Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನುಷ್ಯ ಜನಪ್ರಿಯನಾಗಬೇಕಾದರೆ ಇರುವಷ್ಟು ಕಾಲ ಒಳಿತನ್ನು ಮಾಡಬೇಕು : ಶ್ರೀ ಬಸವಪ್ರಭು ಸ್ವಾಮೀಜಿ

---Advertisement---

 

ಸುದ್ದಿಒನ್, ಚಿತ್ರದುರ್ಗ, ಸೆ.11 :  ಪ್ರಾಣಿ ಪಕ್ಷಿಗಳಲ್ಲಿರುವ ಪರೋಪಕಾರಿ ಗುಣ ಮನುಷ್ಯನಲ್ಲಿ ಏಕಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ದಾಸೋಹ ಪರಿಕಲ್ಪನೆ ಕರ್ನಾಟಕದಲ್ಲಿದೆ. ಕಾರಣ ಬಸವಾದಿ ಶರಣರು ಉದಯಿಸಿದ ನಾಡು ನಮ್ಮದಾಗಿದೆ. ಇದು ನಮ್ಮ ಪುಣ್ಯ ಎಂದು ಕುಂ. ವೀರಭದ್ರಪ್ಪ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಕುಂವೀ, ಪಕ್ಕದ ಮನೆಯವರು ಉಪವಾಸವಿದ್ದಾಗ ನೀನು ಊಟ ಮಾಡಬೇಡ. ಅವರಿಗೂ ಒಂದಿಷ್ಟು ಸಹಾಯ ಮಾಡಿ ಉಣ್ಣಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಅಸಹಾಯಕ ಶೋಷಿತ ಸಮುದಾಯಗಳನ್ನು ಒಟ್ಟುಗೂಡಿಸಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದರು. ಲಿಂಗಾಯತ ಧರ್ಮವನ್ನು ಎಲ್ಲೆಡೆ ಪಸರಿಸುವಂತೆ ಮಾಡಿದರು.

ಬಸವಕಲ್ಯಾಣವನ್ನು ಸಾಕ್ಷಾತ್ಕರಿಸಿದ ಮಠ ಕರ್ನಾಟಕದಲ್ಲಿ ಇದೆ ಎನ್ನುವುದಾದರೆ ಅದು ಚಿತ್ರದುರ್ಗದ ಶ್ರೀ ಮುರುಘಾಮಠ. ಪರೋಪಕಾರಕ್ಕೆ ಹೆಸರಾದವನು ಖಲಿಚಕ್ರವರ್ತಿ. ವೈಚಾರಿಕವಾಗಿ ಹೇಗೆ ಬೆಳೆಯಬೇಕೆಂದು ಹೇಳಿದ ಮಠ ಮುರುಘಾಮಠ. ಅನೇಕ ರೀತಿಯ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಶಿಕ್ಷಣವನ್ನು ಕೊಡುವ ಮಠ. ಈ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ನಾನೊಬ್ಬ ಭಾರತೀಯ ಎಂದು ಹೇಳಲು ಸಂತಸವಾಗುತ್ತದೆ. ಅಂತಹ ರಾಷ್ಟ್ರ ನಮ್ಮದು. ಸರ್ವಧರ್ಮ ಸಹಿಷ್ಣುತೆಯನ್ನು ಕಲಿಸಿದ್ದು ನಮ್ಮ ಭಾರತ ಎಂದರು.

ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಮನುಷ್ಯ ಜನಪ್ರಿಯನಾಗಬೇಕಾದರೆ ಇರುವಷ್ಟು ಕಾಲ ಒಳಿತನ್ನು ಮಾಡಬೇಕು. ಇತರರಿಗೆ ಒಳಿತನ್ನು ಮಾಡುವುದೇ ನಿಜವಾದ ಸಾಧನೆ. ನಮ್ಮ ನೋವು ನಮಗೆ ತಿಳಿದರೆ ನಾವು ಜೀವಂತವಾಗಿದ್ದೇವೆ ಎಂದು ಅರ್ಥ. ಆದರೆ ಇನ್ನೊಬ್ಬರ ನೋವು ನಮಗೆ ಅರ್ಥವಾದರೆ ಆಗ ಮನುಷ್ಯರಾಗುತ್ತೇವೆ. ಜನರ ಕಷ್ಟದ ಕಣ್ಣೀರನ್ನು ಒರೆಸಿದರೆ ಅದೇ ಸಾರ್ಥಕ ಬದುಕು. ಅವರೇ ದಾರ್ಶನಿಕರು, ಸಂತರಾಗುತ್ತಾರೆಂದರು.

ಎಚ್. ವಿಜಯಕುಮಾರ್ ಪರೋಪಕಾರ ದೃಷ್ಟಿ ಕುರಿತು ಮಾತನಾಡಿ, ಇನ್ನೊಬ್ಬರ ಕಷ್ಟದಲ್ಲಿ ಸ್ಪಂದಸುವುದು ಪರೋಪಕಾರ. ಇಂದು ಅನೇಕರು ಆಸ್ತಿಗಾಗಿ, ಹಣಕ್ಕಾಗಿ ಕಿತ್ತಾಡುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು.

ಟಿಪ್ಪು ಖಾಸಿಂ ಅಲಿ, ಕೆ.ಎಂ. ವೀರೇಶ್ ಮಾತನಾಡಿದರು. ಬಿ. ದಿನೇಶ್ ಗೌಡಗೆರೆ, ಬಸವಾದಿತ್ಯ ದೇವರು, ಪ್ರೊ. ಎಸ್.ರವಿ ಇದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಆರ್.ಶೇಷಣ್ಣಕುಮಾರ್ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...