Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಾ. ಬಿ.ರಾಜಶೇಖರಪ್ಪ ನವರಿಗೆ ಇತಿಹಾಸ ಸಂಸ್ಕೃತಿ ಶ್ರೀ ಪ್ರಶಸ್ತಿ

---Advertisement---

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.15 :  ನಾಡಿನ ಹಿರಿಯ ವಿದ್ವಾಂಸರು, ಖ್ಯಾತ ಇತಿಹಾಸ ಸಂಶೋಧಕರು, ಶಾಸನ, ಮೋಡಿ ಲಿಪಿ ತಜ್ಞರು ಹಾಗೂ ಸಾಹಿತಿಗಳು ಆದ   ಡಾ. ಬಿ. ರಾಜಶೇಖರಪ್ಪ ಇವರನ್ನು ಕರ್ನಾಟಕ ಇತಿಹಾಸ ಅಕಾಡೆಮಿಯು ಕೊಡಮಾಡುವ ಅತ್ಯುನ್ನತ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ಈ ಸಾಲಿಗೆ ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯನ್ನು ಬಿ.ಆರ್. ಆರ್. ಫ್ಯಾಮಿಲಿ ಚಾರಿಟಬಲ್ ಟ್ರಸ್ಟ್ ಪ್ರಾಯೋಜಿಸುತ್ತಿದ್ದು ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಹಾಗೂ ಪಾರಿತೋಷಕಗಳನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ಪಾವಗಡದಲ್ಲಿ ನವಂಬರ್ ತಿಂಗಳ ಏಳು, ಎಂಟು ಮತ್ತು ಒಂಬತ್ತನೇ ತಾರೀಖಿನಂದು ನಡೆಯಲಿರುವ ಕರ್ನಾಟಕ ಇತಿಹಾಸ ಅಕಾಡೆಮಿಯ 37ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು.

ಪ್ರಶಸ್ತಿಗೆ ಭಾಜನರಾಗಿರುವ ಡಾ. ಬಿ. ರಾಜಶೇಖರಪ್ಪನವರನ್ನು ಇತಿಹಾಸ ಅಕಾಡೆಮಿಯ ಸದಸ್ಯರಾದ ಸಿ.ಎಂ. ತಿಪ್ಪೇಸ್ವಾಮಿ, ಹೆಚ್. ವಿ. ಇಂದುಶೇಖರ್ ಚಿನಿವಾರ್ ಅಭಿನಂದಿಸಿದರು. ಈ ಸಮಯದಲ್ಲಿ ಸನ್ಮಾನಿತರ ಪತ್ನಿಯವರಾದ ಡಾಕ್ಟರ್ ಯಶೋಧ ರಾಜಶೇಖರಪ್ಪನವರು ಹಾಜರಿದ್ದರು.

ಇತಿಹಾಸ ಅಕಾಡೆಮಿಯು ಈ ಹಿಂದೆಯೂ ಡಾಕ್ಟರ್ ಬಿ. ರಾಜಶೇಖರಪ್ಪ ನವರಿಗೆ ಪ್ರತಿಷ್ಠಿತ “ಬಾ.ರ. ಗೋಪಾಲ್ ಶಾಸನ ತಜ್ಞ” ಮತ್ತು “ಸಂಶೋಧನಾ ಶ್ರೀ” ಪ್ರಶಸ್ತಿ ನೀಡಿತ್ತು. ಪ್ರಶಸ್ತಿ ಪುರಸ್ಕೃತರು 2018ರಲ್ಲಿ ಬಾದಾಮಿ ಬಳಿಯ ಶಿವಯೋಗ ಮಂದಿರದಲ್ಲಿ ನಡೆದ ಇತಿಹಾಸ ಅಕಾಡೆಮಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment