ಶಿವಮೊಗ್ಗ, ತುಮಕೂರು ಜೋರು ಮಳೆ.. ಚಿತ್ರದುರ್ಗ, ದಾವಣಗೆರೆ ಸಾಧಾರಣ ಮಳೆ : ಎಲ್ಲೆಲ್ಲಿ ಹೇಗಿದೆ ಮಳೆಯ ಅಬ್ಬರ..?

1 Min Read

 

ಬೆಂಗಳೂರು: ರಾಜ್ಯದಲ್ಲಿ ಚುಮು ಚುಮು ಚಳಿ ಶುರುವಾಗುತ್ತಿರುವಾಗಲೆ ಮಳೆರಾಯ ಬೇರೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಈಗಾಗಲೇ ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಿದೆ. ಹವಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ತುಮಕೂರು, ರಾಮನಗರ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇಂದು ಬೆಳಗ್ಗೆಯಿಂದಾನೇ ಹಲವೆಡೆ ಸಾಧಾರಣ ಮಳೆಯಾಗಿದೆ.

ಈಗ ರಾಜ್ಯದಲ್ಲಿ ಹಲವು ಬೆಳೆಗಳೆಲ್ಲಾ ಕೊಯ್ಲು ಮಾಡುವ ಸಮಯ ಬಂದಿದೆ. ತುಮಕೂರು ಜಿಲ್ಲೆ ಭಾಗದಲ್ಲಿ ರಾಗಿ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಈಗ ರಾಗಿ ಎಲ್ಲಾ ಒಣಗಿದ್ದು, ಕೊಯ್ಲಿಗೆ ಬಂದಿದೆ. ಸಂಕ್ರಾಂತಿ ಒಳಗೆ ಎಲ್ಲಾ ರಾಗಿಯನ್ನು ಕೊಯ್ದು ಚೀಲ ಕಟ್ಟಿರುತ್ತಾರೆ. ಈಗ ನೋಡಿದರೆ ಮಳೆ ತುಮಕೂರು ಭಾಗದಲ್ಲೂ ಜೋರಾಗಿದ್ದು, ರಾಗಿ ಬೆಳೆದ ರೈತರಿಗೆ ಆತಂಕವಾಗಿದೆ. ಒಣಗಿದ ತೆನೆ ಮೇಲೆ ಮಳೆ ನೀರು ಬಿದ್ದರೆ ರಾಗಿಯೆಲ್ಲಾ ಕಪ್ಪಾಗಿ ಬಿಡುವ ಭಯ ಕಾಡುತ್ತಿದೆ. ಈಗಾಗಲೇ ಕೆಲವೊಂದು ಹೊಲಗಳಲ್ಲಿ ಬಿದ್ದ ಸಾಧಾರಣ ಮಳೆಗೆ ಪೈರುಗಳೆಲ್ಲ ನೆಲಕ್ಕೆ ಹಾಸಿ ಮಲಗಿವೆ. ಈಗ ಒಂದೇ ಸಮನೆ ಮಳೆ ಸುರಿದರೆ ಕೈಗೆ ಸೇರಬೇಕಾದ ಉತ್ತಮ ಗುಣಮಟ್ಟದ ರಾಗಿ ತನ್ನ ಸಾಂಧ್ರತೆಯನ್ನು ಕಳೆದುಕೊಳ್ಳುವ ಭಯವಿದೆ‌.

Share This Article
Leave a Comment

Leave a Reply

Your email address will not be published. Required fields are marked *