Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೊಳಕೆಯೊಡೆದ ಹಾಲುಗಡ್ಡೆ ತಿಂದರೆ ವಾಂತಿ-ಬೇಧಿ ಆಗಬಹುದು ಎಚ್ಚರ..!

---Advertisement---

ಸಾಮಾನ್ಯವಾಗಿ ಆಲೂಗಡ್ಡೆಯನ್ನು ಹೆಚ್ಚು ದಿನ ಒಂದೇ ಕಡೆ ಇಟ್ಟರೆ ಮೊಳಕೆಯೊಡೆಯುವುದು ಸಹಜ. ಕೆಲವೊಮ್ಮೆ‌ ಗೃಹಿಣಿಯರು ಮೊಳಕೆ ತಾನೇ ಎಂದು ಮೊಳಕೆಯನ್ನು ಕಿತ್ತಾಕಿ ಬಳಿಕ ಅದರಲ್ಲಿ ಅಡುಗೆ ಮಾಡುತ್ತಾರೆ. ಆದರೆ ಇದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂಬುದು ಮಾತ್ರ ಊಹೆಗೂ ನಿಲುಕದ್ದಾಗಿದೆ. ಹಾಗಾದ್ರೆ ಮೊಳಕೆಯೊಡೆದ ಹಾಲುಗಡ್ಡೆ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಬರಲಿವೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

* ಮೊಳಕೆಯೊಡೆದ ಹಾಲುಗಡ್ಡೆ ವಿಷಕಾರಿ ಹಾಗೂ ಫುಡ್ ಪಾಯಿಸನ್ ಗೆ ಕಾರಣವಾಗಬಹುದು. ಹೀಗಾಗಿ ಆರೋಗ್ಯದ ಮೇಲೆ ಬೇರೆ ರೀತಿಯಾದಂತ ಪರಿಣಾಮವನ್ನೇ ಬೀರುತ್ತವೆ.

* ಆಲೂಗಡ್ಡೆಗಳು ಸೋಲನೈನ್ ಮತ್ತು ಚಾಕನೈನ್ ಎಂಬ ನೈಸರ್ಗಿಕ ಅಂಶಗಳ ಮೂಲವಾಗಿರುತ್ತವೆ. ಎರಡು ಗ್ಲೈಕೋಲ್ಕಲಾಯ್ಡ್ ಸಂಯುಕ್ತಗಳು ನೈಸರ್ಗಿಕವಾಗಿ ಬದನೆಕಾಯಿ ಹಾಗೂ ಟಮೋಟೋ ಸೇರಿದಂತೆ ಇತರ ಆಹಾರಗಳಲ್ಲಿ ಕಂಡು ಬರುತ್ತದೆ. ಆದರೆ ಮೊಳಕೆ ಬಂದ ಆಲೂಗಡ್ಡೆಯಲ್ಲಿ ಈ ಅಂಶಗಳು ಕಡಿಮೆಯಾಗಿರುತ್ತವೆ.

* ಆಲೂಗಡ್ಡೆ ಮೊಳಕೆಯೊಡೆದಾಗ ಅದರಲ್ಲಿ ಸೋಲನೈನ್ ಉತ್ಪತ್ತಿಯಾಗಿರುತ್ತದೆ. ಅದು ನಮ್ಮ ದೇಹಕ್ಕೆ ಸೇರಿದಾಗ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ.

* ಆ ರೀತಿಯ ಆಲೂಗಡ್ಡೆ ತಿನ್ನುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದು ಹೃದಯಕ್ಕೂ ಸಮಸ್ಯೆ, ತಲೆ ಸುತ್ತಿ ಬೀಳುತ್ತಾರೆ. ರಕ್ತದೊತ್ತಡ ಸರಿಯಾಗಿದ್ದರೆ ಮಾತ್ರ ಹೃದಯವೂ ಆರೋಗ್ಯದಿಂದ ಕೆಲಸ ಮಾಡಬಹುದು.

* ಇದ್ದಕ್ಕಿದ್ದ ಹಾಗೇ ಅಧಿಕವಾದ ಜ್ವರವೂ ಕಾಣಿಸುತ್ತದೆ.

* ದೇಹದಲ್ಲಿ ವಿಷಕಾರಿ ಅಂಶ ಅಡಗಿದ್ದರೆ ತಲೆನೋವು ಹೆಚ್ಚಾಗುತ್ತದೆ.

* ತಿಂದದ್ದೆಲ್ಲ ವಾಂತಿಯಾಗುವುದಕ್ಕೆ ಶುರುವಾಗುತ್ತದೆ.

* ಇದರಿಂದ ಅತಿಸಾರ ಬೇಧಿಯೂ ಶುರುವಾಗುತ್ತದೆ.

* ಏನಾದರೂ ಮಾಡಲು ಹೋದರೆ ಗೊಂದಲದ ಆಲೋಚನೆಗಳು ತಲೆಗೆ ಬರುತ್ತವೆ.

* ವಿಷ ಹೆಚ್ಚಾದರೆ ಸಾವು ಕೂಡ ಸಂಭವಿಸಬಹುದು. ಹೀಗಾಗಿ ಮೊಳಕೆಯೊಡೆದ ಆಲೂಗಡ್ಡೆಯನ್ನು ತಿನ್ನುವುದಕ್ಕಿಂತ ಎಸೆಯುವುದು ಒಳ್ಳೆಯದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment