Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟವೆಲ್ ಸರಿಯಾಗಿ ವಾಶ್ ಮಾಡದೆ ಇದ್ರೆ ಅದ್ರಿಂದಾನೇ ಬರುತ್ತೆ ಹಲವು ಕಾಯಿಲೆ..!

---Advertisement---

ಪ್ರತಿನಿತ್ಯ ಸ್ನಾನ ಮಾಡಿದಾಗ ಮೈ ಹೊರೆಸಲು ಟವೆಲ್ ಬಳಸುತ್ತೇವೆ. ಒಂದೇ ಟವೆಲ್ ಅನ್ನು ವಾರಗಟ್ಟಲೇ ಬಳಕೆ ಮಾಡುತ್ತೇವೆ. ಕೆಲವೊಂದು ಮನೆಯಲ್ಲಿ ಒಂದೇ ಟವೆಲ್ ಅನ್ನೇ ಎಲ್ಲರೂ ಬಳಸುತ್ತಾರೆ. ಆದರೆ ಇದರಿಂದಾನೇ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಯಾಕಂದ್ರೆ ತೇವಾಂಶದ ಟವೆಲ್ ನಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ.

* ಟವೆಲ್ ಬಳಸಿದ ನಂತರ ಸ್ವಚ್ಛ ಮಾಡಿ. ಒಂದು ವೇಳೆ ತೊಳೆಯಲು ಆಗದೆ ಹೋದಲ್ಲಿ ಬಿಸಿಲಿನಲ್ಲಿ ಚೆಮ್ಮಾಗಿ ಒಣಗಿಸಿ. ಒದ್ದೆ ಬಟ್ಟೆಯನ್ನು ಹಾಗೇ ಇಟ್ಟರೆ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವುದರ ಜೊತೆಗೆ ಫಂಗಸ್ ಆಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.

* ಟವೆಲ್ ಸರಿಯಾದ ಕ್ರಮದಲ್ಲಿ ಒಣಗಿಸದೆ ಇದ್ದಲ್ಲಿ ಎಸ್ಟೀಮಾ ಅಥವಾ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಿಮ್ಮ ಟವೆಲ್ ಅನ್ನಿ ಬೇರೆಯವರು ಬಳಸಲು ಬಿಡಬೇಡಿ.

* ಮುಖ್ಯವಾಗಿ ಮೊಡವೆ ಸಮಸ್ಯೆಗಳು ಹೆಚ್ಚಾಗುತ್ತವೆ. ಟವ್ ಸ್ವಚ್ಛತೆ ಕಾಪಾಡದೆ ಹೋದಲ್ಲಿ ಮೊಡವೆಗಳು ಉಲ್ಬಣವಾಗುತ್ತವೆ. ಹೀಗಾಗಿ ಸೌಂದರ್ಯ ಕಾಪಾಡುವುದಕ್ಕೂ ಟವೆಲ್ ಸ್ವಚ್ಛವಾಗಿರಲಿ.

* ಮತ್ತೊಂದು ಬಹಳ ಮುಖ್ಯವಾದ ವಿಚಾರ ಅಂದ್ರೆ ಸ್ನಾನ ಮಾಡುವುದಕ್ಕೂ, ಮುಖ ಹೊರೆಸುವುದಕ್ಕೂ, ತಲೆ ಹೊರೆಸಿಕೊಳ್ಳುವುದಕ್ಕೂ ಒಂದೇ ಟವೆಲ್ ಬಳಸಬೇಡಿ.

* ಸಾಧ್ಯವಾದಷ್ಟು ನೀವೂ ಬಳಸುವ ಟವೆಲ್ ಅನ್ನು ಬಿಸಿ ನೀರಿನಲ್ಲಿ ತೊಳೆಯಿರಿ. ಹಾಗೇ ಬಿಸಿಲಿನಲ್ಲಿ ಒಣಗಿಸಿ. ಹೀಗೆ ಮಾಡುವುದರಿಂದ ಕಾಯಿಲೆಯಿಂದಾನೂ ದೂರ ಇರಬಹುದು. ತ್ವಜೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಒಂದೇ ಮನೆಯಲ್ಲಿದ್ದೀವಿ ಅಂತ ಮೇಲೆ ಹೇಳಿದ ತಪ್ಪುಗಳನ್ನು ಮಾಡಿದರೆ ಖಂಡಿತ ಸೌಂದರ್ಯಕ್ಕೂ ಸಮಸ್ಯೆಯಾಗುತ್ತದೆ. ಹಲವು ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಸಣ್ಣ ಸಣ್ಣ ವಿಚಾರಗಳು ಬಹಳ ಮುಖ್ಯವಾಗುತ್ತದೆ. ಎಚ್ಚರದಿಂದ ಇರಬೇಕಾಗುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment