ಶಿವಮೊಗ್ಗ: ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಮಲಾಕರ್ ಭಟ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ತನಿಖೆಯ ನಡುವೆ ಆತನ ಒಂದೊಂದೇ ಕಳ್ಳಾಟಗಳು ಬಯಲಾಗುತ್ತಿವೆ. ಆಧ್ಯಾತ್ಮಿಕತೆಯ ಹೆಸರಲ್ಲಿ ಬೇಜಾನ್ ಬೇನಾಮಿ ಆಸ್ತಿ ಮಾಡಿರೋದು ಬೆಳಕಿಗೆ ಬಂದಿದೆ.
ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದಲ್ಲಿ ಕಮಲಾಕರ್ ಭಟ್ ಬರೋಬ್ಬರಿ 10 ಎಕರೆ ಜಮೀನನ್ನ ಹೊಂದಿದ್ದಾನಂತೆ. ಸುಮಾರು ಐದು ವರ್ಷಗಳ ಹಿಂದೆಯೇ ಈ ಜಮೀನನ್ನು 3.5 ಕೋಟಿ ರೂಪಾಯಿ ನೀಡಿ ಖರೀದಿಸಲಾಗಿತ್ತನಮತರ. ಸದ್ಯ ಈ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 6 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಆ ಜಾಗದಲ್ಲಿ ಗೋ ಶಾಲೆಯನ್ನು ಮತ್ತು ಮಠವನ್ನು ಕಟ್ಟೋದಾಗಿ ಹೇಳಿದ್ದರಂತೆ. ಜನರ ಭಾವನೆಗಳಿಗೆ ಖುಷಿ ಕೊಡೋದಕ್ಕೆ ಆರಂಭದಲ್ಲಿ ಗೋಶಾಲೆಯನ್ನು ನಿರ್ಮಿಸಿದ್ದನಂತೆ. ಈ ಬಗ್ಗೆ ಸ್ಥಳೀಯರೇ ಮಾಹಿತಿ ನೀಡಿದ್ದಾರೆ.
ಅದಾದ ಮೇಲೆ ಆ ಗೋಶಾಲೆಯನ್ನು ಮುಚ್ಚಿ ಅಲ್ಲಿ ಕೇವಲ ಹೋಮ, ಹವನ, ಜ್ಯೋತಿಷ್ಯ ಹೇಳುವುದಕ್ಕಷ್ಟೇ ಆ ಜಾಗವನ್ನ ಬಳಕೆ ಮಾಡಿಕೊಳ್ಳುತ್ತಿದ್ದನಂತೆ. ಅತ್ತ ಸುಚಿತ್ರಾಗೆ ಐಷರಾಮಿ ಜೀವನವನ್ನೇ ನೀಡಿದ್ದ ಎಂಬ ಮಾಹಿತಿಯೂ ಸಿಕ್ಕಿದೆ. ಮಾರುಕಟ್ಟೆಗೆ ಹೊಸದಾಗಿ ಬಂದಿದ್ದ ಕಾರು, ರಾಯಲ್ ಎನ್ ಫೀಲ್ಡ್ ಬೈಕು ಹೀಗೆ ಎಲ್ಲವನ್ನು ಕೊಟ್ಟ ರಾಯಲ್ ಆಗಿ ಬದುಕುವಂತೆ ನೋಡಿಕೊಂಡಿದ್ದನಂತೆ. ಸುಚಿತ್ರಾಗೆ ರೀಲ್ಸ್ ಗೀಳು ಜಾಸ್ತಿ. ಕಮಲಾಕರ್ ಭಟ್ ಕೊಡಿಸಿದ್ದ ಕಾರಿನಲ್ಲಿಯೇ ಕೂತು ಹೆಚ್ಚು ರೀಲ್ಸ್ ಮಾಡುತ್ತಿದ್ದಳು. ಈಗ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದಾವೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






