ಡಿಕೆ ಶಿವಕುಮಾರ್ ಮುಂದೆ ಯಾವ ಕುದುರೆ ಏರುತ್ತಾರೆ ನೋಡೋಣಾ : ಬೊಮ್ಮಾಯಿ

suddionenews
1 Min Read

 

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದಾರೆ. ಪವರ್ ಪಾಲಿಟಿಕ್ಸ್ ಬಗ್ಗೆಯೂ ಮಾತನಾಡಿದ್ದಾರೆ.

ಒಂದು ಕಾಲದಲ್ಲಿ ಪವರ್ ಪಾಲಿಟಿಕ್ಸ್ ವೈಟಿಂಗ್ ಗೇಮ್ ಆಗಿತ್ತು. ಈಗ ರಾಜಕಾರಣ ವೈಟಿಂಗ್ ಗೇಮ್ ಆಗಿ ಉಳಿದಿಲ್ಲ. ಯಾರು ಅಧಿಕಾರ ಕೊಡಲ್ಲ. ಅಧಿಕಾರ ಬಂದಾಗ ಪಡೆಯಬೇಕು. ಸರಿಯಾದ ರೀತಿಯಲ್ಲಿ ಅಧಿಕಾರ ಪಡೆಯಲು ಚುನಾವಣೆ ಅಂತಾರೆ. ಚುನಾವಣೆಯಲ್ಲಿ ಶಕ್ತಿ ಇದ್ದವರು ಅಧಿಕಾರ ಪಡೆದುಕೊಳ್ಳುತ್ತಾರೆ. ಶಕ್ತಿ ಇಲ್ಲದವರು ಅಧಿಕಾರ ಪಡೆದುಕೊಳ್ಳಲ್ಲ.

ಕೊಟ್ಟ ಕುದುರೆ ಏರದ ಮೇಲೆ ವೀರನು ಅಲ್ಲ ಸೂರನು ಅಲ್ಲ ಎಂಬ ಮಾತಿದೆ. ಯಾವ ಸಂಶಯವೂ ಇಲ್ಲ. ಈ ಹಿಂದೆ ಡಿಕೆ ಪವರ್ ಖಾತೆ ತೆಗೆದುಕೊಂಡಿದ್ದರು. ರಾಜಕೀಯದಲ್ಲಿ ಯಾವುದು ಶಾಶ್ವತ ಅಲ್ಲ ಬದಲಾವಣೆಯೇ ಶಾಶ್ವತ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *