ಅವರಂತೆ ಕುಟುಂಬಗಳನ್ನು ಬೀದಿಗೆ ತಳ್ಳಿ ದುಡ್ಡು ಮಾಡಿದವನಲ್ಲ : ಹೆಚ್ ಡಿ ಕುಮಾರಸ್ವಾಮಿ

suddionenews
1 Min Read

ಕೋಲಾರ: ಡಿಕೆ ಬ್ರದರ್ಸ ಮೇಲೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಗುಡುಗಿದ್ದಾರೆ. ‌ಕೋಲಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಡಿಕೆ ಬ್ರದರ್ಸ್ ವಿರುದ್ಧ ಅಕ್ರಮದ ಆರೋಪವನ್ನು ಮಾಡಿದ್ದಾರೆ. ಲೋಕಸಭಾ ಚುನಾವಣೆಯ ದಿನಾಂಕ ಇನ್ನು ಘೋಷಣೆಯೇ ಆಗಿಲ್ಲ. ಆದರೆ ಆಗಲೇ ಗಿಫ್ಟ್ ಗಳನ್ನು ಹಂಚಲು ಶುರು ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಅಸಹನೆ ಶುರುವಾಗಿದೆ. ಅಭಿವೃದ್ಧಿ ಮಾಡಿದ್ದರೆ ಗಿಫ್ಟ್ ಗಳನ್ನು ಯಾಕೆ ಹಂಚಬೇಕಿತ್ತು. ಚೈನಾದಿಂದ ಕುಕ್ಕರ್, ಮಿಕ್ಸಿ ತರಿಸಿ, ಫೋಟೋ ಹಾಕಿ ಹಂಚಲು ಶುರು ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದೆ ವೇಳೆ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ದೊಡ್ಡ ಆಲಹಳ್ಳಿಯಲ್ಲಿ ಜನರಿಗೆ ಯಾವ ರೀಲ್ ತೋರಿಸಿ‌ ಬಂದಿದ್ದೀರಾ ಅನ್ನೋದು ಗೊತ್ತು. ಜನರ ಜೀವನ ಸರಿ ಮಾಡುವಂತ ರೀಲ್ ಗಳನ್ನು ತೋರಿಸಿಕೊಂಡು ನಾನು ಬಂದಿದ್ದೀನಿ. ಕಲ್ಲು ಹೊಡೆದು‌ ಕುಟುಂಬಗಳಿಗೆ ಬೆದರಿಕೆ ಹಾಕಿದ್ದಾರೆ. ಲೂಟಿ ಮಾಡಿ ಬೆಳೆದಿದ್ದೀರಿ.

 

ನಾನು ಓದುವಾಗಲೇ ಮೂರು ಲಾರಿ ಹೊಂದಿದ್ದೆ. ಅವರಂತೆ ಸಾಕಷ್ಟು ಕುಟುಂಬಗಳನ್ನು ಬೀದಿಗೆ ತಳ್ಳಿ ಅದರಲ್ಲಿ ಹಣ ಮಾಡಿದವನಲ್ಲ. ಕಲ್ಲು ಹೊಡೆದು ನೂರಾರು ಕುಟುಂಬಕ್ಕೆ ಬೆದರಿಕೆ ಹಾಕಿದವರು ಯಾರು..? ನನ್ನ ಜೀವನವೇ ಬೇರೆ ಅವರ ಜೀವನವೆ ಬೇರೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಅವರ ಕಲ್ಲು ಒಡೆಯುತ್ತಿವೋ.. ಕಸ ಎತ್ತುತ್ತೀವೋ ಅನ್ನೋ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕೋಲಾರದಿಂದ ತಮ್ಮದೇ ಅಭ್ಯರ್ಥಿ ನಿಲ್ಲಿಸುವ ಪ್ಲ್ಯಾನ್ ಇದ್ದು, ಸಂಚಾರ ಶುರು ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *