ಚಿಕಿತ್ಸೆ ನೀಡಿದರು ಹರೀಶ್ ರಾಯ್ ಸಾವನ್ನಪ್ಪಲು ಕಾರಣವೇನು..? ವೈದ್ಯರಿಂದ ಸ್ಪಷ್ಟನೆ

1 Min Read

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಪೋಷಕ ಪಾತ್ರ, ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಹರೀಶ್ ರಾಯ್ ಇಂದು ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರಿಗೆ ಸಿನಿಮಾ ರಂಗದ ಹಲವು ಗಣ್ಯರು ಸಹಾಯ ಹಸ್ತ ಚಾಚಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಆ ಬಗ್ಗೆ ವೈದ್ಯರು ಮಾತನಾಡಿದ್ದಾರೆ.

ಹರೀಶ್ ರಾಯ್ ಗೆ ಚಿಕಿತ್ಸೆ ನೀಡಿದ ಡಾಕ್ಟರ್ ಸುರೇಶ್ ಬಾಬು ಮಾತನಾಡುತ್ತಾ, ಮೂರು ವರ್ಷಗಳ ಹಿಂದೆ ಹರೀಶ್ ರಾಯ್ ಅವರು ನಮ್ಮ ಬಳಿ ಬಂದಾಗ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಆಗಿತ್ತು. ಆಗಲೇ ಅದು ಶ್ವಾಸಕೋಶಕ್ಕೆ ಹರಡಿತ್ತು. ಆಗ ಅವರಿಗೆ ಕ್ಯಾನ್ಸರ್ ಕೊನೇ ಹಂತದಲ್ಲಿ ಇತ್ತು. ಫೈನಲ್ ಹಂತದಲ್ಲಿರುವಾಗ ಚಿಕಿತ್ಸೆ ನೀಡಿದರು ಕ್ಯಾನ್ಸರ್ ಗುಣಮುಖವಾಗುವುದು ಕಷ್ಟ. ಮೂರು ವರ್ಷದ ಹಿಂದೆ ಅವರಿಗೆ ಟಾರ್ಗೆಟೆಡ್ ಥೆರಪಿ ಶುರು ಮಾಡಿದ್ದೆವು. ಆರಂಭದಲ್ಲಿ ಚಿಕಿತ್ಸೆಗೆ ಹರೀಶ್ ರಾಯ್ ಅವರು ಚೆನ್ನಾಗಿಯೇ ಸ್ಪಂದಿಸುತ್ತಿದ್ದರು. ಒಂದೂವರೆ ವರ್ಷದ ತನಕ ಕಾಯಿಲೆ ನಿಯಂತ್ರಣದಲ್ಲಿತ್ತು. ಎರಡನೇ ಟಾರ್ಗೆಟೆಡ್ ಥರಪಿ ನೀಡಿದೆವು.

ಆ ಥೆರಪಿಗೂ ಸುಮಾರು ಒಂದೂವರೆ ವರ್ಷದ ತನಕ ಅವರು ಸ್ಪಂದಿಸಿದರು. ಆ ಬಳಿಕ ಇಮ್ಯೂನೋ ಥೆರಪಿ ಎಂಬ ಇಂಜೆಕ್ಷನ್ ಪ್ರಯತ್ನಿಸಿದೆವು. ದುರಾದೃಷ್ಟವಶಾತ್ ಇಮ್ಯುನೋ ಥೆರಪಿಗೆ ಅವರು ಅಷ್ಟು ಚೆನ್ನಾಗಿ ಸ್ಪಂದಿಸಲಿಲ್ಲ. ಥೈರಾಯ್ಡ್ ಗೆ ಇದ್ದ ಎಲ್ಲಾ ಆಯ್ಕೆಗಳನ್ನು ನಾವೂ ಮುಗಿಸಿದ್ದೆವು. ಕಳೆದ ಒಂದು ತಿಂಗಳಿನಿಂದ ಅವರ ಆರೊಇಗ್ಯ ಹದಗೆಟ್ಟಿತ್ತು. ಅವರು ತುಂಬಾ ಪಾಸಿಟಿವ್ ಮನೋಭಾವ ಇರುವ ವ್ಯಕ್ಯಿ ಆಗಿದ್ದರು. ಓಪಿಡಿ ರೋಗಿಗಳಿಗೆ ಅವರೇ ಸ್ಪೂರ್ತಿ ತುಂಬುತ್ತಿದ್ದರು. ಮೂರು ವರ್ಷದ ಹಿಂದೆ ಅವರು ಬಂದಾಗ ಇಷ್ಟು ದಿನ ಬದುಕುತ್ತಾರೆ ಎಂದು ನಂಬಿಕೆ ಇರಲಿಲ್ಲ. ಅವರಲ್ಲಿದ್ದ ಪಾಸಿಟುವ್ ಎನರ್ಜಿಯೇ ಅವರನ್ನು ಬದುಕಿಸಿದೆ ಎಂದಿದ್ದಾರೆ.

 

ರೈತರು ಬಿ.ಜೆ.ಪಿ. ಯವರ ಮರಳು ಮಾತುಗಳಿಗೆ ಬಲಿಯಾಗಬಾರದು: ಸಿಎಂ ಸಿದ್ದರಾಮಯ್ಯ

Share This Article