ಕಾಂಗ್ರೆಸ್ ಸರ್ಕಾರ RSS ಟಾರ್ಗೆಟ್ ಮಾಡ್ತಾ ಇದ್ಯಾ : ಸಿಎಂ ಸಿದ್ದರಾಮಯ್ಯ ಏನಂದ್ರು..?

1 Min Read

 

ಮೈಸೂರು: ರಾಜ್ಯದಲ್ಲಿ ಸರ್ಕಾರಿ ಜಾಗಗಳನ್ನು ಬಳಸಿಕೊಳ್ಳುವುದಕ್ಕೆ ಅನುಮತಿ ಪಡೆಯಲೇಬೇಕು. ಖಾಸಗಿ ಕಾರ್ಯಕ್ರಮ ಅಥವಾ ಸಂಘ ಸಂಸ್ಥೆಗಳ ಕಾರ್ಯಕ್ರಮಗಳು ನಡೆಯಬೇಕು ಅಂದ್ರು ಈಗ ಸರ್ಕಾರ ಅನುಮತಿ ಬೇಕು. ಅಷ್ಟೇ ಅಲ್ಲ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಕೂಡ ಭಾಗಿಯಾಗಬಾರದು ಎಂಬ ಆದೇಶವಾಗಿದೆ. ಈಗಾಗಲೇ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಪಿಡಿಒ ಅಮಾನತಾಗಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಹಲವರು ಕಾಂಗ್ರೆಸ್, ಆರ್ಎಸ್ಎಸ್ ನ ಟಾರ್ಗೆಟ್ ಮಾಡ್ತಿದೆ ಅಂತ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನ ಈ ಹಿಂದೆಯೇ ಮಾಡಿದ್ರು. ಟಾರ್ಗೆಟ್ ಆರ್ ಎಸ್ ಎಸ್ ಅಲ್ವೇ ಅಲ್ಲ. ಬಿಜೆಪಿ ಯಾವಾಗಲೂ ರಾಜಕಾರಣವನ್ನೇ ಮಾಡುವುದು. ಎಂದು ಬಡವರ ಕೆಲಸವನ್ನು ಮಾಡುವುದೇ ಇಲ್ಲ ರಾಜಕಾರಣವನ್ನೇ ಮಾಡುವುದು ಎಂದಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿದ್ದು, ಜನ ಅಹವಾಲು ಸ್ವೀಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನೋಡಲು ಬಂದ ಜನ ವಿಧವಿಧವಾದ ಸಮಸ್ಯೆಗಳನ್ನು ಅವರ ಬಳಿ ತೋಡಿಕೊಂಡಿದ್ದಾರೆ. ಅದರಲ್ಲೂ ಮಹಿಳೆಯೊಬ್ಬರು ನಮ್ಮಂಥ ಬಡವರ ಕಡೆಗೂ ಒಮ್ಮೆ ನೋಡಿ ಸಿಎಂ ಸಾಹೇಬ್ರೆ ಅಂದಿದ್ದಾರೆ. ಸಿದ್ದರಾಮಯ್ಯ ಅವರು ಬಡವರಿಗೆ ಅನುಕೂಲವಾಗುವಂತೆಯೇ ಸಾಕಷ್ಟು ಯೋಜನೆಗಳನ್ನ ತಂದಿದ್ದಾರೆ. ಅದರಲ್ಲೂ ಮಹಿಳೆಯರಿಗಾಗಿ ಶಕ್ತಿ ಯೋಜನೆ, ವಿದ್ಯುತ್ ಫ್ರೀ ನೀಡಿರುವುದು, ಗೃಹಲಕ್ಷ್ಮೀ ಈ ಎಲ್ಲವೂ ಮಹಿಳೆಯರಿಗಾಗಿಯೇ ತಂದಿದ್ದಾರೆ. ಇಂದಿನ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲೂ ಮಹಿಳೆಯರು ತಮ್ಮ ಸಮಸ್ಯೆಗಳನ್ನ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೇಳಿಕೊಂಡಿದ್ದಾರೆ. ಸದ್ಯ ಇದೇ ವೇಳೆ ಆರ್ ಎಸ್ ಎಸ್ ಬಗೆಗಿನ ಚರ್ಚೆ, ಆರೋಪದ ಬಗ್ಗೆಯೂ ಉತ್ತರ ನೀಡಿದ್ದಾರೆ.

Share This Article