Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬ್ಯಾಂಕ್ ನಲ್ಲಿ ಇಟ್ಟ ಚಿನ್ನ ಮುಟ್ಟುಗೋಲು ಆಗ್ತಿದ್ಯಾ? ಆತಂಕ ಬೇಡ, ಜಾರಿಯಾಗಿದೆ ಆರ್ ಬಿಐನ ಬಿಗ್ ರಿಲೀಫ್ ನಿಯಮ!

---Advertisement---

ದೆಹಲಿ.ಜುಲೈ.23: ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಗೋಲ್ಡ್ ಲೋನ್ (ಬಂಗಾರದ ಸಾಲ) ಪಡೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಚಿನ್ನದ ಮೌಲ್ಯ ಹೆಚ್ಚಿರುವುದರಿಂದ ಸಾಲದ ಮೊತ್ತವೂ ಹೆಚ್ಚಾಗಿಯೇ ಸಿಗುತ್ತದೆ. ಆದರೆ, ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಲು ಸಾಧ್ಯವಾಗದಿದ್ದರೆ ಬ್ಯಾಂಕ್ಗಳು ಆಭರಣಗಳನ್ನು ತಕ್ಷಣವೇ ಹರಾಜು ಹಾಕುತ್ತವೆಯೇ? ಗ್ರಾಹಕರು ಭಯಪಡಬೇಕೇ? ಖಂಡಿತ ಇಲ್ಲ. ಬ್ಯಾಂಕಿಂಗ್ ನಿಯಮಗಳ ಪ್ರಕಾರ, ಸಾಲಗಾರರಿಗೆ ಆರ್ಬಿಐ ನಿಂದ ದೊಡ್ಡ ರಿಲೀಫ್ ಲಭ್ಯವಿದೆ.

90 ದಿನಗಳ ಕಾಲಾವಕಾಶ ಮತ್ತು ‘NPA’ ನಿಯಮ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಗಳ ಪ್ರಕಾರ, ಬ್ಯಾಂಕ್ ಗಳು ತಮಗೆ ಇಷ್ಟ ಬಂದಂತೆ ತಕ್ಷಣವೇ ಚಿನ್ನವನ್ನು ಹರಾಜು ಮಾಡಲು ಬರುವುದಿಲ್ಲ. ನೀವು ಸತತವಾಗಿ 90 ದಿನಗಳ ಕಾಲ (3 ತಿಂಗಳು) ಕಂತು ಅಥವಾ ಬಡ್ಡಿಯನ್ನು ಪಾವತಿಸದಿದ್ದರೆ, ಬ್ಯಾಂಕ್ ನಿಮ್ಮ ಸಾಲದ ಖಾತೆಯನ್ನು ‘ವಸೂಲಾಗದ ಸಾಲ’ (NPA – Non-Performing Asset) ಎಂದು ಘೋಷಿಸುತ್ತದೆ. ಅಲ್ಲಿಯವರೆಗೆ ನಿಮ್ಮ ಚಿನ್ನ ಸುರಕ್ಷಿತವಾಗಿರುತ್ತದೆ ಮತ್ತು ಹರಾಜು ಪ್ರಕ್ರಿಯೆ ಪ್ರಾರಂಭವಾಗುವುದಿಲ್ಲ.

ಹರಾಜಿಗೂ ಮುನ್ನ ಬ್ಯಾಂಕ್ ಕೈಗೊಳ್ಳುವ ಕ್ರಮಗಳು

ಬ್ಯಾಂಕ್ ಗಳು ಚಿನ್ನವನ್ನು ಹರಾಜು ಹಾಕುವುದು ಕೊನೆಯ ಹಂತದ ನಿರ್ಧಾರವಾಗಿರುತ್ತದೆ. ಅದಕ್ಕೂ ಮುನ್ನ ಗ್ರಾಹಕರಿಗೆ ಹಲವಾರು ಅವಕಾಶಗಳನ್ನು ನೀಡಲಾಗುತ್ತದೆ:

ಫೋನ್ ಮತ್ತು ನೋಟಿಸ್ ರಿಮೈಂಡರ್: ಸಾಲ ಮರುಪಾವತಿ ಬಾಕಿಯಿದ್ದಾಗ ಬ್ಯಾಂಕ್ ಗಳು ಕರೆಗಳು, ಇ-ಮೇಲ್ ಅಥವಾ ಪತ್ರಗಳ ಮೂಲಕ ನೆನಪಿಸುತ್ತವೆ.

ಒಂದು ತಿಂಗಳ ಅಂತಿಮ ನೋಟಿಸ್: ಹರಾಜು ಪ್ರಕ್ರಿಯೆಗೆ ಹೋಗುವ ಮೊದಲು, ಸಾಲ ತೀರಿಸಲು ಗ್ರಾಹಕರಿಗೆ 1 ತಿಂಗಳ ಕಾಲಾವಕಾಶ ನೀಡಿ ‘ರಜಿಸ್ಟರ್ಡ್ ಪೋಸ್ಟ್’ ಮೂಲಕ ನೋಟಿಸ್ ಕಳುಹಿಸಲಾಗುತ್ತದೆ.

ಹರಾಜಿನ ವಿವರ: ನೋಟಿಸ್ನಲ್ಲಿ ಹರಾಜು ನಡೆಯುವ ದಿನಾಂಕ, ಸಮಯ ಮತ್ತು ಸ್ಥಳವನ್ನು ಸ್ಪಷ್ಟವಾಗಿ ನಮೂದಿಸಲಾಗುತ್ತದೆ. ನಿಮ್ಮ ಗಮನಕ್ಕೆ ಬಾರದೆ ಬ್ಯಾಂಕ್ ಚಿನ್ನವನ್ನು ಹರಾಜು ಮಾಡಲು ಸಾಧ್ಯವಿಲ್ಲ.

ಸಾಲಗಾರರಿಗೆ ಇರುವ ಪರ್ಯಾಯ ಮಾರ್ಗಗಳು
ನಿಮಗೆ ಕಂತು ಪಾವತಿಸಲು ಕಷ್ಟವಾದರೆ, ಬ್ಯಾಂಕ್ ನೊಂದಿಗೆ ಮಾತನಾಡಿ ಈ ಕೆಳಗಿನ ಸೌಲಭ್ಯಗಳನ್ನು ಪಡೆಯಬಹುದು:

ಸಾಲದ ಮರುಹೊಂದಾಣಿಕೆ (EMI Renewal): ಸಾಲದ ಅವಧಿಯನ್ನು ವಿಸ್ತರಿಸಿಕೊಳ್ಳುವುದು.

ಭಾಗಶಃ ಪಾವತಿ (Partial Payment): ಒಂದಿಷ್ಟು ಹಣ ಪಾವತಿಸಿ ಸಾಲದ ಖಾತೆಯನ್ನು ಸರಿಪಡಿಸಿಕೊಳ್ಳುವುದು.

ಟಾಪ್-ಅಪ್ ಲೋನ್: ಕಡಿಮೆ ಬಡ್ಡಿದರದಲ್ಲಿ ‘ಟಾಪ್-ಅಪ್’ ಸಾಲ ಪಡೆದು ಹಳೆಯ ಸಾಲವನ್ನು ಸರಿದೂಗಿಸುವುದು.

ಆದ್ದರಿಂದ, ಸಾಲ ಮರುಪಾವತಿ ತಡವಾದ ತಕ್ಷಣವೇ ಚಿನ್ನ ಹರಾಜಾಗುತ್ತದೆ ಎಂದು ಆತಂಕಪಡುವ ಅಗತ್ಯವಿಲ್ಲ. ಬ್ಯಾಂಕ್ ಗಳನ್ನು ನೇರವಾಗಿ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now