ಕಿಚ್ಚ ಸುದೀಪ್ ವಿರುದ್ಧ ಬೇಸರ ಹೊರ ಹಾಕಿದ ಕೆ ಎನ್ ರಾಜಣ್ಣ..?

1 Min Read

 

ದಾವಣಗೆರೆ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆ ಎನ್ ರಾಜಣ್ಣ ಗೆಲುವು ಸಾಧಿಸಿ, ಕಾಂಗ್ರೆಸ್ ಸರ್ಕಾರದಲ್ಲಿ ಸಹಕಾರಿ ಸಚಿವರಾಗಿ ಮುಂದುವರೆದಿದ್ದಾರೆ. ಆದರೆ ಇಂದು ನಟ ಕಿಚ್ಚ ಸುದೀಪ್ ಅವರ ಬಗ್ಗೆ ಬೇಸರ ಮಾಡಿಕೊಂಡು ಮಾತನಾಡಿದ್ದಲ್ಲದೆ, ಕಿವಿ ಮಾತನ್ನು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಿಚ್ಚ ಸುದೀಪ್ ಅವರು ನಮ್ಮ ವಿರುದ್ಧವೇ ಕ್ಯಾಂಪೇನ್ ಮಾಡಿದ್ದು, ಬೇಸರವಾಗಿದೆ. ಇನ್ನು ಮುಂದಾದರೂ ಅರಿತುಕೊಂಡು ಮುಂದುವರೆಯಲಿ. ಸಾಮಾನ್ಯ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದರೆ ಏನು ಅನ್ನಿಸುತ್ತಿರಲಿಲ್ಲ. ಆದರೆ ಎಸ್ ಟಿ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದಾರೆ. ಅದು ನೋವು ತಂದಿದೆ.

ನಮ್ಮವರು ಎರಡು ಕಡೆ ಸ್ಪರ್ಧಿಸಿದಾಗ ಒಬ್ಬರ ಪರವಾಗಿ, ಇನ್ನೊಬ್ಬರ ವಿರುದ್ಧವಾಗಿ ಪ್ರಚಾರ ಮಾಡಿದ್ದಾರೆ. ಇದು ನಮಗೆಲ್ಲಾ ಬೇಸರ ತಂದಿದೆ. ಇದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತದೆ. ಆತನಿಗೆ ಅನುಭವ ಕಡಿಮೆಯಿದೆ. ಶ್ರೇಷ್ಠ ನಟನಾಗಲು ಅವಕಾಶವಿದೆ. ಅದನ್ನು ಅರಿತುಕೊಂಡಯ ಮುಂದುವರೆಯಲಿ. ಇನ್ನಾದರೂ ಅರಿತುಕೊಂಡು ಮುಂದುವರೆಯಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *