Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉತ್ತಮವಾದ ಪರಿಸರ ಹೊಂದುವುದು ನಮ್ಮೆಲ್ಲರ ಜವಾಬ್ದಾರಿ‌: ಪರಿಸರ ಅಧಿಕಾರಿ ಪ್ರಕಾಶ್

Facebook
Twitter
Telegram
WhatsApp

ವರದಿ ಮತ್ತು ಫೋಟೋ
        ಸುರೇಶ್ ಪಟ್ಟಣ್                  
ಮೊ : 87220 22817

ಚಿತ್ರದುರ್ಗ(ಅ.22) :  ಪಟಾಕಿ ಸುಡುವುದರಿಂದ ಹಣ, ವಾಯು ಮತ್ತು ಶಬ್ಬ ಮಾಲಿನ್ಯವಾಗಲಿದೆ. ಇದರಿಂದ ಯಾವ ರೀತಿಯ ಸಂತೋಷ ಸಿಗುವುದಿಲ್ಲ ಎಂದು ಮಾಲಿನ್ಯ ನಿಯಂತ್ರಣ ಇಲಾಖೆಯ ಪರಿಸರ ಅಧಿಕಾರಿ ಪ್ರಕಾಶ್ ತಿಳಿಸಿದರು.

ನಗರದ ಪಾರ್ಶ್ವನಾಥ ವಿದ್ಯಾ ಸಂಸ್ಥೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಲಾ ಚೈತನ್ಯ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರ ಸ್ನೇಹಿ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಉತ್ತಮವಾದ ಪರಿಸರವನ್ನು ಹೊಂದುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕೆ ಯಾವುದೇ ರೀತಿಯ ಪರಿಸರವನ್ನು ಹಾಳು ಮಾಡಬಾರದು, ಸಂವಿಧಾನ ನಮೆಗ ಹಲವಾರು ಹಕ್ಕುಗಳನ್ನು ನೀಡಿದೆ ಇದರಲ್ಲಿ ಉತ್ತಮವಾದ ಪರಿಸರವನ್ನು ಹೊಂದುವುದು ಸಹಾ ಒಂದಾಗಿದೆ. ನಮ್ಮ ಸುತ್ತಾ-ಮುತ್ತಲಿನ ಪರಿಸರವನ್ನು ಹಾಳು ಮಾಡಲು ನಮಗೆ ಯಾವುದೇ ರೀತಿಯ ಅಧಿಕಾರ ಇಲ್ಲ, ಅದರ ರಕ್ಷಣೆಯನ್ನು ಮಾಡಬೇಕಿದೆ ಹಾಳು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದರು.

ದೇಶದಲ್ಲಿ ಇತ್ತೀಚಿನ ದಿನದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಇದರಿಂದ ಪರಿಸರ ಮಾಲಿನ್ಯವೂ ಸಹಾ ಹೆಚ್ಚಾಗಿದೆ. ಪರಿಸರ ಸ್ನೇಹದಿಂದ ಎಲ್ಲವನ್ನು ನಾವು ಪಡೆಯಬಹುದಾಗಿದೆ. ಮಳೆಯಿಂದ ಬಿದ್ದ ನೀರನ್ನು ಹರಿಯಲು ಬಿಡದೇ ಅದರ ಸಂಗ್ರಹಣೆ ಮಾಡುವುದರ ಮೂಲಕ ಉಪಯೋಗ ಮಾಡಬೇಕಿದೆ. ಇದರೊಂದಿಗೆ ಸೋಲಾರ ಬಳಕೆ ಮಾಡುವುದರ ಮೂಲಕ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ. ಇದಲ್ಲದೆ ಪ್ಲಾಸ್ಟಿಕ್ ಬಳಕೆಯನ್ನು  ಸರ್ಕಾರ ನಿಷೇಧಿಸಿದೆ ಇದರ ಬಗ್ಗೆಯೂ ಸಹಾ ನಾವುಗಳು ಗಮನ ನೀಡಬೇಕಿದೆ.

ಮನೆಯಲ್ಲಿ ಕಸವನ್ನು ನೀಡುವಾಗ ಒಣ ಮತ್ತು ಕಸಿ ಎಂದು ಬೇರೆ ಮಾಡುವುದರ ಮೂಲಕ ವಿಂಗಡಿಸಿ ಕಸದವರಿಗೆ ನೀಡಿ, ಅನುಪಯುಕ್ತವಾದ ಎಲೆಕ್ಟಾನಿಕ್ ವಸ್ತುಗಳನ್ನು ಎಲ್ಲಿ ಅದರೆ ಅಲ್ಲಿ ಬಿಸಾಡಬೇಡಿ, ಇದರಿಂದ ಪರಿಸರ ಹಾಳಾಗುತ್ತದೆ ಎಂದು ಪ್ರಕಾಶ್ ತಿಳಿಸಿದರು.
ಇತ್ತೀಚಿನ ದಿನದಲ್ಲಿ ದೇಶದಲ್ಲಿ ಎಲೆಕ್ರ್ಟಾನಿಕ್ ಅನುಪಯುಕ್ತವಾದ ವಸ್ತುಗಳು ಹೆಚ್ಚಾಗುತ್ತಿದೆ. ಇದರಿಂದ 13 ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗಲಿದೆ.

ರಾಜ್ಯದಲ್ಲಿಯೂ ಸಹಾ ಈ ರೀತಿಯಾದ ಅನುಪಯುಕ್ತವಾದ ವಸ್ತುಗಳು ಹೆಚ್ಚಾಗಿದ್ದು, ಇದರ ಪುನರ್ ಬಳಕೆ ಮಾಡಲು ರಾಜ್ಯದಲ್ಲಿ 70 ಯೂನಿಟ್‍ಗಳಿವೆ, ಪಟಾಕಿಯನ್ನು ಸುಡುವುದರಿಂದ ನಮೆಗ ಯಾವುದೇ ರೀತಿಯ ಸಂತೋಷ ಸಿಗುವುದಿಲ್ಲ, ಇದರ ಬದಲಾಗಿ ಹಣ, ಪರಿಸರ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯವಾಗಲಿದೆ ಇದರಿಂದ ಈ ಬಾರಿ ದೀಪಾವಳಿಯನ್ನು ಬರೀ ಮಣ್ಣಿನ ದೀಪಗಳನ್ನು ಹಚ್ಚುವುದರ ಮೂಲಕ ಆಚರಣೆಯನ್ನು ಮಾಡುವಂತೆ ಮಕ್ಕಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ಪರಿಸರ ಆಧಿಕಾರಿ ರಾಜೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ನಾಜಿಮ ಸ್ವಾಲೇಹಾ ಪೌಢಶಾಲೆ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ, ಕಲಾ ಚೈತನ್ಯ ಸೇವಾ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಈ ಭಾರಿ ದೀಪಾವಳಿಯನ್ನು ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಣೆ ಮಾಡುವುದಾಗಿ ಮಕ್ಕಳಿಂದ ಪ್ರತಿಜ್ಞೆಯನ್ನು ಮಾಡಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಲೋಕಾಯುಕ್ತ ಬಲೆಗೆ ಬಿದ್ದ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ

ಸುದ್ದಿಒನ್, ಚಿತ್ರದುರ್ಗ, ಮೇ. 06  : ಗುತ್ತಿಗೆದಾರನ  ಕಾಮಗಾರಿ ಬಿಲ್ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿತ್ರದುರ್ಗ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ

ಕರ್ನಾಟಕದಲ್ಲಿಯೇ ತೀರ್ಥಹಳ್ಳಿಯಲ್ಲಿ ಬೆಳೆಯುವ ಅಡಿಕೆ ಬೆಸ್ಟ್ : ಸಂಶೋಧನೆಯಲ್ಲಿ ಬಯಲಾಯ್ತು ಸತ್ಯ

  ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಆದರೆ ರಾಜ್ಯದೆಲ್ಲೆಡೆ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯಲ್ಲೂ ಅಡಿಕೆ ತೋಟವನ್ನು ಮಾಡಿರುತ್ತಾರೆ. ಆದರೆ ಅಡಿಕೆಯ ಗುಣಮಟ್ಟದ ವಿಚಾರಕ್ಕೆ ಬಂದರೆ ತೀರ್ಥಹಳ್ಳಿಯ ಅಡಿಕೆ ಉತ್ತಮ ಎನ್ನಲಾಗುತ್ತದೆ. ಕೃಷಿ

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..!

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..! ಬಂಗಾರ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬಂಗಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರಿಗೂ ಆಸೆ‌. ಆದರೆ ಇತ್ತಿಚಿನ ದಿನಗಳಲ್ಲಿ ಬಂಗಾರವನ್ನು ಮಧ್ಯಮವರ್ಗದವರು ಮುಟ್ಟುವುದಕ್ಕಾದರೂ ಸಾಧ್ಯವ..?

error: Content is protected !!