ಫೆ.17 ಮತ್ತು 18 ರಂದು ಸಾಹಿತ್ಯ ಸಮ್ಮೇಳನ : ಎಲ್ಲರೂ ಭಾಗವಹಿಸುವಂತೆ ಮನವಿ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 14 : ಐತಿಹಾಸಿಕ ಚಿತ್ರದುರ್ಗದ ಕೋಟೆ ನಾಡಿನಲ್ಲಿ ಫೆ.17 ಮತ್ತು 18 ರಂದು ನಡೆಯುವ ಹದಿನೆಂಟನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸುವಂತೆ ಕರುನಾಡ ವಿಜಯಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಕಾರ್ಯಕರ್ತರು ಶನಿವಾರ ನಗರದ ಪ್ರಮುಖ ಬೀದಿಗಳಲ್ಲಿರುವ ಅಂಗಡಿ ಮಾಲೀಕರುಗಳಿಗೆ ಮತ್ತು ಸಾರ್ವಜನಿರಲ್ಲಿ ವಿನಂತಿಸಿದರು.

 

ಗಾಂಧಿವೃತ್ತ, ದೊಡ್ಡಪೇಟೆ, ಆನೆಬಾಗಿಲು ರಸ್ತೆ, ಪ್ರಮುಖ ಬೀದಿ ಹಾಗೂ ಸಂತೆಹೊಂಡದ ರಸ್ತೆಯಲ್ಲಿ ಪ್ರತಿ ಅಂಗಡಿಗಳಿಗೆ ತೆರಳಿದ ಕಾರ್ಯಕರ್ತರು ಕಡ್ಡಾಯವಾಗಿ ಕನ್ನಡ ನಾಮಫಲಗಳನ್ನು ಅಂಗಡಿ ಮೇಲೆ ಬರೆಸಬೇಕು. ಇಲ್ಲವಾದಲ್ಲಿ ನಾವುಗಳೆ ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಬೇಕಾಗುತ್ತದೆಂದು ಎಚ್ಚರಿಸಿದರು.
ಚಿತ್ರದುರ್ಗದಲ್ಲಿ ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಕನ್ನಡ, ನಾಡು, ನುಡಿ, ನೆಲ, ಜಲದ ರಕ್ಷಣೆಗೆ ಎಲ್ಲರೂ ಒತ್ತು ಕೊಡಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಟಿ.ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಯುವ ಘಟಕದ ಘನಶ್ಯಾಂ, ಮಲ್ಲಪ್ರಸಾದ್ ಕುಮಾರ್, ಉಮೇಶ್, ಮಂಜುಳ, ಉಮ, ಲಕ್ಷ್ಮಣ, ರಾಜಪ್ಪ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ , ನಿಸಾರ್ ಅಹಮದ್, ಹಿರಿಯೂರು ಅಧ್ಯಕ್ಷ ತಿಪ್ಪೇಸ್ವಾಮಿ, ಶರತ್, ಜಗದೀಶ್, ಮುಜಾಹಿದ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
Enable Notifications OK No thanks