ದೆಹಲಿ: ನಿನ್ನೆಯಷ್ಟೇ ಡಿಕೆ ಶಿವಕುಮಾರ್ ತಾತನಾದ ಖುಷಿಯಲ್ಲಿದ್ದಾರೆ. ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಸಿಎಂ ಆಕಾಂಕ್ಷಿಯ ಹಂಬಲದಲ್ಲಿರುವ ಡಿಕೆಶಿ ಇದೀಗ ಪ್ರಿಯಾಂಕ ಗಾಂಧಿ ಭೇಟಿ ಮಾಡಲು ಹೊರಟಿದ್ದಾರೆ. ಬಹಳ ತಿಂಗಳಿನಿಂದಲೂ ಸಿಎಂ ಬದಲಾವಣೆಯ ಚರ್ಚೆ ನಡೆಯುತ್ತಲೆ ಇದೆ. ಈ ಸಂಬಂಧ ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ಡಿಕೆ ಶಿವಕುಮಾರ್ ಭೇಟಿ ಕುತೂಹಲ ಕೆರಳಿಸಿದೆ.
ಅಸ್ಸಾಂಗೆ ಡಿಕೆ ಶಿವಕುಮಾರ್ ಹೋಗಿದ್ದು, ಪ್ರಿಯಾಂಕ ಅವರನ್ನು ಭೇಟಿ ಮಾಡಲಿದ್ದಾರೆ. ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ನಿರೀಕ್ಷೆಯನ್ನು ತಿಳಿಸಿದ್ದಾರೆ. ಒಮ್ಮೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಆಗಲೂ ಸಿಎಂ ಬದಲಾವಣೆಯ ವಿಚಾರ ಚರ್ಚೆಯಾಗಿದೆ. ಆದರೆ ಯಾವುದು ಕಾರ್ಯರೂಪಕ್ಕೆ ಬರ್ತಾ ಇಲ್ಲ. ಡಿಕೆ ಶಿವಕುಮಾರ್ ಅವರ ಪರವಾಗಿ ಹೈಕಮಾಂಡ್ ನಲ್ಲಿ ಹೆಚ್ಚು ಅನುಕಂಪ ಇರುವುದು ಪ್ರಿಯಾಂಕ ವಾದ್ರಾ ಅವರಿಗೆ. ಅವರ ಮೂಲಕ ಏನಾದ್ರೂ ಡಿಕೆ ಶಿವಕುಮಾರ್ ಅವರ ಆಸೆ ಈಡೇರುತ್ತದಾ ಎಂಬುದನ್ನು ನೋಡಬೇಕಾಗಿದೆ.

ಯಾಕಂದ್ರೆ ಪಂಚ ರಾಜ್ಯ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಅಸ್ಸಾಂ ಜವಬ್ದಾರಿಯನ್ನ ನೀಡಲಾಗಿತ್ತು. ಪ್ರಿಯಾಂಕ್ ಗಾಂಧಿ ವಾದ್ರಾ ಅವರು ಕೂಡ ಅಲ್ಲಿನ ಉಸ್ತುವಾರಿಯಾಗಿದ್ದರು. ಹೀಗಾಗಿ ಪದೇ ಪದೇ ಭೇಟಿಯಾಗ್ತಾ ಇತ್ತು. ಅಸ್ಸಾಂ ನಲ್ಲಿ ಚುನಾವಣೆ ಎದುರಿಸಿರುವ ಅಭ್ಯರ್ಥಿಗಳ ಜೊತೆಗೆ ಇಂದು ಒಂದು ಭೋಜನಕೂಟದ ವ್ಯವಸ್ಥೆ ಮಾಡಲಾಗಿದೆ. ಆ ಭೋಜನಕೂಟದಲ್ಲಿ ಪ್ರಿಯಾಂಕ ಜೊತೆಗೆ ಡಿಕೆಶಿ ಕೂಡ ಭಾಗಿಯಾಗ್ತಾ ಇದ್ದಾರೆ. ಇದೊಂದು ಒಳ್ಳೆಯ ವೇದಿಕೆಯಾಗಲಿದ್ದು, ಪ್ರಿಯಾಂಕ ಕಡೆಯಿಂದ ಸಿಎಂ ಕುರ್ಚಿಯ ಬೇಡಿಕೆಯನ್ನ ಇಡುತ್ತಾರಾ..? ಡಿಕೆ ಶಿವಕುಮಾರ್ ಕನಸಿಗೆ ಪ್ರಿಯಾಂಕ ಗಾಂಧಿ ಅವರು ಅಸ್ತು ಅಂತಾರಾ ಎಂಬ ಕುತೂಹಲ ರಾಜ್ಯದ ಜನತೆಯಲ್ಲಿ ಇದೆ.


















