ಸುದ್ದಿಒನ್, ಬೆಂಗಳೂರು, ನವೆಂಬರ್.08 : ಪ್ರತಿಷ್ಠಿತ ಫೋರ್ಟಿಸ್ ಆಸ್ಪತ್ರೆ ಬೆಂಗಳೂರು ಇವರಿಂದ ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಮೊಣಕಾಲು ಮತ್ತು ಕೀಲುನೋವು ತಪಾಸಣೆ ಶಿಬಿರವನ್ನು ನವೆಂಬರ್ 10 ರಂದು ಏರ್ಪಡಿಸಲಾಗಿದೆ.
ಅಂತರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸಲಹಾತ್ಮಕ ಮೂಳೆರೋಗ ಶಸ್ತ್ರಚಿಕಿತ್ಸೆ ತಜ್ಞರು ಮತ್ತು ರೊಬೊಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜನ್ ಆದ ಡಾ. ನವೀನ್ ಡಿ. ಗೌಡ ಅವರು ಈ ತಪಾಸಣಾ ಶಿಬಿರದಲ್ಲಿ ಮೊಣಕಾಲು ಮತ್ತು ಕೀಲುನೋವು ತಪಾಸಣೆ ನಡೆಸಲಾಗುತ್ತದೆ. ಈ ಕೆಳಕಂಡ
ರೋಗಲಕ್ಷಣಗಳು ಇರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದೆ.
• ಸೊಂಟ, ಮೊಣಕಾಲು ಮತ್ತು ಕೀಲು ನೋವುಗಳು
• ನಡೆಯಲು ಕಷ್ಟವಾಗುವಿಕೆ,
• ವೃದ್ಧರಿಗಾಗಿ ಕೀಲು ಬದಲಿ ವ್ಯವಸ್ಥೆ
• ಕೀಹೋಲ್ ಮೂಳೆಚಿಕಿತ್ಸೆಯ ಕಾರ್ಯಾಚರಣೆಗಳು
• ರೊಬೊಟಿಕ್ ಜಾಯಿಂಟ್ ರಿಪ್ಲೇಸ್ ಮೆಂಟ್ ಸೇರಿದಂತೆ ಇತರೆ ಯಾವುದೇ ರೀತಿಯ ಕೀಲು ನೋವುಗಳಿಗೆ ಸೂಕ್ತ ಪರಿಹಾರ ನೀಡುತ್ತಾರೆ.
ದಾವಣಗೆರೆಯಲ್ಲಿ :
ದಿನಾಂಕ: 10ನೇ ನವೆಂಬರ್ 2023 (ಶುಕ್ರವಾರ)
ವಿಶ್ವಾಸ್ ಲೈಫ್ ಕೇರ್,
ವಿದ್ಯಾರ್ಥಿ ಭವನ ಸರ್ಕಲ್ ಹಡಡಿ ರಸ್ತೆ, ದಾವಣಗೆರೆಯಲ್ಲಿ ಸಮಯ: ಬೆಳಿಗ್ಗೆ 10:30 ರಿಂದ 2:00 ರವರೆಗೂ
ಚಿತ್ರದುರ್ಗದಲ್ಲಿ :
ದಿನಾಂಕ: 10 ನೇ ನವೆಂಬರ್ 2023 (ಶುಕ್ರವಾರ)
ಕೀರ್ತಿ ಆಸ್ಪತ್ರೆ, ವಿ.ಪಿ. ಬಡಾವಣೆ ಮುಖ್ಯ ರಸ್ತೆ, ಚಿತ್ರದುರ್ಗ
ಸಮಯ: ಮಧ್ಯಾಹ್ನ 3:30 ರಿಂದ 5:00 ರವರೆಗೆ
ತುಮಕೂರಿನಲ್ಲಿ :
ದಿನಾಂಕ: 10ನೇ ನವೆಂಬರ್ 2023 (ಶುಕ್ರವಾರ)
ಟಿಎಚ್ ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಿಎಚ್ ರಸ್ತೆ, ಗುಬ್ಬಿ ಗೇಟ್, ತುಮಕೂರು
ಸಮಯ: ಸಂಜೆ 7:00 ಗಂಟೆಯಿಂದ 8:30ರ ವರೆಗೆ ತಪಾಸಣೆಗೆ ಲಭ್ಯರಿರುತ್ತಾರೆ.
ಎಬಿವೈ ಫಲಾನುಭವಿಗಳಿಗೆ ಉಚಿತ ಸಮಾಲೋಚನೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಗಧಿತ ಭೇಟಿಗಾಗಿ ಕರೆ ಮಾಡಿ: ಸಂತೋಷ್ ಚೌಹಾಣ್ – 9449696954,

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.








