸ್ತೆ ವಾಪಾಸ್ ಪಡೆದಿದ್ದಾರೆ.

ಸಿನಿಮಾ ರಿಲೀಸ್ ಆದಂತ ಸಂದರ್ಭದಲ್ಲಿಯೇ ಮಡೆನೂರು ಮನು ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಲಾಗಿತ್ತು. ನಂಬಿಕೆ ದ್ರೋಹದ ಕೇಸ್ ಕೂಡ ಹಾಕಲಾಗಿತ್ತು. ಇದೀಗ ಇಬ್ಬರು ರಾಜೀಯಾಗಿದ್ದು, ಕೇಸ್ ಇತ್ಯರ್ಥಗೊಂಡಿದೆ. ಹೈಕೋರ್ಟ್ ಪೀಠವೂ ಈ ಪ್ರಕತಣವನ್ನ ಇತ್ಯರ್ಥಗೊಳಿಸಿದೆ. ಇಬ್ಬರು ಕೂಡ ರಾಜೀಗೆ ಒಪ್ಪಿಗೆ ನೀಡಿದ್ದರಿಂದ ಕೋರ್ಟ್ ಕೇಸನ್ನ ಇತ್ಯರ್ಥಗೊಳಿಸಿದೆ. ಕೋರ್ಟ್ ನಲ್ಲಿ ಕೇಸ್ ಇತ್ಯರ್ಥಗೊಳ್ಳುತ್ತಿದ್ದಂತೆ ಸಂತ್ರಸ್ತೆ ನಗುತ್ತಾ ಹೊರಗೆ ಬಂದಿದ್ದಾರೆ. ಇಬ್ಬರು ಜೊತೆಯಾಗಿಯೇ ಕಾಣಿಸಿಕೊಂಡಿದ್ದಾರೆ.

ಮಡೆನೂರು ಮನು ಹಾಗೂ ಸಂತ್ರಸ್ತೆ ಇಬ್ಬರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು‌. ಅಲ್ಲಿಂದ ಇಬ್ಬರು ಆತ್ಮೀಯವಾಗಿದ್ದರು. ಆದರೆ ಮಡೆನೂರು ಮನು ನನಗೆ ಅನ್ಯಾಯ ಮಾಡಿದ್ದಾನೆ, ನಂಬಿಸಿ ಮೋಸ ಮಾಡಿದ್ದಾನೆ. ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರ ಮಾಡಿದ್ದಾನೆ, ಗರ್ಭಪಾತ ಮಾಡಿಸಿದ್ದಾನೆ. ನನಗೆ ನ್ಯಾಯ ಬೇಕು ಅಂತ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆ ಬಳಿಕ ಪೊಲೀಸರು ಮಡೆನೂರು ಮನುನ ಅರೆಸ್ಟ್ ಮಾಡಿದ್ದರು. ಒಂದಷ್ಟು ದಿನ ಜೈಲಿನಲ್ಲಿದ್ದ ಮನು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ‌. ಮನು ಕನ್ನಡ ಇಂಡಸ್ಟ್ರಿಯ ದಿಗ್ಗಜರ ಬಗ್ಗೆ ಎಲ್ಲಾ ಹಗುರವಾಗಿ ಮಾತನಾಡಿದ್ದ ಕಾರಣಕ್ಕೆ ಇಡೀ ಇಂಡಸ್ಟ್ರಿ ಆತನ ಬಗ್ಗೆ ಬೇಸರ ಮಾಡಿಕೊಂಡಿತ್ತು. ಇದೀಗ ಕೇಸ್ ಕೂಡ ಇತ್ಯಾರ್ಥವಾಗಿದೆ. ಇಂಡಸ್ಟ್ರಿ ಮಡೆನೂರು ಮನುಗೆ ಅವಕಾಶ ಕೊಡುತ್ತಾ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment