Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರತ Vs ದಕ್ಷಿಣ ಆಫ್ರಿಕಾ : 243 ರನ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ ಭಾರತ

Facebook
Twitter
Telegram
WhatsApp

ಸುದ್ದಿಒನ್ : 2023ರ ಏಕದಿನ ವಿಶ್ವಕಪ್‌ನಲ್ಲಿ ಅಜೇಯರಾಗುಳಿದಿರುವ ಟೀಂ ಇಂಡಿಯಾ, ವಿಶ್ವಕಪ್ ಗೆಲ್ಲುವ ಗುರಿಗೆ ಅಡ್ಡಿಯಾಗಿದ್ದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಲಿ ಅಥವಾ ಬೌಲಿಂಗ್ ಮಾಡಲಿ ಫಲಿತಾಂಶ ಒಂದೇ ಅದು ಗೆಲುವು ಮಾತ್ರ. ಟೂರ್ನಿಯಲ್ಲಿ ಅಪ್ರತಿಮ ಗೆಲುವಿನೊಂದಿಗೆ ಮುನ್ನುಗ್ಗುತ್ತಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 243 ರನ್ ಗಳ ಅಂತರದಿಂದ ಮಣಿಸಿತು. ಸತತ ಎಂಟನೇ ಬಾರಿ ಪಂದ್ಯಾವಳಿಯನ್ನು ಗೆದ್ದ ನಂತರ, ಅವರು ಟೇಬಲ್ ಟಾಪರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, 327 ರನ್ ಗಳನ್ನು ಗಳಿಸಿ, ದಕ್ಷಿಣ ಆಫ್ರಿಕಾ ವನ್ನು 83 ರನ್ ಗಳಿಗೆ ಔಟ್ ಮಾಡಿದರು. ಈ ಮೂಲಕ  ಟೀಂ ಇಂಡಿಯಾ 243 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಕಿಂಗ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಬೃಹತ್ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾದವರಿಗೆ ಎರಡನೇ ಓವರ್ ನಲ್ಲಿ ಆಘಾತ ಕಾದಿತ್ತು. ಟೂರ್ನಿಯಲ್ಲಿ ನಾಲ್ಕು ಶತಕ ಬಾರಿಸಿ ಫುಲ್ ಫಾರ್ಮ್ ನಲ್ಲಿದ್ದ ಕ್ವಿಂಟನ್ ಡಿ ಕಾಕ್ (5) ಎರಡನೇ ಓವರ್ ನಲ್ಲಿ ಹೈದರಾಬಾದ್ ಎಕ್ಸ್ ಪ್ರೆಸ್ ಸಿರಾಜ್ ಮಿಯಾ ಅವರ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರು. ಆ ನಂತರ ತೆಂಬಾ ಬಾವುಮಾ ಮತ್ತು ವ್ಯಾನ್ ಡೆರ್ ಡುಸೆನ್ ಸ್ವಲ್ಪ ಹೊತ್ತು ಕ್ರೀಸ್ ನಲ್ಲಿ ನಿಂತರೂ ರವೀಂದ್ರ ಜಡೇಜಾ ಅಬ್ಬರಕ್ಕೆ ಇಡೀ ಚಿತ್ರ್ರಣವೇ ಬದಲಾಯಿತು. ಮೊದಲು ಬವುಮಾ (11) ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯುಗೆ ಔಟಾದರು.. ಮಾರ್ಕ್ರಾಮ್ (9) ಅವರನ್ನು ಶಮಿ ಪೆವಿಲಿಯನ್ ಕಳಿಸಿದರು. ಆ ಬಳಿಕ ಜಡೇಜಾ ವಿಜೃಂಭಿಸುತ್ತಿದ್ದಂತೆ ಬ್ಯಾಟ್ಸ್ ಮನ್ ಗಳು  ಪೆವಿಲಿಯನ್ ಗೆ ಸಾಲುಗಟ್ಟಿದರು. ಇದರಿಂದಾಗಿ ಎದುರಾಳಿ ತಂಡ 27.1 ಓವರ್‌ಗಳಲ್ಲಿ 83 ರನ್‌ಗಳಿಗೆ ಆಲೌಟ್ ಆದರು.

ಭಾರತದ ಪರ ಬೌಲರ್‌ಗಳಲ್ಲಿ ಜಡೇಜಾ ಐದು ವಿಕೆಟ್ ಪಡೆದರು.ಶಮಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಸಿರಾಜ್ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದರು. ರೋಹಿತ್ ಅವರ ಅದ್ಭುತ ಇನ್ನಿಂಗ್ಸ್‌ನಿಂದ (40) ಟೀಂ ಇಂಡಿಯಾ 4.3 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿತ್ತು.  ಏಳನೇ ಓವರ್ ನಲ್ಲಿ ರೋಹಿತ್ ಔಟ್ ಆಗುವ ಹೊತ್ತಿಗೆ ಟೀಂ ಇಂಡಿಯಾ 63 ರನ್ ಗಳಿಸಿತ್ತು.

ಆ ಬಳಿಕ ಕೊಹ್ಲಿ ಹಾಗೂ ಗಿಲ್ ಕೆಲಕಾಲ ಇನಿಂಗ್ಸ್ ಮುನ್ನಡೆಸಿದರು. 11ನೇ ಓವರ್ ನಲ್ಲಿ ಕೇಶವ್ ಮಹಾರಾಜ್ ಅವರ ಸೂಪರ್ ಎಸೆತದಲ್ಲಿ ಗಿಲ್ (23) ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಟೀಂ ಇಂಡಿಯಾ 93 ರನ್ ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಜೋಡಿ ತುಸು ಹೆಚ್ಚು ಆಡಿದ್ದರಿಂದ ಸ್ಕೋರ್ ನಿಧಾನವಾಯಿತು. ಆದರೆ ಸ್ವಲ್ಪ ಸಮಯದ ನಂತರ ಶ್ರೇಯಸ್ ಅಯ್ಯರ್ ಮಿಂಚಿದರು. ಅರ್ಧಶತಕ ಪೂರೈಸಿದ ಅಯ್ಯರ್ (77) ಬೃಹತ್ ಹೊಡೆತಕ್ಕೆ ಯತ್ನಿಸಿ ಪೆವಿಲಿಯನ್ ತಲುಪಿದರು. ಈ ಮೂಲಕ ಮೂರನೇ ವಿಕೆಟ್‌ಗೆ 134 ರನ್‌ಗಳ ಜೊತೆಯಾಟ ಅಂತ್ಯಗೊಂಡಿತು.

ಆ ಬಳಿಕ ಸತತ ಅಂತರದಲ್ಲಿ ವಿಕೆಟ್‌ಗಳು ಪತನವಾಗುತ್ತಿದ್ದರೂ ವಿರಾಟ್ ಕೊಹ್ಲಿ (101) ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡಕ್ಕೆ ಬೃಹತ್ ಮೊತ್ತ ಪೇರಿಸಿದರು.

ಸಚಿನ್ ತೆಂಡೂಲ್ಕರ್ ಅವರ ಏಕದಿನದಲ್ಲಿ ಅತಿ ಹೆಚ್ಚು ಶತಕಗಳ (49) ದಾಖಲೆಯನ್ನು ಸರಿಗಟ್ಟಿದರು. ಸೂರ್ಯಕುಮಾರ್ ಯಾದವ್ (22) ಮತ್ತು ಜಡೇಜಾ (29) ರನ್ ಗಳಿಸಿ ಮಿಂಚಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಎನ್‌ಗಿಡಿ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್ ಮತ್ತು ಶಮ್ಸಿ ತಾಲೊ ವಿಕೆಟ್ ಪಡೆದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

error: Content is protected !!