ಋತುಚಕ್ರ ರಜೆಗೆ ಹೈಕೋರ್ಟ್ ತಡೆ : ಮಹಿಳೆಯರ ಆಸೆಗೆ ತಣ್ಣೀರು..!

1 Min Read

ಬೆಂಗಳೂರು: ಸಚಿವ ಸಂತೋಷ್ ಲಾಡ್ ಅವರ ಪ್ರಯತ್ನದಿಂದ ಸಿಕ್ಕಿದ್ದ ಋತುಚಕ್ರ ರಜೆ ನೀತಿಗೆ ಸದ್ಯಕ್ಕೆ ಹೈಕೋರ್ಟ್ ತಡೆ ನೀಡಿದೆ. ಈಗಾಗಲೇ ಹಲವು ಕಂಪನಿಗಳಲ್ಲಿ ಋತುಚಕ್ರ ರಜೆಯನ್ನು ನೀಡಲಾಗಿದೆ. ಇದೀಗ ಹೈಕೋರ್ಟ್ ತಡೆಯನ್ನ ನೀಡಿದೆ. ಹೆಣ್ಣುಮಕ್ಕಳಿಗೆ ತಿಂಗಳಿಗೊಂದು ರಜೆ ನೀಡುವ ನೀತಿಯನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸಿ, ಅಧಿಕೃತವಾಗಿ ಆದೇಶ ಹೊರಡಿಸಿತ್ತು. ಆದರೆ ಈಗ ಹೈಕೋರ್ಟ್ ಈ ಆದೇಶಕ್ಕೆ ತಡೆ ನೀಡಿದೆ‌.

ಹೊಟೇಲ್ ಮಾಲೀಕರು ಈ ರಜೆ ನೀತಿ ಸಂಬಂಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತಡೆ ನೀಡಿದೆ. ಖಾಸಗಿ ವಲಯದ ಕಂಪನಿಗಳು ಸಹ ಈ ರಜೆ ನೀತಿಗೆ ವಿರೋಧ ವ್ಯಕ್ತಪಡಿಸಿದ್ದವು. ಈಗಾಗಲೇ ಸರ್ಕಾರಿ ಖಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ಋತುಚಕ್ರ ರಜೆ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ವೇತನಸಹಿತ ರಜೆ ನೀಡುವಂತೆ ಆದೇಶ ಮಾಡಲಾಗಿತ್ತು.

ಇನ್ನು ಹೊಟೇಲ್ ಮಾಲೀಕರ ಸಂಘದ ಪರವಾಗಿ ವಕೀಲರಾದ ಪ್ರಶಾಂತ್ ಬಿಕೆ ಅವರು ಹೈಕೋರ್ಟಚ ವಾದ ಮಂಡನೆ ಮಾಡಿದ್ದರು. ಋತುಚಕ್ರ ರಜೆ ನೀಡುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಋತುಚಕ್ರ ರಜರ ನೀಡುವುದಕ್ಕೆ ತಡೆಯಾಜ್ಞೆ ನೀಡಿದೆ. ಋತುಚಕ್ರ ರಜೆಗೆ ತಡೆ ನೀಡಿರುವುದು ಸಂತಸದ ವಿಚಾರ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು ಹೇಳಿದ್ದಾರೆ. ಪ್ರತಿ ತಿಂಗಳು ಒಂದು ರಜೆ ಸಿಕ್ತಲ್ಲ ಎಂದು ಖುಷಿಯಲ್ಲಿದ್ದ ಹೆಣ್ಣು ಮಕ್ಕಳಿಗೆ ಇದೊಂದು ಬೇಸರದ ಸಂಗತಿಯಾಗಿದೆ. ಸದ್ಯಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

Share This Article
Enable Notifications OK No thanks