Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲಿಂಗಾಯಿತ ಧರ್ಮ ಸಂಸ್ಕೃತಿ ಯಂತೆ ನಡೆದರೆ ಮೀಸಲಾತಿ ಹೋರಾಟಗಳ ಪ್ರಶ್ನೆಯೆ ಬರುವುದಿಲ್ಲ : ಶರಣೆ ಮುಕ್ತಾ ಕಾಗಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್.15 : ಮಹಿಳಾ ಸಮಾನತೆಯ ಜೊತೆ ಜೊತೆಗೆ ಸಮ ಸಮಾಜ ಕಟ್ಟುವ ಕನಸು ಬಸವಾದಿ ಶರಣರದ್ದಾಗಿತ್ತು ಎಂದು ಜಾಗತಿಕ ಲಿಂಗಾಯಿತ ಮಹಾಸಭಾದ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಶರಣೆ ಮುಕ್ತಾ ಕಾಗಿ ಹೇಳಿದರು.

ನೀಲಕಂಠೇಶ್ವರ ಸಭಾಂಗಣದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭಾ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು.

ಬಸವಾದಿ ಶರಣರ ತಾತ್ವಿಕ ಚಿಂತನೆಗಳು ಇಂದಿನ ಸಂವಿಧಾನದ ಬೆಳಕು ವೈದಿಕ ಅಸಮಾನತೆಯ ವೈಭವೀಕರಣದಿಂದ ದೂರ ಸರಿದು ಸರ್ವರನ್ನು ಒಳಗೊಳ್ಳುವ ಲಿಂಗಾಯಿತ ಧರ್ಮವನ್ನು ಪರಿಕಲ್ಪಿಸಿ ಅನುಷ್ಠಾನಗೊಳಿಸಿದ್ದು, ಇವತ್ತಿನ ಎಲ್ಲಾ ಸಮಸ್ಯೆಗಳಿಗೆ ಬಸವಾದಿ ಶರಣರ ಪರಿಹಾರವಾಗಬಲ್ಲ ಈ ಧರ್ಮ ಇತರೆ ಧರ್ಮಗಳಿಗಿಂತ ವಿಭಿನ್ನ ಮತ್ತು ಅನನ್ಯವಾದ್ದರಿಂದ ಬೇರೆ ಧರ್ಮಗಳ ಪ್ರಭಾವದಿಂದ ಬಿಡುಗಡೆಗೊಳಿಸಿ ಸ್ವತಂತ್ರವಾಗಿಸಬೇಕಿದೆ ಎಂದರು.

ಲಿಂಗಾಯಿತ ಧರ್ಮ ಸಂಸ್ಕøತಿಯಂತೆ ಎಲ್ಲರೂ ನಡೆದರೆ ಮೀಸಲಾತಿ ಹೋರಾಟಗಳ ಪ್ರಶ್ನೆಯೆ ಬರುವುದಿಲ್ಲ. ಏಕೆಂದರೆ ಅಸಮಾನತೆಯ ಅನಿಷ್ಠಗಳ ವಿರುದ್ದದ ರಕ್ಷಣೆಯಾಗಿಯೇ ಇಂದಿನ ಮೀಸಲಾತಿ ಅನಿವಾರ್ಯ ಎಂದು ತಿಳಿಸಿದರು.

ಸಾಹಿತಿ ಮತ್ತು ಸಂಸ್ಕøತಿ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ ಲಿಂಗಾಯಿತ ಸ್ವತಂತ್ರ ಧಾರ್ಮಿಕವಾಗಿ ಸಾಂವಿಧಾನಾತ್ಮಕವಾಗಿ ಘೋಷಿಸಲ್ಪಟ್ಟರೆ ಅಸಮಾನತೆಯ ಬೇರು ಬಿಳಿಲುಗಳನ್ನು ವಿಸ್ತರಿಸಿಕೊಳ್ಳುತ್ತ ನಡೆದು ಬರುತ್ತಿರುವ ವೈದ್ದಿಕ ಸಂಸ್ಕøತಿಯನ್ನು ಜನಪರ ಮತ್ತು ಜೀವಪರಗೊಳಿಸುವ ಏಕೈಕ ಮಾರ್ಗವೆಂದರೆ ಬಸವಾದಿ ಶರಣರ ವಿಸ್ಮಯದ ನೆಲೆಯಲ್ಲಿ ಲಿಂಗಾಯಿತ ಧರ್ಮವನ್ನು ಅನುಷ್ಠಾನಗೊಳಿಸುವುದಾಗಿದೆ ಎಂದು ಹೇಳಿದರು.

ಕೆಂಚವೀರಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾದ ಕೈಗಾರಿಕೋದ್ಯಮಿಗಳ ಪ್ರತಿನಿಧಿ ವೀಣ ಸುರೇಶ್, ನಿವೃತ್ತ ಉಪನ್ಯಾಸಕಿ ರೋಹಿಣಿ ಬಸವರಾಜ್, ಎ.ಬಿ.ಧನಂಜಯ, ಜಿ.ಎಂ.ಶಿವಾನಂದ್, ವೇದಿಕೆಯಲ್ಲಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಸೋಮಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿತಾ ವೀರೇಶ್ ಪ್ರಾರ್ಥಿಸಿದರು. ಗೀತ ಸ್ವಾಗತಿಸಿದರು. ರಶ್ಮಿ ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!