Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈಶ್ವರಪ್ಪ ಅವರು ಗುಂಡಿಟ್ಟು ಕೊಲ್ಲಲು ಬಂದರೆ ಎದೆಕೊಟ್ಟು ನಿಲ್ಲುತ್ತೇನೆ : ಡಿಕೆ ಸುರೇಶ್

Facebook
Twitter
Telegram
WhatsApp

 

ಬೆಂಗಳೂರು: ಸಂಸದ ಡಿಕೆ ಸುರೇಶ್, ಮಾಜಿ ಸಚಿವ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಅವರನ್ನು ಆದಷ್ಟು ಬೇಗನೆ ಭೇಟಿಯಾಗುತ್ತೇನೆ. ಹೆದರಿ ಓಡುವ ಹೇಡಿ ನಾನಲ್ಲ. ಅವರು ಗುಂಡಿಕ್ಕಿ ಕೊಲ್ಲಲು ಬಂದರೆ, ನಾನು ಎದೆಕೊಟ್ಟು ನಿಲ್ಲುತ್ತೇನೆ. ನಾನೊಬ್ಬ ಸಂಸದ ಸದಸ್ಯ ಎನ್ನುವುದಕ್ಕಿಂತ ಕನ್ನಡಿಗ ಎಂಬ ಕಾರಣಕ್ಕೆ ಧ್ವನಿ ಎತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಹೇಡಿ ನಾನಲ್ಲ. ನಾನು ಓಡಿ ಹೋಗುವುದಿಲ್ಲ. ಈಶ್ಚರಪ್ಪನವರು ಕೊಲ್ಲಲು ಬಂದರೆ ಆ ಗುಂಡಿಗೆ ಎದೆ ಕೊಡುವವನು ನಾನು. ಅವರ ಮತ್ತು ನಮ್ಮ ನಡುವೆ ಯಾವುದೇ ರೀತಿಯ ಹಳೆಯ ದ್ವೇಷ ಇಲ್ಲ. ಈಶ್ವರಪ್ಪನವರು ಕೂಡ ಈ ರಾಜ್ಯಕ್ಕೆ ಅನೇಕ ಕೊಡುಗೆಯನ್ನು ನಾನಾ ಹಂತಗಳಲ್ಲಿ ನೀಡಿದ್ದಾರೆ. ಫುಲ್ ಸೆಟಲ್ಮೆಂಟ್, ಹಾಫ್ ಸೆಟಲ್ಮೆಂಟ್ ಅಂದ್ರೆ ಏನು ಅಂತಾ ಈಶ್ವರಪ್ಪ ಅವರ ಬಳಿಯೇ ಕೇಳಬೇಕು. ಅವರೇ ಬಹಳ ಚೆನ್ನಾಗಿ ವ್ಯಾಖ್ಯಾನ ಮಾಡುತ್ತಾರೆ. ಆಗಾಗ ಅವರ ಬಾಯಲ್ಲಿ ನುಡಿಮುತ್ತುಗಳು ಬೀಳುತ್ತಾ ಇರುತ್ತೆ ಎಂದಿದ್ದಾರೆ.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಡಿಕೆ ಬ್ರದರ್ಸ್ ಬಗ್ಗೆ ಇತ್ತಿಚೆಗೆ ಮಾತನಾಡಿದ್ದರು. ಡಿಕೆ ಸುರೇಶ್ ಅಂಥವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಮಾತನ್ನು ಹೇಳಿದ್ದರು. ಈ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಕೂಡ ತಿರುಗೇಟು ನೀಡಿದ್ದರು. ಇದೀಗ ಡಿಕೆ ಸುರೇಶ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

ಹೊಳಲ್ಕೆರೆ | ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಸುದ್ದಿಒನ್, ಹೊಳಲ್ಕೆರೆ, ಜುಲೈ. 26 : ನಮ್ಮ ರಾಷ್ಟ್ರಧ್ವಜವು ಗಾಳಿಯಿಂದ ಹಾರುತ್ತಿಲ್ಲ ಬದಲಾಗಿ ಅದು ಹಾರುತ್ತಿರುವುದು ಈ ದೇಶಕ್ಕಾಗಿ ಮಡಿದ ವೀರ ಯೋಧರ ಸೈನಿಕರ ಉಸಿರಿನಿಂದ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್. ವಸಂತ್ ಹೇಳಿದರು.

error: Content is protected !!