ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಬಿಜೆಪಿ ವಿರುದ್ಧ ಮಹತ್ವದ ನೀರ್ಣಯ ಕೈಗೊಂಡಿದೆ. ಬಿಟ್ ಕಾಯಿನ್ ಸೇರಿದಂತೆ ವಿವಿಧ ಹಗರಣಗಳಿಗೆ ವಿಶೇಷ ತನಿಖಾ ತಂಡ ನೇಮಿಸಿದರೆ, ಭಾರೀ ಸದ್ದು ಮಾಡಿದ್ದ 40 ಪರ್ಸೆಂಟ್ ಭ್ರಷ್ಟಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಈಗಾಗಲೇ ತನಿಖೆಗೆ ವಹಿಸಿರುವ ಕಾಂಗ್ರೆಸ್, ಈ ಬಗ್ಗೆ ಟ್ವೀಟ್ ಮಾಡಿದೆ. 40% ಕಮಿಷನ್ ಹಗರಣದ ದಾಖಲೆ ಕೊಡಿ ಎನ್ನುತ್ತಿದ್ದ @BJP4Karnataka ಭ್ರಷ್ಟರಿಗೆ ಈಗ ತನಿಖಾ ಸಮಿತಿಯೇ ದಾಖಲೆ ನೀಡಲಿದೆ. ಸಾಕ್ಷಿ ಕೇಳುತ್ತಿದ್ದವರಿಗೆ ಸಾಕ್ಷಿ ಕೊಡಲು ತಯಾರಾಗಿದ್ದಾರೆ.
ಬಿಜೆಪಿಗರಿಗೆ ಹೊಸ ಜೈಲು ಕಟ್ಟಬೇಕೋ ಅಥವಾ ಬಿಜೆಪಿ ಕಚೇರಿಗೇ ಕಂಬಿ ಹಾಕಬೇಕೋ, ಚಿಂತಿಸಬೇಕಿದೆ. ದೇಶದಲ್ಲಿ ಆದಾಯ ತೆರಿಗೆಗಿಂತ GST ತೆರಿಗೆಯೇ ಹೆಚ್ಚು ಸಂಗ್ರಹವಾಗುತ್ತಿದೆ. ದಿನನಿತ್ಯದ ಜನಸಾಮಾನ್ಯರ ಸುಲಿಗೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆಸಕ್ತಿ. @BJP4Karnataka ನಾಯಕರು ಈ ತೆರಿಗೆ ಸುಲಿಗೆಯ ಬಗ್ಗೆ ತುಟಿ ಬಿಚ್ಚುದಿರುವುದೇಕೆ? ಎಂದು ಟ್ವೀಟ್ ಮಾಡಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















