ಸುದ್ದಿಒನ್,ಬೆಂಗಳೂರು,ಮೇ.14: ನಗರದಲ್ಲಿ ಆಸ್ತಿ ಹೊಂದಿರುವ ಸಾವಿರಾರು ಜನರಿಗೆ ರಾಜ್ಯ ಸರ್ಕಾರವು ಮಹತ್ವದ ವರದಾನವೊಂದನ್ನು ಘೋಷಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತಾವನ್ನಾಗಿ ಪರಿವರ್ತಿಸಿಕೊಳ್ಳಲು ಇಚ್ಛಿಸುವವರಿಗೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಬೃಹತ್ ರಿಯಾಯಿತಿ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಆಸ್ತಿಯ ಮಾರ್ಗಸೂಚಿ ಮೌಲ್ಯದ (Guideline Value) ಶೇ. 5 ರಷ್ಟು ಹಣವನ್ನು ಪಾವತಿಸಬೇಕಿತ್ತು. ಈಗ ಅದನ್ನು ಶೇ. 2 ಕ್ಕೆ ಇಳಿಸಲಾಗಿದೆ. ಆಸ್ತಿ ಮಾಲೀಕರಿಗೆ ನೇರವಾಗಿ ಶೇ. 3 ರಷ್ಟು ಹಣ ಉಳಿತಾಯವಾಗಲಿದೆ. ಈ ಪ್ರಕ್ರಿಯೆಯಿಂದಾಗಿ ಸಾವಿರಾರು ಅನಧಿಕೃತ ಆಸ್ತಿಗಳು ಅಧಿಕೃತವಾಗಿ ‘ಎ’ ಖಾತಾ ಪಡೆಯಲು ದಾರಿ ಸುಗಮವಾಗಲಿದೆ. ಇದನ್ನು ಸರ್ಕಾರದ ‘6ನೇ ಗ್ಯಾರಂಟಿ’ ಅಥವಾ ‘ಭೂ ಗ್ಯಾರಂಟಿ’ ಎಂದು ಅವರು ಬಣ್ಣಿಸಿದ್ದಾರೆ.
ಬೆಂಗಳೂರಿನ ಸಾಮಾನ್ಯ ಜನರ ಹಿತದೃಷ್ಟಿಯಿಂದ ನಾವು ಈ ನಿರ್ಧಾರ ತಂದಿದ್ದೇವೆ. ಇದು ಕೇವಲ ರಿಯಾಯಿತಿಯಲ್ಲ, ಇದು ನಾವು ನೀಡುತ್ತಿರುವ ‘ಭೂ ಗ್ಯಾರಂಟಿ’. ಇದರಿಂದ ಸಾವಿರಾರು ಕುಟುಂಬಗಳಿಗೆ ಆಸ್ತಿಯ ಹಕ್ಕು ಮತ್ತು ನೆಮ್ಮದಿ ಸಿಗಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿರುವ ʼಬಿʼ ಖಾತಾ ಆಸ್ತಿಗಳನ್ನು ʼಎʼ ಖಾತಾವನ್ನಾಗಿ ಮಾಡಿಸಿಕೊಳ್ಳುವವರಿಗೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರ ಬದಲು ಶೇ.2ರಷ್ಟು ಹಣ ಪಾವತಿಸುವ ವಿಶೇಷ ರಿಯಾಯಿತಿ ದೊರೆಯಲಿದೆ. ಇದು ಸರ್ಕಾರದ 6ನೇ ಗ್ಯಾರಂಟಿ ʼಭೂ ಗ್ಯಾರಂಟಿ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. pic.twitter.com/6vBYH3Vabn
— DIPR Karnataka (@KarnatakaVarthe) May 14, 2026







