ಹಾಸನ: ಧರ್ಮಸ್ಥಳ ಸತ್ಯ ಯಾತ್ರೆಗೆ ಇಂದು ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಹಾಸನದಿಂದ ಚಾಲನೆ ನೀಡಿದ್ದು, ಕಾರ್ಯಕರ್ತರ ಜೊತೆಗೆ ಧರ್ಮಸ್ಥಳಕ್ಕೆ ಹೊರಟಿದ್ದಾರೆ. ಅದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಕುಮಾರಣ್ಣ ನಾಳೆ ಎಲ್ಲಾ ಸತ್ಯ ಹೊರಗೆ ಎಳೆಯುತ್ತಾರೆ ಎಂದಿದ್ದಾರೆ.
ಷಡ್ಯಂತ್ರ ಎಂಬ ಪದವನ್ನ ಜೆಡಿಎಸ್ ನವರಾಗಲಿ, ಬಿಜೆಪಿಯವರಾಗಲಿ ವಿಧಾನಸೌಧದ ಕಲಾಪದಲ್ಲಿ ಬಳಸಿದ್ದಲ್ಲ. ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ಎಂಬ ಪದವನ್ನ ಬಳಸಿದ್ದು, ಈ ರಾಜ್ಯದ ಉಪಮುಖ್ಯಮಂತ್ರಿಗಳು. ನೀವೆಲ್ಲರೂ ಕೂಡ ನೋಡಿದ್ದೀರಿ. ಮುಖ್ಯಮಂತ್ರಿಗಳು ಒಂದು ಹೇಳಿಕೆಯನ್ನ ಕೊಡ್ತಾರೆ, ಉಪ ಮುಖ್ಯಮಂತ್ರಿಗಳು ಮತ್ತೊಂದು ಹೇಳಿಕೆಯನ್ನ ಕೊಡ್ತಾರೆ. ಬಹುಶಃ ಈ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರು, ಕುಮಾರಣ್ಣ ಅವರು ರಾತ್ರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ನಾಳೆ ನವದೆಹಲಿಯಲ್ಲಿ ಪತ್ರಿಕಾಗೋಷ್ಟಿ ಕರೆಯುತ್ತಾ ಇದ್ದಾರೆ.
ಕೆಲವೊಂದು ನಂಬಿಕಸ್ಥ ಮೂಲಗಳಿಂದ ಕುಮಾರಣ್ಣ ಅವರಿಗೆ ಮಾಹಿತಿಗಳು ಸಿಕ್ಕಿವೆ. ಅವರ ಕಡೆಯಿಂದ ಈ ಒಂದು ಪ್ರಕರಣದಲ್ಲಿ ಯಾವ ಯಾವ ವ್ಯಕ್ತಿಗಳು ಮಾನ್ಯ ಮುಖ್ಯಮಂತ್ರಿಗಳ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು, ಅವರು ಯಾವ ರೀತಿ ಮುಖ್ಯಮಂತ್ರಿಗಳಿಗೆ ಧರ್ಮಸ್ಥಳದ ಎಸ್ಐಟಿ ರಚನೆ ಮಾಡುವುದರಲ್ಲಿ ಅವರ ಪಾತ್ರ ಏನಿದೆ ಎಂಬುದನ್ನ ಕುಮಾರಣ್ಣ ರಾಜ್ಯದ ಜನತೆ ಎದುರು ಇಡುತ್ತಾರೆ ಎಂದಿದ್ದಾರೆ.
ನೂರಕ್ಕೆ ನೂರರಷ್ಟು ನಮಗೆ ಜವಾಬ್ದಾರಿ ಇದೆ. ಕುಮಾರಣ್ಣ ಅವರು ಮಾತನಾಡುವಾಗ ಹೇಳಿದ್ದಾರೆ. ಗೃಹ ಸಚಿವರ ಬಳಿ ಮುಂದಿನ ದಿನಗಳಲ್ಲಿ ಸಮಯವನ್ನ ತೆಗೆದುಕೊಳ್ಳುತ್ತಾರೆ. ಈ ಪ್ರಕರಣದ ಬಗ್ಗೆ ಎನ್ಐಎ ತನಿಖಾ ಏಜೆನ್ಸಿಗೆ ಕೊಡಬೇಕಾಗುತ್ತದೆ. ಅದನ್ನ ಇಂದು ಕೂತು ಕುಮಾರಣ್ಣ ಅವರು ಚರ್ಚೆ ಮಾಡ್ತಾರೆ ಎಂದಿದ್ದಾರೆ.


