ಸುದ್ದಿಒನ್, ಹಿರಿಯೂರು, ಅಕ್ಟೋಬರ್. 21 : ತಾಲೂಕು ಆಡಳಿತ ವತಿಯಿಂದ ನವಂಬರ್ 01 ರಂದು ನೆಹರು ಮೈದಾನದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲೂಕು ಕಚೇರಿಯಲ್ಲಿ ಪೂರ್ವ ಸಿದ್ಧತೆ ಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.
ಸಾಹಿತ್ಯ ಜನಪದ ಸಂಗೀತ ಅಥವಾ ಶಾಸ್ತ್ರೀಯ ಸುಗಮ ರಂಗಭೂಮಿ ಸಮಾಜ ಸೇವೆ ಶಿಕ್ಷಣ ಪತ್ರಿಕಾ ಮಾಧ್ಯಮ ಚಿತ್ರ ಅಥವಾ ಶಿಲ್ಪ ಕಲೆ ಭರತನಾಟ್ಯ ನವಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಗಮನಾರ್ಹ ಸೇವೆ ಮಾಡಿರುವ ಸಮರ್ಥಿಸುವ ದಾಖಲೆಗಳನ್ನು ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಇಲಾಖೆಗೆ ಅಕ್ಟೋಬರ್ 29 ರಂದು ಸಂಜೆ 5:30ರ ಒಳಗೆ ಸಲ್ಲಿಸತಕ್ಕದ್ದು ಎಂದು ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರಾದ ಎಂ. ಸಿದ್ದೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

