Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹೊಳೆನರಸೀಪುರ ರಥಕ್ಕೆ ಬಟ್ಟೆ ಕಟ್ಟುವ ವಿಚಾರ : ಜೆಡಿಎಸ್ – ಕಾಂಗ್ರೆಸ್ ಜಟಾಪಟಿ : ಸಂಸದ ಶ್ರೇಯಸ್ ಏನಂದ್ರು..?

---Advertisement---

ಹಾಸನ: ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವದ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಟಾಪಟಿ ನಡೆದಿದೆ. ಈ ಜಟಾಪಟಿಯಲ್ಲಿ ಸಂಸದ ಶ್ರೇಯಸ್ ಪಾಟೀಲ್ ಅವರು ಹರಕೆ ಮಾಡಿಕೊಂಡಿದ್ದ ಬಟ್ಟೆಯನ್ನು ರಥಕ್ಕೆ ಕಟ್ಟಿಲ್ಲ. ಈ ಸಂಬಂಧ ಸಂಸದ ಶ್ರೇಯಸ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲಾಡಳಿತ ತೀರ್ಮಾನ ಏನಿದೆಯೋ ಅಷ್ಟೆ. ಸುಸೂತ್ರವಾಗಿ ಆಯ್ತು. ಜಿಲ್ಲಾಡಳಿತ, ತಾಲೂಕು ಆಡಳಿತ ಈ ಲೋಪದೋಷದಲ್ಲೂ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೀತು. ನನಗೂ ಸಹ ಆಹ್ವಾನ ಮಾಡಿದ್ರು. ಆದರೆ ನನಗೆ ಬೇರೆ ಕೆಲಸ ಇದ್ದ ಕಾರಣ ಸಭೆಗೆ ಹೋಗೋದಕ್ಕೆ ಆಗ್ಲಿಲ್ಲ. ಅವತ್ತು ನಮ್ಮ ಭಕ್ತಾಧಿಗಳು, ಬ್ಲಾಕ್ ಅಧ್ಯಕ್ಷರೆಲ್ಲ ಚರ್ಚೆ ಮಾಡಿದರು ಹೊಸ ಬಟ್ಟೆ ಹಾಕೋಣಾ ಅಂತ. ಸ್ಥಳೀಯ ಶಾಸಕರು ಕೂಡ ಅನುಮತಿ ನೀಡಿದರು. ಅದಾದ ನಂತರ ನಮ್ಮ ತಾಯಿ ಕೂಡ ಹೇಳಿದರು, ನಿನ್ನ ಸಂಬಳ ಏನು ಬರುತ್ತೆ, ಬೇರೆ ಯಾವುದಕ್ಕೋ ಖರ್ಚು ಮಾಡೋದು ಬೇಡ, ಎರಡು ಲಕ್ಷ ತೆಗೆದು ಅದನ್ನ ದೇವರಿಗೆ ಬಳಸು ಅಂತ ಹೇಳಿದ್ರು.

ಅದಾದ ನಂತರ ನಾನು ಕೂಡ ತಹಶಿಲ್ದಾರರಿಗೆ ಕಳುಹಿಸಿಕೊಟ್ಟೆ, ಅವರೊಂದು ರೆಸಿಪ್ಟ್ ಕೊಟ್ರು. ಅಲ್ಲಿಂದ ಶುರುವಾಗಿದ್ದು ಇದು. ತಹಶಿಲ್ದಾರರು ಭಕ್ತಾಧಿಗಳಿಂದೆಲ್ಲಾ ಸಂಗ್ರಹಿಸಿ ಬಟ್ಟೆ ತಂದ್ರು. ಇದೇ ದೇವಸ್ಥಾನದ ಆವರಣದಲ್ಲಿ ಟೈಕರ್ ಗಳು ಹೊಕೆಯೋದಕ್ಕೆ ಶುರು ಮಾಡಿದರು. ಅವರ ಹಿಂಬಾಲಕರು ಬಂದು ಗಲಾಟೆ ಮಾಡಿ, ಅವರನ್ನು ಓಡಿಸಿದರು. ಮಷಿನ್, ಅರ್ಧಬರ್ಧ ಹೊಲೆದ ಬಟ್ಟೆಯನ್ನೆಲ್ಲಾ ತಾಲೂಕು ಆಫೀಸಿಗೆ ಡಂಪ್ ಮಾಡಿದ್ರು. ಅಲ್ಲಿಗೆ ನಿಂತಿತ್ತು. ನಾನು ಜಿಲ್ಲಾಧಿಕಾರಿಯನ್ನು ಕೇಳಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹೊಸ ಬಟ್ಟರನು ಬೇಡ, ಹಳೆ ಬಟ್ಟರನು ಬೇಡ. ಹೂವಿನ ಅಲಂಕಾರದಲ್ಲಿಯೇ ರಥೋತ್ಸವ ನಡೆಯಲಿ ಅಂದ್ರು. ನಾನು ಒಪ್ಪಿಕೊಂಡೆ. ಅದಾದ ಮೇಲೂ ಹೈಡ್ರಾಮಾ ಶುರು ಮಾಡಿದ್ದಾರೆ. ನಾವೆಲ್ಲಾ ದೇವರಿಗೆ ಬಿಟ್ಟಿದ್ದೀವಿ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now